Significance of panchamruta abhisheka

Significance of panchamruta abhisheka

 Dasaparadhao toyena kshirena kshamate Satao sahasrao kshamate dadhna , grutena kshamatesyutao.

Madhuna kshamate lakshao ikshuna dasalakshakao narikelaobuna kotio anantao gandhavarina.
Skanda purana

The above sloka is written as ugabhoga by Purandara Dasaru in Kannada as follows:
Aparadha hattakke abisheka udaka
Aparadha nurakke kshira harige
Aparadha sahasrakke halu mosaru kano
Aparadha lakkshakke jenu^^
Aparadha hattu; lakshakke balupari kshira ll

Aparadha kshamege accha tengina halu.
Aparadha kotige svaccha jala
Aparadha ananta kshamege gandhodaka.
Upamerahita namma purandara vithalage
Santa manavayya santavakya.||


Kshira snanao prakurvita ye nara mama murdhani
Satasvamedhajao punyao bioduna smrutao

Bhagavan says “The one who performs Ksheerabhisheka(Milk) on my head, For every drop he will get punya of 100’s of Ashwamedha yaaga”

ಅವಿಧವಾ ನವಮೀ 

​” ಮಾತೃ ವಂದನಮ್ ”

ದಿನಾಂಕ : 24.09.2016 ಶನಿವಾರ ” ಅವಿಧವಾ ನವಮೀ “. ತನ್ನಿಮಿತ್ತ ಶ್ರೀ ವಾಯು ಪುರಾಣಾಂತರ್ಗತ ಶ್ರೀ ವೇದವ್ಯಾಸದೇವರು ಹೇಳಿದ ” ಮಾತೃ ವೈಭವಮ್ “.
” ಅಮ್ಮ ” ಎನ್ನುವ ಅಕ್ಷರದಲ್ಲಿ ” ಅಮೃತ ” ವಿದೆ.

” ಅಮ್ಮ ” ಎಂಬ ಎರಡಕ್ಷರದಲ್ಲಿ ಅಪ್ಯಾಯತೆ – ಅಂತಃಕರಣ – ವಾತ್ಸಲ್ಯ ತುಂಬಿದೆ.

” ಅಮ್ಮ ” ಅಂದರೆ…..

ಗಾಳಿಗೆ ಗೊತ್ತು.

ನಕ್ಷತ್ರಗಳಿಗೆ ಗೊತ್ತು.

ಆ ” ಚಂದಮಾಮ ” ಬಲ್ಲ.

ಧರೆ ಬಲ್ಲಳು.

ಪ್ರೀತಿ – ತ್ಯಾಗ – ಸಹನೆ – ಧೈರ್ಯ – ಕಳಕಳಿಯ ರೂಪ ಅವಳು.

ಸಂಪೂರ್ಣ ಸ್ತ್ರೀ ಆದಾಗ ತನ್ನನ್ನು ಮರೆಯುತ್ತಾಳೆ. ಬರುವ ಕಂದನನ್ನು ಮರೆತೂ ಮರೆಯಳು.

ಒಂದೊಂದು ಕ್ಷಣವನ್ನೂ ಅನುಭವಿಸುತ್ತಾಳೆ. ಕಲ್ಪನೆ – ಸ್ಪರ್ಶ – ನೋವುಗಳು ಒಟ್ಟೊಟ್ಟಿಗೆ ಒಂದು ಆ ಕೃತಿಯ ರಚನೆಯನ್ನು ಎಳೆ ಎಳೆಯಾಗಿ ಬಿಡಿಸಿಕೊಳ್ಳುತ್ತಾಳೆ. ಹೊಟ್ಟೆ ತುಂಬಿದ್ದರೂ ತುಸು ಹೆಚ್ಚಾಗಿಯೇ ಆಹಾರವನ್ನು ತೆಗೆದುಕೊಳ್ಳುತ್ತಾಳೆ. ಅಷ್ಟು ವರುಷ ತನಗಾಗಿ ತೋರದ ಕಾಳಜಿಯನ್ನು ಜೋಪಾನವಾಗಿ ಪ್ರಕಟಿಸುತ್ತಾಳೆ. ಬಾಳಿನಲ್ಲಿ ಬಂದು ಹೋದ ಕೆಲವೇ ಕೆಲವು ನೆನಪುಗಳನ್ನು ಆಹ್ವಾನಿಸಿಕೊಳ್ಳುತ್ತಾ ವಾಸ್ತವಿಕವಾಗಿ ಯಾವುದೇ ತೊಂದರೆ ಇದ್ದರೂ ಗಮನಿಸದೇ ಹಣನ್ಮುಖತೆಯೆಡೆಗೆ ಜಾರುತ್ತಾಳೆ.

ಎದ್ದಾಗ – ಬಿದ್ದಾಗ – ಒದ್ದಾಗ ಸದ್ದಾಗದಂತೆ ಅವಡುಗಚ್ಚುತ್ತಾಳೆ. ಮಗುವಿಗಾಗಿ ನಗುತ್ತಾಳೆ. ಸೃಷ್ಟಿಯಾದಾಗ ದೃಷ್ಟಿಸಿ ನೋಡುತ್ತಾ ಬಿಂಬ – ಪ್ರತಿಬಿಂಬ – ರೂಪ – ಅನುರೂಪಗಳ ಎಣಿಕೆಯ ಪ್ರಾಣಗಳನ್ನು ಕಣ್ಣಿನಲ್ಲಿ – ತುಟಿಯಲ್ಲಿ – ಕರಗಳಲ್ಲಿ – ಅಪ್ಪುಗೆಯಲ್ಲಿ – ಎದೆಯಲ್ಲಿ ತೋರುತ್ತಾಳೆ. ಹಗಲು – ರಾತ್ರಿ – ನಿದ್ದೆ – ಆಯಾಸಗಳು ಅಲ್ಲಿ ಇಲ್ಲ!

ಅಲ್ಲಿರುವುದು ಬರೀ ಪ್ರೀತಿ!!!

ತನಗಾಗಿ ಬಂದ ಮಗು ದೇವರು ಕೊಟ್ಟ ಹೂವು. ತಾಯ್ತನ ತುಂಬಿದ ಆ ಕಂದನನ್ನು ಎವೆಯಿಕ್ಕದೆ ಸಮಯದ ಪರಿವೆಯಿಲ್ಲದ ಕಣ್ತುಂಬಕೊಳ್ಳುತಾಳೆ..

ಆಕೆ ಅಮ್ಮ…….. !!

ಅಮ್ಮ ಮೊದಲೇ? ದೇವರು ಮೊದಲೇ?

ವೇದ ಹೇಳುತ್ತದೆ ಅಮ್ಮನೇ ದೇವರು!

ಆಕೆಗೆ ಮಗುವಿನ ನಾಡಿ ಮಿಡಿತ ಗೊತ್ತು. ಉಸಿರಿನ ವೇಗ ಕೊಂಬೆ ಬಲ್ಲದು. ಬಳ್ಳಿಗೆ ನೀರುಣಿಸುವಂತೆ ದೃಷ್ಟಿಯಾಗದಿರಲೆಂದು ಸೆರಗು ಮುಚ್ಚಿ ಅಮೃತ ಕುಡಿಸುತ್ತಾಳೆ. ಮಗು ನಿದ್ರಿಸುತ್ತೆ. ತಾಯಿಯಾ ಮನ – ತನು ಎಚ್ಚರವಿರುತ್ತೆ. ಮತ್ತೆ ಮತ್ತೆ ಏಳುತ್ತದೆ. ತಾಯಿ ಇಂಪಾದ ದನಿ; ತೂಗುವಾಗ ಮಧ್ಯದಲ್ಲಿ ಬೇಕಂತಲೇ ಅಳುವುದು. ಅಮ್ಮನ ಮೊಗ ಮತ್ತೆ ದಿಟ್ಟಿಸಲು ಆ ತಾಯಿಗೂ ಗೊತ್ತು ಮಗು ಆಟವಾಡುತ್ತಿದೆಯೆಂದು. ಆದರ ಜೊತೆ ಆ ಮಾತೃ ಹೃದಯವೂ ಆಟವಾಡುತ್ತದೆ.

ಮಧುರ ಸ್ವರ, ಹುಸಿ ಮುನಿಸು, ತೋರೆಗೊಡದ ನಗು ಇಬ್ಬರಿಗೂ ಬೇಕು. ಪ್ರಕೃತಿಯ ನಿಯಮದಂತೆ ಬೆಳೆಯುತ್ತದೆ. ಆದರೆ ಆ ತಾಯಿ ಅಲ್ಲಿಯೇ ನಿಲ್ಲುತ್ತಾಳೆ. ಕ್ರಮೇಣ ಮಾಡು ಮರೆತು ಬಿಡುತ್ತದೆ. ಗೆಳತಿ – ಸಂಗಾತಿ ದೊರೆತಾಗ ಅಮ್ಮನಿಂದ ಅದು ಬಹು ದೂರ.

ಮಾತೃ ಹೃದಯ ಮಮತೆಯಿಂದ ಮನದಲ್ಲಿ ಮಗುವಿಗೆ ಜೋಕಾಲಿ ತೂಗುತ್ತಲೇ ಇರುತ್ತಾಳೆ. ಅದು ನಿರಂತರ. ಅಂಥಹಾ ಕರುಣಾಮಯಿಯಾದ ತಾಯಿ ಋಣವನ್ನು ತೀರಿಸಲು ಅಸಾಧ್ಯ! ಆದುದರಿಂದ ಮುತ್ತೈದೆಯಾಗಿ ಮರಣ ಹೊಂದಿದ ತಾಯಿಗೆ ” ಅವಿಧವಾ ನವಮೀ ” ಯಂದೇ ಶ್ರಾದ್ಧ ಮಾಡಬೇಕು.

ಎಲ್ಲಿ ತಾಯಿಯ ಋಣದ ಪರಿಹಾರ ನೆನಿಸಿ 16 ಪಿಂಡಗಳನ್ನು ಇಡಲಾಗುತ್ತದೆಯೋ ಅದನ್ನು ನೆನೆಸಿಕೊಂಡಾಗ ಕರುಳು ಕಿವಿಚಿದಂತಾಗುತ್ತದೆ. ಕಲ್ಲೆದೆಯ ಮನಸ್ಸು ಕೂಡಾ ಕರಗುತ್ತದೆ. ನಿಮ್ಮ ತಂದೆ – ತಾಯಿಗಳು ನಿಮ್ಮನ್ನು ನೋಡಿಕೊಂಡಂತೆ ನೀವು ನಿಮ್ಮ ಮಕ್ಕಳನ್ನು ನೋಡಿಕೊಳ್ಳಲಾರಿರಿ. ಅವರು ತಮ್ಮ ಸುಖವನ್ನು ತ್ಯಾಗ ಮಾಡಿ ನಿಮಗೆ ಸುಖ ಕೊಟ್ಟರು. ಹೀಗಾಗಿ ಅರ್ಥ ತಿಳಿದು ಪಿಂಡ ಪ್ರದಾನ ಮಾಡಿ!!

ಶ್ರೀ ವೇದವ್ಯಾಸದೇವರು ” ವಾಯುಪುರಾಣ ” ದಲ್ಲಿ ಮಾತೃ ವೈಭವವನ್ನು ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ. ವಾಯುಪುರಾಣದಲ್ಲಿ ತಾಯಿಯ ಶ್ರೀ ವೇದವ್ಯಾಸದೇವರು ತಾಯಿಯ ವೈಭವವನ್ನು ಸಜ್ಜನರ ಮಾಹಿತಿಗಾಗಿ…

ಗರ್ಭೇ ಚ ವಿಷಮೇ ದುಃಖಂ ವಿಷಮೇ ಭೂಮಿವರ್ತ್ಮನಿ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧ ।।

ನಾನು ಗರ್ಭದಲ್ಲಿರುವುದರಿಂದ ನಿನಗೆಷ್ಟು ಕಷ್ಟವಾಯಿತು? ಅತಿಥಿಗಳು ಮನೆಗೆ ಬಂದರೇನೇ ಮನೆಯವರ ಸ್ವಾತಂತ್ರ್ಯ ಹೋಗುವುದು. ಹೀಗಿರುವಾಗ ೯ ತಿಂಗಳು ನಿನ್ನೊಳಗೆ ಬಂದುದರಿಂದ ನಿನ್ನ ದೇಹಕ್ಕೆ ಎಷ್ಟೊಂದು ವಿಕಾರವಾಯಿತು ಮತ್ತು ದುಃಖವಾಯಿತು.

ಊಟವಾದಾಗ ತಿಂದಿದ್ದೆಲ್ಲಾ ವಾಂತಿ, ಹೊಟ್ಟೆ ಹೊತ್ತು ಸಮಾರಂಭದಲ್ಲಿ ಭಾಗವಹಿಸಲು ಆಗಲಿಲ್ಲ. ಮನೆ – ಸಮಾರಂಭ – ಸಮಾಜದಲ್ಲಿ ಮುಜುಗರವಾದರೂ ನನಗಾಗಿ ಅದನ್ನು ಸಹಿಸಿಕೊಂಡಿರುವ ನಿನಗೆ ನಮನ!

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಯಾವತ್ಪುತ್ರೋ ನ ಭವತಿ ತಾವನ್ಮಾತುಶ್ಚ ಶೋಚನಮ್ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೨ ।।

ಗರ್ಭದಲ್ಲಿ ನಾನು ಹೊರಗೆ ಬರುವ ತನಕ ನಿನಗಾದ ಶೋಕಕ್ಕೆ ಕೊನೆಯಿಲ್ಲ. ಸಿಕ್ಕಾಪಟ್ಟಿ ತಿರುಗಾಡಲಾಗದು. ಮಗುವಿಗೆ ಏನಾದೀತೋ ಎಂಬ ಭಯ. ಅಡ್ಡಾದಿಡ್ಡಿಯಾಗಿ ಬಂದರಂತೂ ನನಗಾಗಿ ನಿನ್ನ ಪ್ರಾಣವೇ ಹೋದರೆ ಎಂಬ ಭಯ ಬೇರೇ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಶೈಥಿಲ್ಯೇ ಪ್ರಸವೈ: ಪ್ರಾಪ್ತೆ ಮಾತಾ ವಿಂದಂತಿ ತತ್ಕೃತಂ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೩ ।।

ತಾಯಿಯಾದ್ದರಿಂದ ನಿನ್ನ ದೇಹ ಸೌಷ್ಠವ ಹಾಳಾಗುತ್ತದೆ. ಹಾಳಾದರಾಗಲಿ ಮಗು ಮುದ್ದಾಗಿರಬೇಕು ಎಂದು ನನಗಾಗಿ ನಿನ್ನ ತ್ಯಾಗ ಎಷ್ಟು ದೊಡ್ಡದು. ನಾನು ಇದ್ದುದ್ದು ೯ ತಿಂಗಳು. ನೀ ಒದ್ದಾಡಿದ್ದು ಅದಕ್ಕಾಗಿ ಜೀವನ ಪರ್ಯಂತ!

ಪ್ರೇಮಮಯಿಯೇ ಆದರೂ ನನ್ನನ್ನು ನೀನು ನಲಿವಿನಿಂದ ಕಾಪಾಡಿದೆ!

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಸಂಪೂರ್ಣೇ ದಶಮೇ ಮಾಸೀ ಮಾತಾ ಕ್ರಂದಂತಿ ದುಷ್ಕೃತಂ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೪ ।।

ತಿಂಗಳು ತುಂಬಿದಂತೆ ನಾನಂತೂ ಗರ್ಭದಲ್ಲಿ ಬೆಳೆಯುತ್ತಿದ್ದೆ. ನಿನ್ನ ಚಿಂತೆ, ಯೋಚನೆ ದುಪ್ಪಟ್ಟು ಬೆಳೆಯುತ್ತಿತ್ತು. ನೀನು ಆಗ ಯಾರ ಬಳಿ ಹೇಳಿಕೊಳ್ಳದೆ ಒಳಗೊಳಗೆ ಅತ್ತೆ. ನಾನು ಸತ್ತರೂ ಸರಿ ಮಗು ಬದುಕಿದರೆ ಸಾಕು ಎಂದುಕೊಂಡಿ

ಅಮ್ಮಾ! ಆ ನಿನ್ನ ತ್ಯಾಗಕ್ಕೆ ನಾನೇನು ನೀಡಲಿ!

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ದಿವಾ ರಾತ್ರೌ ಚ ಯಾ ಮಾತಾ ಸ್ತನಂ ದತ್ವಾ ಚ ಪಾಲಿತಾ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೫ ।।

ಹಗಲೂ ರಾತ್ರಿ ಹಾಲಿಗಾಗಿ ಅತ್ತೆ. ನಿನ್ನ ಸವಿ ನಿದ್ದೆ ಧ್ವಂಸವಾಯಿತು. ಆದರೂ ನನಗೆ ಹಾಲು ನೀಡಿ ನನ್ನ ಓಲೈಸಿದೆ. ನಿನ್ನ ನಿದ್ದೆ ಹಾಳಾದರೂ ನಾನು ಮತ್ತೆ ಮಲಗಿದ್ದ ಕಂಡು ಒಳಗೊಳಗೇ ಖುಷಿ ಪಟ್ಟೆ! ಅಮ್ಮಾ ನಿನ್ನ ಋಣಕ್ಕೆ ಸರಿಸಾಟಿ ಏನಿದೆ?

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಅಗ್ನಿನಾ ಶೋಚ್ಯತೇ ದೇಹೇ ತ್ರಿರಾತ್ರೋ ಪೋಷಣೇನ ಚ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೬ ।।

ನಾನು ಹಾಲು ಕುಡಿದಾಗ ಶೀತ ಹೋಗಿ ನಿನ್ನ ದೇಹವೇ ಉಷ್ಣವಾಗುತ್ತಿತ್ತು. ಆದರೂ ನೀನು ಹಾಲು ಕುಡಿಸುವುದು ನಿಲ್ಲಿಸಲಿಲ್ಲ. ದೇಹ ಬಿಸಿ ಕಾಪಾಡಿ ಬಿಸಿ ಬಿಸಿ ಹಾಲು ಕೊಟ್ಟೆ. ಆದರೆ ಈಗ ನಾನು ಅದನ್ನು ನೆನಿಪಿಸಿ ಋಣ ಪರಿಹಾರಕ್ಕಾಗಿ ಪಿಂಡ ಪ್ರದಾನ ಮಾಡುತ್ತಿರುವೆ ಅಮ್ಮಾ!

ರಾತ್ರೌ ಮೂತ್ರ ಪರೀಷಾಭ್ಯಾ೦ ಭಿದ್ಯತೇ ಮಾತೃಕರ್ಪಟೈ: ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೭ ।।

ರಾತ್ರಿ ಮಲ ಮೂತ್ರ ವಿಸರ್ಜಿಸಿ ಅತ್ತೆ. ಆಗ ನಿನ್ನ ನಿದ್ದೆ ಹಾಳಾಯಿತು. ಹಾಸಿಗೆಯೆಲ್ಲಾ ಒದ್ದೆ. ದುರ್ಗಂಧ ಮುಜುಗರ ಎಲ್ಲಾ ನಿನಗೆ ತಂದೆ. ಕಸ ಮಾಡಿದ ನನ್ನನ್ನು ನೀನು ತಳ್ಳದೇ ಎತ್ತಿಕೊಂಡೆ. ಅಸಹ್ಯ ಮಾಡಿದ ನನ್ನನ್ನು ಎತ್ತಿಕೊಂಡೆ. ತೊಡೆ ಏರಿದ ನಾನು ನಿನ್ನ ಸೀರೆಯನ್ನೆಲ್ಲಾ ತೋಯಿಸಿದೆ. ಆದರೆ ನೀನು ಬೇಸರ ಮಾಡಿಕೊಳ್ಳದೆ ನನ್ನ ಬೆಚ್ಚಿಗಿಟ್ಟೆ. ಇದು ನಿನ್ನ ದಿನಗಟ್ಟಲೆಯಲ್ಲ! ವರ್ಷಗಟ್ಟಲೆ ನನಗೆ ಹರ್ಷ ತಂದು ಕೊಟ್ಟೆ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ.

ಮಾಸಿ ಮಾಸಿ ವಿದಾಘೇ ಚ ಶರೀರ ತಾಪ ದುಃಖಿತಾ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೮ ।।

ಚಳಿ, ಬಿಸಿಲು, ಮಳೆ, ಗಾಳಿಯಿಂದ ಋತು ಬದಲಾದಂತೆ ನನ್ನ ಆರೋಗ್ಯ ಏರು ಪೇರಾಯಿತು ಆದರೂ ನನ್ನನ್ನು ಹೆಗಲೇರಿಸಿ ಕೊಳ್ಳುವುದನ್ನು ನೀನು ಬಿಡಲಿಲ್ಲ. ನಿನಗೆ ಜ್ವರ ಬಂದರೂ ನನ್ನನ್ನು ಜೋಪಾನ ಮಾಡಿದೆ. ಚಳಿ ಆದರೂ ನೀನು ನನ್ನ ಬಳಿಯೇ ಇದ್ದೆ.

ಅಮ್ಮಾ! ನನಗಾಗಿ ನೀನು ನರಳಿದೆ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಗಾತ್ರಭಂಗೋ ಭವೇನ್ಮಾತು: ಘೋರ ಬಾಧೇ ಪ್ರಪೀಡಿತೇ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೯ ।।

ನಾನು ನಿನಗೆಷ್ಟು ಬಾರಿ ತುಂಟತನ ಮಾಡಿಲ್ಲ. ನಾನೇನೋ ನಿನ್ನ ದೇಹದ ಮೇಲೆ ಕಾಲಿನಿಂದ ನಲಿದೆ. ನನಗೆ ನಲಿವು. ನಿನಗೆ ನೋವು. ಆದರೂ ನೀನು ನನ್ನನ್ನು ಕೆಳಗಿಳಿಸಲಿಲ್ಲ. ಬದಿಗಿಡಲಿಲ್ಲ. ಬಾಧೆ ಬಂದರೂ ಸಹ ಪೀಡೆಯಾದರೂ ಸಹಾ ಪ್ರೀತಿಸಿದೆ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಪಾದಾಭ್ಯಾ೦ ಜನಯೇತ್ಪುತ್ರೋ ಜನನೀ ಪರಿವೇದನಮ್ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೦ ।।

ಗರ್ಭದಲ್ಲಿದ್ದಾಗ ನಿನಗೆ ಒದ್ದೆ. ಮಗುವಾಗಿದ್ದಾಗ ಕಾಲಿಂದ ಜಾಡಿಸಿದೆ. ಬೆಳೆದ ನಂತರವೂ ನಿನಗೆ ಕಾಲು ತೋರಿಸಿದ್ದುಂಟು. ನೀ ಮಾಡಿದ್ದೆಲ್ಲಾ ಕಾಲು ಕಸ ಎಂದು ಕಡೆಗಾಣಿಸಿದೆ. ಕಾಲಿಂದ ನಿನಗೆ ಕೊನೆಗಾಣದ ಕಂಬನಿ ನೀಡಿದೆ. ಅಮ್ಮಾ ನನ್ನ ತುಂಟತನದಿಂದ ನಿನ್ನನ್ನು ಗೋಳಾಡಿಸಲಿಲ್ಲವೇ?

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಅಲ್ಪಾಹಾರಗತಾ ಮಾತಾ ಯಾವತ್ಪುತ್ರೋsಸ್ತಿ ಬಾಲಕಃ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೧ ।।

ಅಂದು ನಾನು ಮಲಗಿದ್ದಾಗ ನನಗಾಗಿ ನಿನ್ನ ಊಟದ ಸಮಯ ಎಷ್ಟು ಬಾರಿ ಮುಂದೆ ಹೋಗಿಲ್ಲವೇ? ತೊಡೆಯ ಮೇಲೆ ಮಲಗಿಕೊಂಡಾಗ ನಿನ್ನ ಊಟಕ್ಕೆ ಅಡ್ಡಿಯಾಗಲಿಲ್ಲವೇ? ಊಟದ ವೇಳೆಯಲ್ಲಿ ಮಲ ವಿಸರ್ಜನೆ ಮಾಡಿ ನಿನಗೆ ಮುಜುಗರ ಮಾಡಲಿಲ್ಲವೇ?

ಬಡತನದಲ್ಲಿ ನನಗಾಗಿ ಊಟ ಮಾಡದೇ ನೀನು ಉಪವಾಸ ಮಲಗಿರಬಹುದು. ಮತ್ತಾರು ಅಡಿಗೆ ಮಾಡುವವರು ಎಂದು ಹಾಗೆಯೇ ಮಲಗಿರಬಹುದು. ಊಟದ ವೇಳೆ ರಂಪ ಮಾಡಿ ಎಷ್ಟು ಬಾರಿ ನಿನ್ನ ಊಟ ತಪ್ಪಿಸಲಿಲ್ಲ?

ಅಂತೂ ಅಲ್ಪನಾದ ನನ್ನಿಂದ ನಿನ್ನ ಆಹಾರ ಸ್ವಲ್ಪವಾಯಿತು. ನೆನಿಸಿಕೊಂಡಾಗ ಮನಸ್ಸು ಸಂಕೋಚದ ಮುದ್ದೆಯಾಗುವುದು.

ಅದರ ಮುಂದೆ ಪಿಂಡ ರೂಪವಾದ ಅನ್ನದ ಮುದ್ದೆ ಕೇವಲ ಸಾಂಕೇತಿಕ ಅಲ್ಲವೇ?

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಪಿಬಂತಿ ಕಟುಕ ದ್ರವ್ಯ೦ ಮಾತಾ ಯಸ್ಯ ಹಿತಾಯ ಚ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೨ ।।

ಬೇಗ ಪ್ರಸವವಾಗಲೀ ಎಂದು ಕಹಿಯ ” ಜೀರಿಗೆ ಕಷಾಯ ” ಕುಡಿದೆ. ಮಗುವಿಗೆ ನೆಗಡಿಯಾಗದಿರಲಿ ಎಂದು ” ಮೆಣಸಿನ ಸಾರು ” ನೀ ಕುಡಿದೆ. ಮಗುವಿಗೆ ಆರೋಗ್ಯವಿರಲಿ ಎಂದು ತಲೆಗೆಲ್ಲಾ ಸುತ್ತಿಕೊಂಡು ಒದ್ದಾಗಿದೆ.

ನಾನು ಬರುವ ತನಕ ನಿನಗೆ ಬಂಧನ. ಬಂದ ಮೇಲೆ ಆಹಾರ ನಿಬಂಧನ. ಆದರೂ ತಪ್ಪಲಿಲ್ಲ ನಿನ್ನ ಪ್ರೀತಿಯ ಬಾಹು ಬಂಧನ. ಎರಡೂ ಕೈಯಿಂದ ಎರಡು ಮಾತಾಡದೇ ಮಾಡಿರುವ ಸೇವೆಗೆ ಒಂದೇ ಕೈಯಿಂದ ಪಿಂಡ ಪ್ರದಾನ ಮಾಡುವುದು ನಿಜವಾಗಲೂ ಋಣ ತೀರಿಸಲು ಅಲ್ಲ! ಕರ್ತವ್ಯದ ಸಂಕೇತಕ್ಕಾಗಿ! ನನಗಾಗಿ ನೀನು ಔಷಧ ಕುಡಿದೆ. ನಿದ್ದೆ ಗೆಟ್ಟು ನೀನು ಒದ್ದಾಡಿದೆ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಪುತ್ರೋ ವ್ಯಾಧಿ ಸಮಾಯುಕ್ತೋ ಮಾತಾಕ್ರಂದನಕಾರಿಣೇ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೩ ।।

ನನಗೆ ರೋಗ ಬಂದಾಗ ಅತ್ತು ದೇವರಲ್ಲಿ ಬೇಡಿ ಔಷಧಿಗಾಗಿ ಅಲೆದಾಡಿ ರಾತ್ರಿ ನಿದ್ದೆ ಗೆಟ್ಟಿದ್ದು ನೀನು. ನಾನು ಅಳುವುದಕ್ಕೆ ಮೊದಲು ನೀನು ಅತ್ತೆ. ತಿಳುವಳಿಕೆಯಿಲ್ಲದ ನನಗಾಗಿ ನೀನು ಅಷ್ಟು ಮಾಡಿರುವಾಗ ಈಗ ನಾನು ನಿನಗೆ ಏನು ಕೊಡಲಿ?

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಮಾಸೇ ಮಾಸೇ ಕೃತಂ ಕಷ್ಟ೦ ವೇದನಾ ಪ್ರಸವೇಷು ಚ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೪ ।।

ತಿಂಗಳು ಉರುಳುತ್ತಿದ್ದಂತೆ ನಿನ್ನ ಮುಜುಗರ ಹೆಚ್ಚಾಯಿತು. ಮಗು ಬರುವ ತನಕ ಹೆಜ್ಜೆ ಹೆಜ್ಜೆಗೂ ಗಾಬರಿ. ಬರುವ ದಿನ ಬದುಕುವುದೇ ಕಷ್ಟ. ತಾಯಿಯಾದ ನೀನು ಸತ್ತರೂ ಪರವಾಗಿಲ್ಲ ಮಗು ಬದುಕಿದರೆ ಸಾಕು ಎಂದು ಒದ್ದಾಡಿದವಳು ನೀನು.

ನಾನು ಬಂದ ಮೇಲೆ ನಿನಗೆ ಎತ್ತಿಕೊಳ್ಳುವ ಭಾರ. ನನಗಾಗಿ ಮೆಲ್ಲಗೆ ನಡೆಯುವ ದಾಕ್ಷಿಣ್ಯ. ಬೆಳೆಯುವಾಗ ನನ್ನನ್ನು ಬೆಳೆಸಲು ನೀನು ಒಳವೊಳಗೆ ಒದ್ದಾಡಿದ್ದು.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಯಮದ್ವಾರೇ ಪಥೇ ಘೋರೇ ಮಾತುಶ್ಚ ಶೋಚನಮ್ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೫ ।।

ನನಗಾಗಿ ನೀನು ಎಷ್ಟು ಕಷ್ಟ ಅನುಭವಿಸಿಲ್ಲ? ಸಾಯುವಾಗ ನಿನಗೆ ಎಂಥಾ ವೇದನೆ ಆಗಿರಬಹುದು? ಆಗ ನಾನು ಬಲಿಯಲ್ಲಿರಲಿಲ್ಲ. ಇದ್ದರೂ ಏನು ಮಾಡಬೇಕೆಂದು ತೋಚಲಿಲ್ಲ.

ಬದುಕಿನಲ್ಲೂ, ಸಾವಿನಲ್ಲೂ ನೋವನ್ನುಂಡು, ನಲಿವು ತಂದ ನಲ್ಮೆಯ ತಾಯಿ ನೀನು. ನೀನು ದೂರವಾಗಿ ಯಮಲೋಕದ ದಾರಿಯಲ್ಲಿ ಮಕ್ಕಳೇನಾದರೂ ಮಾಡಿಯಾರೆಂದು ಮೂಟೆಯಷ್ಟು ಆಸೆ ಹೊತ್ತಿರಬಹುದು. ಮೂರ್ಖರಾದ ನಾವು ಈಗ ನೇಣಿಪಿಸಿಕೊಳ್ಳುತ್ತಿದ್ದೇವೆ.

ತಾಯಿ ಆಗ ಆದ ನಿರಾಶೆ ದುಃಖಗಳಿಗೆ ದುಡ್ಡು – ಮಾತು ಯಾವುದೂ ಪರಿಹಾರವಲ್ಲ. ನಾಚಿಕೆಯಿಂದ ಮನಸ್ಸು ಸಂಕೋಚದ ಮುದ್ದೆಯಾಗಿದೆ. ಕೈಹಿಸುಕಿ ಕೊಳ್ಳುವಷ್ಟು ಇಡೀ ಜೀವ ಹಿಡಿಯಾಗಿದೆ. ಹೀಗಾಗಿ ನಾನು ಕೈಯಿಂದ ಈ ಪಿಂಡವನ್ನು ಸಾಂಕೇತಿಕವಾಗಿ ನೀಡುತ್ತಿರುವೆ. ನನ್ನನ್ನು ಕ್ಷಮಿಸು!

ಮಾತೃ ಋಣದಿಂದ ಮೋಚನೆಗೊಳಿಸು. ಅಮ್ಮಾ! ದೇವರ ಸ್ಮರಣೆಯಿಂದ ನನ್ನ ಮಾನವ ಜನ್ಮ ಸಾರ್ಥಕವೆನಿಸು.

ಯಾವತ್ಪುತ್ರೋ ಗಯಾ೦ ಗತ್ವಾ ಶ್ರಾದ್ಧ೦ ಕುರ್ಯಾತ್ ವಿಧಾನತಃ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೬ ।।

ತಾಯಿಯಾದ ನಿನ್ನ ಮರಣದ ನಂತರ ಮಗನು ” ಮಾತೃ ಗಯಾ ” ಕ್ಕೆ ಹೋಗಿ ವಿಧಿ ವಿಧಾನ ಪೂರ್ವಕವಾಗಿ ಶ್ರಾದ್ಧ ಮಾಡುತ್ತಾನೆ ಎಂದು ಭಾರೀ ಆಸೆ ಹೊತ್ತುಕೊಂಡಿದ್ದಿ. ನಾನು ವಿಳಂಬವಾಗಿ ಈಗ ಅದನ್ನು ಪೂರಸುತ್ತಿರುವೆ.

ಅಮ್ಮಾ! ದೇವರ ಸ್ಮರಣೆಯಿಂದ ನನ್ನ ಮಾನವ ಜನ್ಮ ಸಾರ್ಥಕವೆನಿಸು. ಹತ್ತಾರು ಅಪರಾಧಗಳು ಅಳಿಸಲೆಂದು ೧೬ ಪಿಂಡಗಳನ್ನು ನಾ ನೀಡಿರುವೆ!!

ಇಂಥಾ ಶ್ರೇಷ್ಠ ಸ್ಥಾನದಲ್ಲಿರುವ – ನಮಗಾಗಿ ಅನೇಕ ಕಷ್ಟಗಳನ್ನು ಎದುರಿಸಿ ನನ್ನನ್ನು ಉತ್ತಮ ಸ್ಥಾನದಲ್ಲಿ ನಿಲ್ಲುವಂತೆ ಮಾಡಿ ಸಮಾಜ ಮೆಚ್ಚುವಂಥಾ ವ್ಯಕ್ತಿಯನ್ನಾಗಿ ಮಾಡಿದ ತಾಯಿಗೆ ಭಕ್ತಿ ಶ್ರದ್ಧೆಗಳಿಂದ ಪಿಂಡ ಪ್ರದಾನ ಪೂರ್ವಕ ಶ್ರಾದ್ಧ ಕರ್ಮ ಮಾಡಿ ತಾಯಿಯ ಆಶೀರ್ವಾದಕ್ಕೆ ಪಾತ್ರರಾಗೋಣ…

ಪಲ್ಲವಿ ನಾಗರಾಜು ಹಾವೇರಿ

​ಶ್ರಾದ್ಧದ ಮಹತ್ವ

​ಶ್ರಾದ್ಧದ ಮಹತ್ವ

” ಶ್ರಾದ್ಧ ” ಯೆಂದರೆ…

” ಶ್ರದ್ಧಯಾ ಕ್ರೀಯತೇ ಕರ್ಮ ಇತಿ ಶ್ರಾದ್ಧಮ್ ” – ಶ್ರದ್ಧೆಯಿಂದ ಆಚರಿಸುವ ಕಾರ್ಯವೇ ” ಶ್ರಾದ್ಧ ” ಎಂದು ಕರೆಸಿಕೊಳ್ಳುತ್ತದೆ. ಅತ್ಯಂತ ನಿಷ್ಠೆಯಿಂದ ಪಿಂಡ ಪ್ರದಾನ ಮಾಡಿ ಪಿತೃ ದೇವತೆಗಳ ಅಂತರ್ಯಾಮಿಯಾದ ಶ್ರೀ ಜನಾರ್ದನ ರೂಪಿ ಭಗವಂತನನ್ನು ತೃಪ್ತಿ ಪಡಿಸಬೇಕು. ಇದರಿಂದ ತನ್ನ ಪಿತೃಗಳಿಗೆ ಸದ್ಗತಿಯು ದೊರೆಯಲಿದೆಯೆಂದು ಪ್ರಾರ್ಥಿಸಬೇಕು.

ಕರ್ಮಭೂಮಿ ಯೆನಿಸಿದ ಈ ಭರತ ಖಂಡದ ಸನಾತನ ಧರ್ಮಗಳಲ್ಲಿ ” ಶ್ರಾದ್ಧ ” ಕರ್ಮವು ಮುಖ್ಯವಾಗಿದೆ. ಇದು ಅತ್ಯಂತ ಶ್ರೇಯಸ್ಕರವಾದ ಕರ್ಮವಾಗಿದೆ. ಇದನ್ನು ” ಪಿತೃ ಯಜ್ಞ ” ಎಂದು ಕರೆಯುತ್ತಾರೆ.

” ಬ್ರಹ್ಮಾಂಡ ಪುರಾಣ ” ದಲ್ಲಿ…

ಪಿತೃನ್ಯೂದ್ಧಿಶ್ಯ ವಿಪ್ರೇಭ್ಯೋ ದತ್ತಾಂ ಶ್ರಾದ್ಧಮುದಾಹೃತಮ್ ।।

ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು – ಹೊತ್ತು – ಸಾಕಿ – ಸಲುಹಿ ನಮ್ಮ ಉದ್ಧಾರಕ್ಕೆ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ – ತಾಯಿ – ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ಧೆಯಿಂದ ಅನ್ನ – ಜಲಾದಿಗಳನ್ನು ಕೊಡುವ ಪಿತೃ ಕಾರ್ಯಕ್ಕೆ ” ಶ್ರಾದ್ಧ ” ಎಂದು ಹೆಸರು.

” ಶ್ರಾದ್ಧ ಕಲ್ಪಲತಾ ” ದಲ್ಲಿ….

ಪಿತೃನುದ್ಧಿಶ್ಯೇನ ಶ್ರದ್ಧಯಾ ತ್ಯಕ್ತಸ್ಯ ದ್ರವ್ಯಸ್ಯ ।

ಬ್ರಾಹ್ಮಣೈರ್ಯತ್ಸ್ವೀಕರಣಂ ತತ್ ಶ್ರಾದ್ಧಮ್ ।।

ಪಿತೃಗಳನ್ನುದ್ಧೇಶಿಸಿ ಶ್ರದ್ಧೆಯಿಂದ ಕೊಡಲ್ಪಟ್ಟ ದ್ರವ್ಯವನ್ನು ಬ್ರಾಹ್ಮಣರು ಸ್ವೀಕರಿಸುವುದಕ್ಕೆ ” ಶ್ರಾದ್ಧ ” ಎಂದು ಹೆಸರು.

ಒಟ್ಟಿನಲ್ಲಿ ಶ್ರದ್ಧೆಯಿಂದ ತನಗೆ ಪ್ರಿಯವಾದ ಭೋಜ್ಯವನ್ನು ತನ್ನ ಪಿತೃಗಳನ್ನುದ್ಧೇಶಿಸಿ ಕೊಡುವ ” ಪಿಂಡ ಪ್ರದಾನ ” ಕ್ರಿಯೆಗೆ ” ಶ್ರಾದ್ಧ ” ಎಂದು ಹೆಸರು.

ಇಲ್ಲಿ ಕೆಲವರು ಪ್ರಶ್ನೆ ಮಾಡುವುದುಂಟು…

ನಮ್ಮನ್ನಗಲಿ ಹೋದ ಪಿತೃಗಳಿಗೆ ನಾವು ಕೊಡುವ ಜಲಾಂಜಲಿ – ಪಿಂಡ ಪ್ರಧಾನದಿಂದ ತೃಪ್ತಿಯಾಗುವುದು ಹೇಗೆ? ಅವರಿಗೆ ನಾವು ಕೊಟ್ಟಿದ್ದು ತಲುಪುವುದು ಹೇಗೆ?

ಇದಕ್ಕೆ ಉತ್ತರ ಹೀಗಿದೆ…

ನಾವು ಕೊಟ್ಟ ಅನ್ನವನ್ನು ಅಂದರೆ…

ಅದರ ಸಾರ ಭಾಗವನ್ನು ವಸು – ರುದ್ರ – ಆದಿತ್ಯ ತದಂತರ್ಗತ ಭಾರತೀ ರಾಮಣ ಮುಖ್ಯಪ್ರಾಣಾಂತರ್ಗತ ಪ್ರದ್ಯುಮ್ನ – ಸಂಕರ್ಷಣ – ವಾಸುದೇವ ರೂಪಿ ಭಗವಂತನು ಸ್ವೀಕರಿಸಿ ಅದನ್ನು ನಮ್ಮ ಪಿತೃಗಳು ಯಾವ ಯೋನಿಯಲ್ಲಿ ಎಲ್ಲಿ ಇರುವರೋ ಅಲ್ಲಿ ಅವರಿಗೆ ಆಹಾರ ರೂಪವಾಗಿ ಸೂಕ್ತ ರೀತಿಯಲ್ಲಿ ಕೊಟ್ಟು ಸಂತೋಷ ಪಡಿಸುತ್ತಾನೆ.

ಶ್ರಾದ್ಧ ಕರ್ತೃವಿನ ತಂದೆಯು / ಪಿತೃಗಳು ದೇವತ್ವವನ್ನು ಹೊಂದಿದ್ದರೆ ಆ ಅನ್ನವು ಅಮೃತವಾಗಿ, ಪಶುವಾಗಿದ್ದರೆ ಹುಲ್ಲಾಗಿ, ಸರ್ಪವಾಗಿದ್ದರೆ ವಾಯು ರೂಪವಾಗಿ, ಹದ್ದು ಮೊದಲಾದವಾಗಿದ್ದರೆ ಮಾಂಸವಾಗಿ, ಮನುಷ್ಯನಾಗಿದ್ದರೆ ಯೋಗ್ಯ ಅನ್ನವಾಗಿ ಅವರಿಗೆ ತಲುಪುತ್ತದೆ.

ಪಿತೃಗಳ ( ತಂದೆ – ತಾಯಿ – ಹಿರಿಯರು ) ತೃಪ್ತಿಗಾಗಿ ಶ್ರಾದ್ಧ ಕರ್ಮವನ್ನು ಮಾಡಲೇಬೇಕು ಎಂದು ” ಕೂರ್ಮ ಪುರಾಣ ” ದಲ್ಲಿ…

ಶ್ರಾದ್ಧಾತ್ಪರಾತ್ಪರಾನ್ನಾಸ್ತಿ ಶ್ರೇಯಸ್ಕರ ಮುದಾಹೃತಮ್ ।

ತಸ್ಮಾತ್ ಸರ್ವ ಪ್ರಯತ್ನೇನ ಶ್ರಾದ್ಧ೦ ಕುರ್ಯಾದ್ವಿಚಕ್ಷಣಃ ।।

ಮಾನವರಿಗೆ ತಮ್ಮ ಪಿತೃಗಳ ಶಾಸ್ತ್ರೋಕ್ತವಾದ ಶ್ರಾದ್ಧ ಕರ್ಮಕ್ಕಿಂತ ಶ್ರೇಯಸ್ಕರವಾದ ಕಾರ್ಯವು ಯಾವುದೂ ಇಲ್ಲ. ಆದುದರಿಂದ ವಿವೇಕಿಗಳೂ; ಜ್ಞಾನಿಗಳೂ ಸರ್ವ ಪ್ರಯತ್ನದಿಂದ ಶ್ರಾದ್ಧವನ್ನು ಮಾಡಬೇಕು.

” ಯಮ ಸ್ಮೃತಿ ”

ಯೇ ಯಜಂತಿ ಪಿತೃನ್ ದೆವಾನ್ ಬ್ರಾಹ್ಮಣಾ: ಸರ್ವ ಕಾಮದಾನ್ ।

ಸರ್ವ ಭೂತಾಂತರಾತ್ಮಾನ್ ವಿಷ್ಣುಮೇವ ಯಜಂತಿ ತೇ ।।

ಯಾವ ಬ್ರಾಹ್ಮಣನು ಎಲ್ಲಾ ಇಷ್ಟಾರ್ಥವನ್ನು ಕೊಡುವವರಾದ ಪಿತೃಗಳನ್ನೂ; ದೇವತೆಗಳನ್ನೂ ಪೂಜಿಸುವರೋ ಅವರು ಎಲ್ಲಾ ಚೇತನಾಚೇತನಾತ್ಮಕವಾದ ಪ್ರಪಂಚಕ್ಕೆ ನಿಯಾಮಕನಾದ ಶ್ರೀ ಮಹಾವಿಷ್ಣುವನ್ನೇ ಪೂಜಿಸುತ್ತಾರೆ!!

ಶ್ರಾದ್ಧ ಕರ್ಮವನ್ನು ಮಾಡದಿದ್ದರೆ ಏನಾಗುತ್ತದೆ? ಎಂದು ಕೇಳುವವರಿಗೆ..

” ಹಾರಿತ ಸ್ಮೃತಿ ” ಯು ಹೀಗೆ ಉತ್ತರಿಸುತ್ತದೆ…

ನ ಸಂತಿ ಪಿತರಶ್ಚೇತಿ ಕೃತ್ವಾ ಮನಸಿ ಯೋ ನರಃ ।

ಶ್ರಾದ್ಧ೦ ನ ಕುರುತೇ ತತ್ರ ತಸ್ಯ ರಕ್ತ೦ ಪಿಬಂತಿ ತೇ ।।

ಯಾವ ಮನುಷ್ಯರು ಪಿತೃಗಳೂ ಅಥವಾ ತಂದೆ – ತಾಯಿಗಳ ದೇಹವನ್ನು ಸುಟ್ಟು ಭಸ್ಮ ಮಾಡಿದ ಮೇಲೆ ಅವರಿಗೆ ಹೊಟ್ಟೆ ಇಲ್ಲ ಎಂಬ ಭಾವನೆಯಿಂದ ಪಿತೃಗಳ ಶ್ರಾದ್ಧಾದಿಗಳನ್ನು ಮಾಡುವುದಿಲ್ಲವೋ ಅಂಥವರ ಪಿತೃಗಳು ಸಿಟ್ಟಾಗಿ ನಾಸ್ತಿಕರ ರಕ್ತವನ್ನು ಕುಡಿಯುತ್ತಾರೆ.

ಇನ್ನು ಶ್ರಾದ್ಧವನ್ನು ಮಾಡುವವರು ನ್ಯಾಯದಿಂದ ಹಣದಿಂದಲೇ ಮಾಡಬೇಕೆಂದು ” ಮಾರ್ಕಂಡೇಯ ಪುರಾಣ ” ಈ ಕೆಳಗಿನಂತೆ ಖಚಿತ ಪಡಿಸಿದೆ.

ಅನ್ಯಾಯೋಪಾರ್ಜಿತೈರ್ವಿತ್ತೈ: ಯತ್ ಶ್ರಾದ್ಧ೦ ಕ್ರೀಯತೇ ನರೈ: ।

ತೃಪ್ಯಂತಿ ತೇನ ಚಾಂಡಾಲಾ: ಪುಲ್ಕಸಾದ್ಯಾಶ್ಚಯೋನಯಃ ।।

ಮಾನವರು ಅನ್ಯಾಯ – ಅಧರ್ಮದಿಂದ ಹಣವನ್ನು ಗಳಿಸಿ ಅದರಿಂದ ಶ್ರಾದ್ಧ ಮಾಡಿದರೆ ಆ ಶ್ರಾದ್ಧದಿಂದ ಚಾಂಡಾಲ – ಪುಲಸ್ಕ ( ಬ್ರಾಹ್ಮಣನಿಗೆ ಕ್ಷತ್ರೀಯ ಜಾತಿಯಲ್ಲಿ ಹುಟ್ಟಿದ ಮಿಶ್ರ ಜಾತಿಯವ ) ಮುಂತಾದ ಪಾಪಿಗಳಿಗೆ ತೃಪ್ತಿಯಾಗುವುದೇ ಹೊರತು ಪಿತೃಗಳಿಗೆ ತೃಪ್ತಿಯಾಗುವುದೇ ಇಲ್ಲ!!

*********

ಈ ಪವಿತ್ರವಾದ ಪಿತೃ ಯಜ್ಞದಲ್ಲಿ ಶ್ರೀ ಜನಾರ್ದನ ರೂಪಿಯಾದ ಶ್ರೀ ಪರಮಾತ್ಮನನ್ನೇ ” ಶ್ರಾದ್ಧಾ ಸ್ವಾಮಿ ” ಎಂದು ಭಾವಿಸಿಬೇಕು.

ಶ್ರಾದ್ಧದಲ್ಲಿ ಬಳಸುವ ಎಳ್ಳು – ದರ್ಭೆ ಮೊದಲಾದ ಪದಾರ್ಥಗಳಲ್ಲಿ ಶ್ರೀ ಜನಾರ್ದನನು ಒಂದೊಂದು ರೂಪದಿಂದ ನೆಲೆಸುವನು.

ವಿಶ್ವೇ ದೇವತೆಗಳ ಅಂತರ್ಯಾಮಿಯಾಗಿ 3555 ರೂಪಗಳಿಂದ ಶ್ರಾದ್ಧ ಕರ್ಮಕ್ಕೆ ಯಾವ ವಿಘ್ನಗಳು ಬರದಂತೆ ಶ್ರೀ ಜನಾರ್ದನನು ಶ್ರಾದ್ಧ ಕರ್ಮವನ್ನು ರಕ್ಷಿಸುವನು.

ಶ್ರೀ ಜನಾರ್ದನನ ಹೆಸರೇ ಇದನ್ನು ಹೇಳುತ್ತದೆ…

ಜ = 3

ನಾ = 5

ರ್ದ = 5

ನ = 5

ಶ್ರಾದ್ಧ ಕಾಲದಲ್ಲಿ ಪಠಿಸಬೇಕಾದವುಗಳು…

೧. ಶ್ರೀ ಪದ್ಮ ಪುರಾಣಾಂತರ್ಗತ ಔರ್ಧ್ವ ದೇಹಿಕ ಶ್ರೀ ರಾಮ ಸ್ತೋತ್ರ

೨. ಕಾಠಕೋಪನಿಷತ್

೩. ಶ್ರೀ ವಿಜಯವಿಠ್ಠಲ ವಿರಚಿತ ” ಪೈತೃಕ ಸುಳಾದಿ ”

೪. ಶ್ರೀ ಜಗನ್ನಾಥದಾಸ ಕೃತ ” ಪಿತೃ ಗಣ ಸಂಧಿ ”

ಹೀಗೆ ಶ್ರೀ ಜನಾರ್ದನನ ರೂಪಗಳು.

ನರಕೋದ್ಧಾರ ಇದರಿಂದ ಸತ್ಯ ಪಿತೃಗಳಿಗೆ ।

ನರಕಾತೀತ ನಮ್ಮ ವಿಜಯವಿಠ್ಠಲ ಸುಳಿವಾ ।।

ಪಲ್ಲವಿ ನಾಗರಾಜು ಹಾವೇರಿ

ಶ್ರೀ ಜಗನ್ನಾಥದಾಸರಾಯರ

ಒಮ್ಮೆ ಅಗ್ರಹಾರ ಬ್ರಾಹ್ಮಣರೊಬ್ಬರ ಮನೆಯಲ್ಲಿ ಪ್ರತಿಮಾರ್ಚನೆ ಏರ್ಪಾಡಾಗಿತ್ತು. ಅತ್ಯಂತ ಸಂಭ್ರಮದಿಂದ ಬಂಧು ಭಾಂಧವರೆಲ್ಲರೂ ಸೇರಿದ್ದರು. ಮನೆಯ ಯಜಮಾನನು ಪಂಡಿತೋತ್ತಮರಾದ ಶ್ರೀ ಶ್ರೀನಿವಾಸಾಚಾರ್ಯರನ್ನು ಕರೆಸಿ ಅವರ ಮುಖೇನ ಕುಲ ದೈವ ಪೂಜಾ ವಿಧಾನಗಳನ್ನು ನೆರವೇರಿಸುವಂತೆ ವಿಜ್ಞಾಪಿಸಿಕೊಂಡನು. ಅಂತೆಯೇ ಭಗವದಾರ್ಚನೆಯನ್ನುಆಚಾರ್ಯರು ಪ್ರಾರಂಭಿಸಿದರು.ನೂರಾರು ಜನರು ಸೇರಿದ್ದ ಈ ಸಮಾರಂಭಕ್ಕೆ, ತೀರ್ಥಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.ದುರಾಗ್ರಹಪೀಡಿತನಾದ ಅಡುಗೆಮಾಡಿತ್ತಿದ್ದವನು ಯಾರದೋ ಕುಯುಕ್ತಿಗೆ ಭ್ರಮೆಗೊಂಡು ದೇವರ ನೈವೇದ್ಯಕ್ಕೆ ತಯಾರಾಗಿದ್ದ ಪಾಯಸಭಕ್ಷದಲ್ಲಿ ಉಪ್ಪು ಮಿಶ್ರಣ ಮಾಡಿಬಿಟ್ಟನು.ಸಿದ್ಧವಾದ ಅಡುಗೆಯನ್ನು ದೇವರ ನೈವೇದ್ಯಕ್ಕೆ ತಂದು ಇಡಲಾಯಿತು. ತುಳಸೀದಳ ಹಾಗು ತೀರ್ಥವನ್ನು ಪ್ರೋಕ್ಷಿಸಿ ಅಚಾರ್ಯರು ಜಮಕ್ಕೆ ಕುಳಿತರು. ಧ್ಯಾನಾಸಕ್ತರಾದ ಅಚಾರ್ಯರು ನೈವೇದ್ಯ ಸಮರ್ಪಣೆಯನ್ನು ಹಿಂದುರಿಗಿಸಲೇ ಇಲ್ಲ. ಮನೆಯ ಯಜಮಾನನು ಅಚಾರ್ಯರಲ್ಲಿ ಬಂದು ಭೋಜನಕ್ಕೆ ತಡವಾಗುತ್ತಿದೆ ಎಂದ ಮೇಲೆ ಅಚಾರ್ಯರು ಬಂದವರಿಗೆಲ್ಲಾ ಭೋಜನವನ್ನು ಬಡಿಸುವಂತೆ ತಿಳಿಸಿದರು. ಬಂದಿದ್ದ ಜನರೆಲ್ಲಾ ಪರಮಾನ್ನವನ್ನುಂಡುತೃಪ್ತರಾಗಿ ಯಜಮಾನನನ್ನು ಹರಸಿ ಹೊರಟರು.ಆಶ್ಚರ್ಯಚಕಿತನಾದ ಅಡುಗೆಯವನು ಈ ಪವಾಡವನ್ನು ಕಂಡು ದಿಗ್ಭ್ರಮೆಗೊಂಡ. ತಾನು ಮಾಡಿದ ತಪ್ಪನ್ನು ಅರಿತು ಯಜಮಾನನಲ್ಲಿ ನಡೆದದೆಲ್ಲವನ್ನು ತಿಳಿಸಿದ. ಯಜಮಾನನು ತನ್ನಿಂದಾದಅಪಮಾನಕ್ಕೆ ಕ್ಷಮೆ ಕೇಳಲು ಆಚಾರ್ಯರಲ್ಲಿಗೆ ಬಂದಾಗ ಧ್ಯಾನದಿಂದ ಎದ್ದ ಅಚಾರ್ಯರು ಹೀಗೆ ಹೇಳಿದರು,”ನೈವೇದ್ಯಕ್ಕಿಟ್ಟಪಾಯಸದಲ್ಲಿದ್ದ ಉಪು ಬೆರೆಸಿದ್ದನ್ನು ನಾವು ಭಗವಂತನ ಅನುಗ್ರಹದಿಂದ ಅರಿತು, ಉಪ್ಪಿನಲ್ಲಿರುವ ಜನಾರ್ಧನರೂಪಿ ಭಗವಂತನನ್ನು ಪ್ರಾರ್ಥಿಸಿ, ಸಕ್ಕ್ರೆಯಲ್ಲಿರುವಕೇಶವರೂಪಿ ಭಗವಂತನ ಅನುಗ್ರಹಕ್ಕಾಗಿ ಪ್ರಾರ್ಥಿಸುತಲಿದ್ದೆ. ” ಆಚಾರ್ಯರು ಮಾಡುತ್ತಿದ್ದ ಜಪದ ಫಲವಾಗಿ ಪಾಯಸದಲ್ಲಿದ್ದ ಉಪ್ಪು ಸಕ್ಕರೆಯಾಗಿ ಬದಲಾಗಿತ್ತು.’ಆಶ್ಚರ್ಯತಮಃ’ ಭಗವಂತನಲ್ಲಿ ಇಂತಹ ಅಸಾಧಾರಣ ಚಿಂತನಾ ಕ್ರಮವನ್ನು ಕೈಗೂಡಿಸಿಕೊಂಡವರುಶ್ರೀ ಶ್ರೀನಿವಾಸಾಚಾರ್ಯರು. ಈ ಪರಿಯ ಉಪಾಸನೆಯನ್ನು ಅರಿತವರಿಂದ ಮಾತ್ರವೇ ಸಾಧ್ಯವಾದೀತು ಶ್ರೀ ಹರಿಕಥಾಮೃತಸಾರ ಎಂಬ ಶ್ರೀ ವಾದಿರಾಜರ ಕೋಶಕೊಪ್ಪುವ ಮೇರು ಕೃತಿ.ದಾಸರಾಯರ ಕಾರುಣ್ಯದಿಂದ, ಮಂತ್ರಾಲಯ ಪ್ರಭುಗಳ ಅನುಗ್ರಹದಿಂದ, ಶ್ರೀಮದ್ ಹನುಮ ಭೀಮ ಮಧ್ವವಾದಿರಾಜಾಂತರ್ಗತ ಶ್ರೀಲಕ್ಷ್ಮೀನಾರಸಿಂಹನ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀ ಜಗನ್ನಾಥದಾಸರಾಯರ ಆರಾಧನಾ ದಿನದಂದು ಅವರ ಅನುಗ್ರಹವನ್ನು ಬೇಡುತ್ತಾ ಭಗವದನುಗ್ರಹಕ್ಕೆ ಪಾತ್ರರಾಗೋಣ.

ಜಗನ್ನಾಥ ಅಬ್ಬೂರು ತೋಟಂತ್ತಿಲ್ಲಾಯ

ಕ್ಷಮಾ ಸುರೇಂದ್ರರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು

​ 

ಕ್ಷಮಾ ಸುರೇಂದ್ರರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು “ಸ್ತೋತ್ರ ಸಾಹಿತ್ಯಕ್ಕೆ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ಕೊಡಿಗೆಯು ಮಹತ್ತರವಾದುದು. 

ಶ್ರೀ ಆಚಾರ್ಯ ಮಧ್ವರು – ಶ್ರೀ ಜಯತೀರ್ಥರು – ಶ್ರೀ ವಿಜಯೀ೦ದ್ರರು -ಶ್ರೀ ಸುಧೀಂದ್ರರು – ಶ್ರೀ ರಾಘವೇಂದ್ರರು – ಶ್ರೀ ಸುಮತೀಂದ್ರರು – ಶ್ರೀ ಮುನೀಂದ್ರರು – ಶ್ರೀ ವಾದೀಂದ್ರರು – ಶ್ರೀ ವಸುಧೇಂದ್ರರು – ಶ್ರೀ ವರದೇಂದ್ರರು – ಶ್ರೀ ಧೀರೆಂದ್ರರು – ಶ್ರೀ ಭುವನೇಂದ್ರರು – ಶ್ರೀ ವ್ಯಾಸತತ್ತ್ವಜ್ಞರು – ಶ್ರೀ ಸುಜನೇಂದ್ರರು – ಶ್ರೀ ಸುಜ್ಞಾನೇಂದ್ರರು – ಶ್ರೀ ಸುಪ್ರಜ್ಞೇಂದ್ರು – ಶ್ರೀ ಸುಕೃತೀಂದ್ರರು – ಶ್ರೀ ಸುಜಯೀ೦ದ್ರರು – ಶ್ರೀ ಅಪ್ಪಣ್ಣಾಚಾರ್ಯರು- ಶ್ರೀ ವಿಜಯರಾಯರು – ಶ್ರೀ ಜಗನ್ನಾಥದಾಸರು ಮೊದಲಾದ ಮಹಾನುಭಾವರು ರಚಿಸಿದ ಅತ್ಯಮೋಘ ಕೃತಿಗಳು ಸ್ತೋತ್ರ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಾಗಿವೆ.ಇಂಥಹಾ ಸ್ತೋತ್ರ ಪರಂಪರೆಯಲ್ಲಿ ಶ್ರೀ ಗುರುರಾಜ ಗುರುಸಾರ್ವಭೌಮರ ಬಗ್ಗೆ ರಚಿಸಿದ ಸ್ತೋತ್ರಗಳು ಸಾಕಷ್ಟಿವೆ. 

ಶ್ರೀ ಹರಿವಾಯು ಗುರುಗಳನ್ನು ಹೊರತು ಪಡಿಸಿ ಶ್ರೀ ಮಂತ್ರಾಲಯ ಪ್ರಭುಗಳ ಬಗ್ಗೆ ನೂರಾರು ಸ್ತೋತ್ರ ರಚನೆಗಳೂ ಮತ್ತು ಸುಮಾರು 12000 ಕ್ಕೂ ಅಧಿಕ ಹರಿದಾಸರ ಪದಗಳ ರಚನೆಯಂತೂ ಅಚ್ಛರಿ ಮೂಡಿಸುವ ಸಂಗತಿ.ಈ ಎಲ್ಲಾ ಶ್ರೀ ರಾಯರ ಮೇಲಿನ ಸ್ತೋತ್ರಗಳಿಗೆ ಮುಕುಟಪ್ರಾಯವಾಗಿರುವುದು ” ಶ್ರೀ ರಾಘವೇಂದ್ರ ಸ್ತೋತ್ರ “!ಶ್ರೀ ರಾಘವೇಂದ್ರ : ಸಕಾಲಪ್ರದಾತಸ್ವಪಾದಕಂಜದ್ವಯ ಭಕ್ತಿಮದ್ಭ್ಯ: ।ಅಘಾದ್ರಿಸಂಭೇದನ ದೃಷ್ಟಿವಜ್ರ:ಕ್ಷಮಾಸುರೇಂದ್ರೋsವತು ಮಾಂ ಸದಾsಯಮ್ ।।ತಮ್ಮ ಪಾದ ಕಮಲಗಳಲ್ಲಿ ಭಕ್ತಿಯುಳ್ಳವರಿಗೆಸಕಲ ಅಭೀಷ್ಟಗಳನ್ನು ಕೊಡುವ; ಪಾಪಗಳೆಂಬ ಪರ್ವತವನ್ನು ಸಂಪೂರ್ಣ ನಾಶಗೊಳಿಸುವಲ್ಲಿ ಸಮರ್ಥವಾದ ದೃಷ್ಟಿಯೆಂಬ ವಜ್ರಾಯುಧವುಳ್ಳ ದೇವತೆಗಳಲ್ಲಿ ಮತ್ತು ಬ್ರಾಹ್ಮಣರಲ್ಲಿ ಶ್ರೇಷ್ಠರಾದ ಶ್ರೀ ರಾಘವೇಂದ್ರತೀರ್ಥರು ನಮ್ಮ ಸದಾ ರಕ್ಷಿಸಲಿ!!ಸಕಲ ಪ್ರದಾತ = ಎಲ್ಲವನ್ನು ಕೊಡುವವರು ಎಂದರ್ಥ.ಕಲಾ = ಲಕ್ಷ್ಮೀ” ಕಲಯಾ ಸಹಿತಃ ಸಕಲ: ” ಎಂದರೆ = ಶ್ರೀ ಮಹಾವಿಷ್ಣು” ಮಹಾಭಾರತ ” ದಲ್ಲಿ…” ನಿಷ್ಕಲಂ ಸಕಲಂ ಬ್ರಹ್ಮ ನಿರ್ಗುಣಂ ಗುಣ ಗೋಚರಮ್ ” – ಎಂದು ಶ್ರೀ ಮಹಾವಿಷ್ಣುವನ್ನು ” ಸಕಲ ” ಎಂದು ಹೇಳುತ್ತದೆ.ಸಕಲಂ = ಪರಬ್ರಹ್ಮದದಾತಿ = ಶಿಷ್ಯೇಭ್ಯಃಉಪದಿಶತಿ = ಭಕ್ತರಿಗೋಸ್ಕರ ಭಗವಂತನನ್ನು ಕುರಿತು ತಮ್ಮ ಗ್ರಂಥಗಳ ಉಪದೇಶಗಳ ಮೂಲಕ” ತದ್ದಾನಂ ಚಾಧ್ಯಪನೇನ ವ್ಯಾಖ್ಯಯ ವಿಲಿಖ್ಯ ಅರ್ಪಣೇನ ಚ ” ಎಂದು ಶ್ರೀ ರಾಯರೇ ಸ್ವತಃ ಖಂಡಾರ್ಥದಲ್ಲಿ ಹೇಳಿರುವಂತೆ..ವಿಷ್ಣು ಸರ್ವೋತ್ತಮತ್ವ ಜ್ಞಾನವನ್ನು ನೀಡಿ ಮೋಕ್ಷವನ್ನು ಪಡೆಯುವ ಅರ್ಹತೆಯನ್ನು ಕೊಡುವವರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು.” ಸ್ವಪಾದಕಂಜದ್ವಯ ಭಕ್ತಿಮದ್ಭ್ಯ: ” ಎಂಬಲ್ಲಿ ” ಸ್ವ ” ಶಬ್ದವು ” ಸ್ವತಂತ್ರ “ಎಂಬ ಅರ್ಥವನ್ನು ಹೇಳುತ್ತದೆ.ಶ್ರೀಮದಾಚಾರ್ಯರು ” ತತ್ತ್ವಸಂಖ್ಯಾನ ” ದಲ್ಲಿ ತತ್ತ್ವಗಳನ್ನು ವಿಭಾಗಿಸುವಾಗ….ಸ್ವತಂತ್ರಮಸ್ವತಂತ್ರ೦ ಚ ದ್ವಿವಿಧಂ ತತ್ತ್ವಮಿಷ್ಯತೇ ।ಸ್ವತಂತ್ರೋ ಭಗವಾನ್ವಿಷ್ಣು: ।।ಎಂದು ” ವಿಷ್ಣುವೇ ಸ್ವತಂತ್ರ ತತ್ತ್ವ ” ವೆಂದು ಹೇಳಿದ್ದಾರೆ. ಹಾಗಾದರೆ ಸ್ವತಂತ್ರನಾದ ಶ್ರೀ ಮಹಾವಿಷ್ಣುವಿನ ಪಾದ ಕಮಲಗಳಲ್ಲಿ ಭಕ್ತಿಯುಳ್ಳವರೆಂದು ಅರ್ಥವಾಗುತ್ತದೆ.ಅಂದರೆ, ಶ್ರೀ ಪರಮಾತ್ಮನಲ್ಲಿ ಭಕ್ತಿ ಇರುವವರಿಗೆ ಮಾತ್ರ ಸಕಾಲಪ್ರದಾತರು. ಭಗವದ್ವೇಷಿಗಳನ್ನುಶ್ರೀ ರಾಯರು ಎಂದಿಗೂ ಅನುಗ್ರಹಿಸಲಾರರು.ಅಂಥಹಾ ಶ್ರೀ ಹರಿಯಲ್ಲಿ ಭಕ್ತಿಯುಳ್ಳವರು ಶ್ರೀ ರಾಯರ ಭಕ್ತರೂ ಆಗಿದ್ದಾರೆ!!” ಕ್ಷಮಾಸುರೇಂದ್ರ: ” ಅಂದರೆ…೧. ತಮ್ಮ ಶಮದಮಾದಿ ಗುಣಗಳಿಂದಲೂ; ತತ್ತ್ವ ಜ್ಞಾನದಿಂದಲೂ ಈ ಭೂಮಿಯ ಮೇಲೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಪ್ರಕಾಶಿಸುವರು.೨. ಈ ಭೂಮಿಯಲ್ಲಿ ಭಕ್ತರ ಇಷ್ಠಾರ್ಥಗಳನ್ನು ಈಡೇರಿಸುವವರಲ್ಲಿ ಅಗ್ರಗಣ್ಯರು.೩. ಈ ಭೂಮಿಯಲ್ಲಿ ಅಸುರರಾಗಿ ( ಶ್ರೀ ಪ್ರಹ್ಲಾದರಾಜ ) ಅವತರಿಸಿದರೂ ಶ್ರೀ ಹರಿಯ ಪರಮ ಭಕ್ತರು.೪. ಶ್ರೀ ಮುಖ್ಯಪ್ರಾಣದೇವರಲ್ಲಿ ಅವರ ಶಾಸ್ತ್ರ ವ್ಯಾಖ್ಯಾನಗಳಿಂದ ಭಕ್ತಿ ಮಾಡುವ ಭಕ್ತರಲ್ಲಿ ಶ್ರೇಷ್ಠರು ಶ್ರೀ ರಾಯರು!!ಶ್ರೀ ಮಡಕಶಿರ ಭೀಮದಾಸರು…ರಾಘ : ಅಹರಿ ತಾಳ : ಏಕಬೇಡುವೆ ನಿನ್ನ ಕೊಡು ವರವನ್ನ ।। ಪಲ್ಲವಿ ।।ಬೇಡುವ ಭಕ್ತರ ।ಬೀಡೋಳು ನಿನ್ನ । ಕೊಂ ।ಡಾಡುವೆ ರಥದೊಳ ।ಗಾಡುವೆ ವಿಭುವೆ ನಾ ।। ಚರಣ ।।ಇಂದ್ರನ ವಿಭವ । ಸು ।ಧೀಂದ್ರ ತನುಜ । ರಾಘ ।ವೇಂದ್ರ ಗುರುವೇ । ಕಮ ।ಲೇಂದ್ರನ ಕೃಪೆಯ ನಾ ।। ಚರಣ ।।ವರ ಭೀಮೇಶವಿಠಲ ।ನರಿಯದವರೊಳು । ನಾ ।ಪರನೆನುತಲಿ ನಿನ್ನ ।ಚರಣವ ಸ್ತುತಿಸಿ ನಾ ।। ಚರಣ ।।

ಚಾತುರ್ಮಾಸ್ಯ ವೃತ

ಚಾತುರ್ಮಾಸ್ಯ ವೃತ ಆಚರಣೆಯ ಹಿನ್ನಲೆ 

003-Sri_Vishnu

ಸನಾತನವಾದ ವೇದ ಪ್ರಪಂಚದಲ್ಲಿ ಸೂಚಿತವಾದ ಜೀವನ ಕ್ರಮದ ಅನ್ವಯ, ಸನ್ಯಾಸಾಶ್ರಮ ಸ್ವೀಕರಿಸಿದ ಯತಿಗಳಿಗೆ ಪ್ರತ್ಯೇಕವಾದ ವೃತ ನಿಯಮಗಳಿದ್ದು, ಅದರಲ್ಲಿ ಚಾತುರ್ಮಾಸ್ಯವೂ ಅತ್ಯಂತ ಪ್ರಮುಖವಾಗಿದೆ.
ಸನ್ಯಾಸಾಶ್ರಮ ಸ್ವೀಕರಿಸುವ ಯತಿಗಳು ಸಂಸಾರದ ಎಲ್ಲ ಬಂಧನಗಳಿಂದ ಮುಕ್ತರಾಗಿದ್ದು, ನಿಶ್ಚಿತವಾದ ನೆಲೆ ಹಾಗೂ ವಾಸಸ್ಥಾನ (ನಿವಾಸ) ಹೊಂದಿರುವದಿಲ್ಲ. ನಿತ್ಯ ಸಂಚಾರವೇ ಮುಖ್ಯ ಧರ್ಮವಾಗಿರುವ ಯತಿಗಳು, ಸಂಚಾರದೊಂದಿಗೆ ಪ್ರತಿನಿತ್ಯದ ಧರ್ಮ ಕಾರ್ಯ, ಧರ್ಮ ಜಾಗ್ರತಿ ಮೂಡಿಸುತ್ತಾರೆ. ಇಂತಹ ಯತಿಗಳಿಗೂ ವರ್ಷದ ಕೆಲವು ಕಾಲ ಸಂಚಾರವನ್ನು ತೊರೆದು, ಒಂದೇ ಸ್ಥಳದಲ್ಲಿ ವಾಸ್ತವ್ಯ ಮಾಡಬೇಕು ಎಂಬ ನಿಯಮಗಳನ್ನು ವೇದ ಪ್ರಪಂಚ ಜಾರಿಗೆ ತಂದಿದೆ. ಧಾರ್ಮಿಕ ಕಾರಣಗಳು : ಆಶಾಢ ಮಾಸ ಮಳೆಗಾಲದ ಅವಧಿಯಾಗಿದ್ದು, ಕ್ರಿಮಿಕೀಟಗಳ ಸಂತತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಯತಿಗಳಲ್ಲಿ ಇರುವ ಭೂತದಯೆ (ಹಿಂಸಾ ವಿರೋಧಿ) ಮನೋಭಾವದ ಅಡಿ, ಯತಿಗಳ ಸಂಚಾರದಿಂದ ಯಾವದೇ ಕ್ರಿಮಿ ಕೀಟಾದಿಗಳಿಗೂ ತೊಂದರೆ, ಪ್ರಾಣ ಹಾನಿಯಾಗಬಾರದು. ಯಾವದೇ ಸಂದರ್ಭದಲ್ಲಿಯೂ ಯತಿಗಳು ವಾಸ್ತವ್ಯದ ಸ್ಥಳದಿಂದ ಹೊರಗೆ ಬರಬಾರದು ಎಂಬ ನಿಯಮಾವಳಿಗಳಿವೆ. ಚಾತುರ್ಮಾಸ್ಯದ ಅವಧಿಯ ಪೂರ್ಣ ಅಗತ್ಯವಾದ ಎಲ್ಲ ದಿನಬಳಕೆಯ ವಸ್ತುಗಳನ್ನೂ ಮುಂಚಿತವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವ ಸಂಪ್ರದಾಯವೂ ಆಚರಣೆಯಲ್ಲಿದೆ.
ಶ್ರೀಮಠದಲ್ಲಿರುವ ಶಿಷ್ಯರ ಮೇಲೆ ಅನುಗ್ರಹ ಮುಖಿಗಳಾಗಿರುವ ಯತಿಗಳು, ಈ ಚಾತುಮಾಸ್ಯದ ಅವಧಿಯಲ್ಲಿ ಪಾಠ-ಪ್ರವಚನದ ಬಗ್ಗೆ ವಿಶೇಷ ಆಧ್ಯತೆ ನೀಡಬೇಕು. ಶಿಷ್ಯರ ಉನ್ನತಿಗಾಗಿ ವಿಶೇಷ ಕಾಳಜಿ ತೋರಬೇಕು. ನಿತ್ಯ ಸಂಚಾರವೂ ಇಲ್ಲದ ಕಾರಣ ಪಾಠ ಪ್ರವಚನಗಳು ಸಂಪೂರ್ಣಗೊಳ್ಳಬೇಕು ಎಂಬ ಉದ್ದೇಶವೂ ಈ ಆಚರಣೆಯ ಹಿನ್ನಲೆಯಲ್ಲಿದೆ.
ಪ್ರಾಚೀನ ಪರಂಪರೆಯಲ್ಲಿ ಶ್ರೀಮದ್ ಉತ್ತರಾಧಿಮಠದಲ್ಲಿ ನೀಡಲಾಗುವ ತಪ್ತ ಮುದ್ರಾಧಾರಣೆ ಕಾರ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಭಗವಂತನ ಚಿನ್ನೆಗಳನ್ನು ದೇಹದ ಮೇಲೆ ಮೂಡಿಸಿಕೊಂಡು, ಶರೀರದ ಮೇಲಿನ ವ್ಯಾಮೋಹವನ್ನು ತೊರೆಯಬೇಕು. ಈ ನಶ್ವರವಾದ ದೇಹವನ್ನು ದೇವರ ಸೇವೆಗೆ ಮೀಸಲಾಗಿರಿಸಬೇಕು ಎಂಬ ಚಿಂತನೆಗಳಿವೆ. ಚಾತುರ್ಮಾಸ್ಯದ ಅವಧಿಯಲ್ಲಿ ವಿಶೇಷವಾದ ತಪಃ ಶಕ್ತಿಯನ್ನು ಹೊಂದಿರುವ ಯತಿಗಳಿಂದ ತಪ್ತ ಮುದ್ರಾಧಾರಣೆಯನ್ನು ಶ್ರೀಮಠದ ಪರಂಪರೆಯ ಭಕ್ತರು ಪಡೆಯಲೇಬೇಕು ಎಂಬ ಸೂಚನೆ ಇದೆ. ಯತಿಗಳ ಶಿಷ್ಯರಿಗೆ ಈ ತಪ್ತ ಮುದ್ರಾ ಧಾರಣೆಯನ್ನು ಖಡ್ಡಾಯಗೊಳಿಸಲಾಗಿರುತ್ತದೆ. ಯತಿಗಳ ವಾಸ್ತವ್ಯದ ಸ್ಥಳಕ್ಕೆ ಬರುವ ಶ್ರೀಮಠದ ಎಲ್ಲ ಶಿಷ್ಯ ವರ್ಗ ಯತಿಗಳಿಂದ ತಪ್ತ ಮುದ್ರಾ ಧಾರಣೆಹೊಂದಲು ಈ ಆಚರಣೆ ಸಹಾಯಕವಾಗಿದೆ.
ಪ್ರಾಚೀನ ಪರಂಪರೆಯಲ್ಲಿ ಯತಿಗಳ ಸೇವೆಗೆ ವಿಶೇಷವಾದ ಪ್ರಾಮುಖ್ಯತೆ ನೀಡಲಾಗಿದೆ. ಅತ್ಯಂತ ನಿಷ್ಟೆ ಹಾಗೂ ಭಕ್ತಿಯಿಂದ ಯತಿಗಳ ಸೇವೆಯನ್ನು ನಿರಂತರವಾಗಿ ಮಾಡಿದಲ್ಲಿ ಉತ್ತಮ ಫಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯತಿಗಳ ಸಾಂಗತ್ಯ, ಮಂತ್ರೋಪದೇಶ ಹಾಗೂ ಜಪ ಧ್ಯಾನಗಳು ಅನಂತ ಫಲಗಳೊಂದಿಗೆ ಉತ್ತಮ ಸದ್ಗತಿಗೆ ಕಾರಣವಾಗುತ್ತದೆ ಎಂಬ ಚಿಂತನೆ ಈ ಆಚರಣೆಯ ಹಿಂದೆ ಇದೆ.
ಚಾತುರ್ಮಾಸ್ಯದ ಅವಧಿಯಲ್ಲಿ ದಿನನಿತ್ಯದ ಆಹಾರ ಕ್ರಮದಲ್ಲಿಯೂ ಅಮೂಲಾಗ್ರವಾದ ಬದಲಾವಣೆ ಕಾಣಬಹುದಾಗಿದೆ. ಆಷಾಢ ಮಾಸದಲ್ಲಿ ತರಕಾರಿಗಳ ಬಳಕೆಯನ್ನು ವರ್ಜಿಸಲಾಗಿದ್ದು, ಕೇವಲ ಒಣಗಿದ ಬೇಳೆ ಕಾಳು, ಧಾನ್ಯಗಳನ್ನು ಮಾತ್ರ ಬಳಸಲಾಗುತ್ತದೆ. ಮಳೆಗಾಲದ ಅವಧಿಯಲ್ಲಿ ತರಕಾರಿಗಳಲ್ಲಿಯೂ ಸೂಕ್ಷ್ಮಾಣು ಜೀವಿಗಳು, ಹುಳ ಹುಪ್ಪಡಿಗಳು ಇರುವ ಕಾರಣದಿಂದ ಈ ಆಚರಣೆ ಜಾರಿಗೆ ಬಂದಿದೆ. ಶ್ರಾವಣದಲ್ಲಿ ಮೊಸರು ಹಾಗೂ ಭಾದ್ರಪದ ಮಾಸದಲ್ಲಿ ಹಾಲಿನ ಬಳಕೆಯನ್ನು ತ್ಯಜಿಸಲಾಗುತ್ತದೆ. ಹಾಲು-ಮೊಸರು ಸಮೃದ್ದಿಯ ಸಂಕೇತವಾಗಿದ್ದು, ಇದನ್ನೂ ತ್ಯಜಿಸುವ ತನ್ಮೂಲಕವೂ ದೇಹ ಪೋಷಣೆಗೆ ಪ್ರಾಧಾನ್ಯತೆ ಕಡಿಮೆಯಾಗಲಿ ಎಂಬ ಚಿಂತನೆ ಈ ಆಚರಣೆಯಲ್ಲಿದೆ. ಆಶ್ವೀಜ ಮಾಸದಲ್ಲಿ ದ್ವಿದಳ ಧಾನ್ಯಗಳ ಬಳಕೆಯನ್ನು ಶಾಸ್ತ್ರಗಳು ನಿರಾಕರಿಸಿದೆ. ಕೇವಲ ಕಂದ ಮೂಲ (ಗಡ್ಡೆ ಗೆಣಸುಗಳನ್ನು ಆಹಾರದ ರೂಪದಲ್ಲಿ ಬಳಸಲಾಗುತ್ತದೆ)
ಶ್ರಾವಣ ಮಾಸದಲ್ಲಿ ಮೊಸರಿನ ಬಳಕೆ ದೇಹದ ಪ್ರಕೃತಿಗೂ ಅಪಥ್ಯವಾಗಿದ್ದು, ಮೊಸರು ಹಾಲು ಕಫಕಾರಕ. ಆದ್ದರಿಂದ ಅದನ್ನು ತ್ಯಜಿಸಬೇಕು. ವಾತ, ಪಿತ್ತ, ಕಫ ಪ್ರಕೃತಿಯನ್ನು ತಡೆಗಟ್ಟಲೂ ಈ ಆಹಾರ ಕ್ರಮ ಅತ್ಯಂತ ವೈeನಿಕವಾಗಿದೆ. ಈ ಅವಧಿಯಲ್ಲಿ ಜೀರಿಗೆ, ಮೆಣಸಿನ ಕಾಳನ್ನು ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುವದು ವಾತಾವರಣದ ಅನ್ವಯವೂ ಆರೋಗ್ಯದಾಯಕ ಎಂಬ ಅಭಿಪ್ರಾಯ ಆಯುರ್ವೆದ ವೈಧ್ಯರದ್ದಾಗಿದೆ.

ಕೃಪೆ ವನ್ ಇಂಢಿಯಾ

ಶಾಸ್ತ್ರೋಕ್ತವಾದ ಸಂನ್ಯಾಸ ವಿಧಿ ವಿಧಾನಗಳು

ಶಾಸ್ತ್ರೋಕ್ತವಾದ ಸಂನ್ಯಾಸ ವಿಧಿ ವಿಧಾನಗಳು

Veda-Vyasa-Devaru-Acharya-Madhwa

ಶಾಸ್ತ್ರೋಕ್ತವಾದ ಸಂನ್ಯಾಸ ವಿಧಿ ವಿಧಾನಗಳು :-

( ಸಂನ್ಯಾಸ ವಿಧಿ ವಿಧಾನಗಳು 3 ದಿನಗಳ ಪ್ರಕ್ರಿಯೆ )

ಅ) ಸಂನ್ಯಾಸ ಸ್ವೀಕಾರ ಮಾಡುವುದಕ್ಕೆ ಪೂರ್ವದಲ್ಲಿ ಸಜ್ಜನರ ಸಮಕ್ಷಮದಲ್ಲಿ ಗುರುಗಳು ಶಿಷ್ಯ ಸ್ವೀಕಾರ ಮಾಡುತ್ತಿದ್ದೇನೆಂದು ಫಲ ಮಂತ್ರಾಕ್ಷತೆ ಪಡೆಯಲೇಬೇಕು.

ಆ ) ಫಲ ಮಂತ್ರಾಕ್ಷತೆ ಸ್ವೀಕಾರ ಮಾಡಿದ ವ್ಯಕ್ತಿ ಆದಿನ ಉಪವಾಸದಿಂದ ಇರಬೇಕು.

ಇ) ಮರುದಿನ ಬೆಳಗ್ಗೆ ಪಿಂಡಪ್ರಧಾನ ಮಾಡಿ ತನ್ನ ಪಿತೃಗಳಿಗೆ ಸಂಬಂಧಪಟ್ಟ ಶ್ರಾದ್ಧಾದಿಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ತನ್ನ ಮಗನಿಗೆ ಕೊಟ್ಟು ಇನ್ನುಮುಂದೆ ನನಗೂ – ಇವರಿಗೂ ಯಾವ ಸಂಬಂಧ ಇಲ್ಲವೆಂದು ಹೇಳಿ ಆ ಪಿಂಡವನ್ನು ತಮ್ಮ ಮಗನಿಗೆ ಒಪ್ಪಿಸುತ್ತಾರೆ. ಅದರಂತೆ ಅವರು ನಡೆಸಿಕೊಂಡು ಹೋಗುತ್ತಾರೆ. ಇಲ್ಲಿಗೆ ಪ್ರಾಪಂಚಿಕ ಸಂಬಂಧಗಳು ಕಡೆದು ಹೋಗುತ್ತದೆ!!

ಈ) ಕ್ಷೌರ ನಂತರ ಜೀವತ್ ಶ್ರಾದ್ಧ ” ಆತ್ಮಶ್ರಾದ್ಧ ” ಮಾಡಿಕೊಳ್ಳುತ್ತಾರೆ. ಆದಿನ ಅವರನ್ನು ಯಾರೂ ನೋಡಕೂಡದು. ಕಾರಣ ಅವರು ಒಂದುರೀತಿ ಪ್ರೇತಯಿದ್ದಂತೆ. ಆದಿನವೂ ಉಪವಾಸದಿಂದ ಇರಲೇಬೇಕು ಮತ್ತು ಜಾಗರಣೆ ಮಾಡಬೇಕು!!

ಉ ) ಮರುದಿನ ಬೆಳಿಗ್ಗೆ ಪ್ರಾತಃ ಕಾಲದಲ್ಲಿ ಎದ್ದು…

ಶಾಕಲ ಹೋಮ
ಪುರುಷಸೂಕ್ತ ಹೋಮ
ವಿರಜಾ ಹೋಮ

ಮಾಡಿ ಸಂನ್ಯಾಸವನ್ನು ಸ್ವೀಕರಿಸಬೇಕು! ಇಲ್ಲಿಗೆ ಸಂನ್ಯಾಸ ಸ್ವೀಕಾರ ಮಾಡಿದ ವ್ಯಕ್ತಿಗೂ – ಸಂನ್ಯಾಸ ಪೂರ್ವದಲ್ಲಿ ಅವರ ಸಂಬಂಧಿಗಳಾದ : –

ಹೆಂಡತಿ – ಮಕ್ಕಳು – ಬಂಧು ಬಾಂಧವರ ಸಂಬಂಧ ಸಂಪೂರ್ಣವಾಗಿ ಕಡೆದು ಹೋಗುತ್ತದೆ.

” ಸಂನ್ಯಾಸ ಪದ್ಧತಿ ”

ನಿಮಜ್ಯಾಪ್ಸು ತ್ರಿಶೋ ಹಸ್ತೇ ಶಿಖಾಯಜ್ಞೋಪವೀತಕೇ ।
ಆದಾಯ ಜುಹುಯಾದಪ್ಸು ಪ್ರಣವೇನ ಸಮಾಹಿತಃ ।।

ನೀರಿನಲ್ಲಿ ಮೂರುಬಾರಿ ಮುಳುಗಿ ಶಿಖಾ ಯಜ್ಞೋಪವೀತಗಳನ್ನು ಕೈಯಲ್ಲಿ ಹಿಡಿದು ” ವನಾಯ ಸ್ವಾಹಾ ” ಇತ್ಯಾದಿ ಮಂತ್ರಗಳಿಂದ ಅವುಗಳನ್ನು ನೀರಿನಲ್ಲಿ ವಿಸರ್ಜಿಸಿ ಪ್ರಣವದಿಂದ ಭಗವಂತನನ್ನು ಧ್ಯಾನಿಸಬೇಕು.

ಅನಂತರ ಗೃಹಸ್ಥನು ನೀಡುವ ಕಟಿಸೂತ್ರ – ಕೌಪೀನ ಮತ್ತು ಎರಡು ಕಾವಿಶಾಟಿಗಳನ್ನು ಧಾರಣೆ ಮಾಡಿಕೊಂಡು..

” ಸಂನ್ಯಸ್ತಂ ಮಯಾ ”

ಎಂದು ವಿಧಿವತ್ತಾಗಿ ಗಟ್ಟಿಯಾಗಿ ಉಚ್ಛರಿಸಬೇಕು.

ಅನಿರುದ್ಧಾದಿ ಭಗವದ್ರೂಪಗಳಿಗೆ ವಿತ್ತ – ದೇಹ – ಇಂದ್ರಿಯ – ಅಂತಃಕರಣ – ಸ್ವಾತ್ಮಗಳನ್ನು ಸಮರ್ಪಿಸಬೇಕು.

ಮಂತ್ರ ಪೂರ್ವಕ ದಂಡಧಾರಣೆ ಮಾಡಬೇಕು.

ಪ್ರಣವಮಂತ್ರೋಪದೇಶಕರಾದ ಗುರುಗಳು ತಪ್ತ ಮುದ್ರಾಧಾರಣೆ – ತಂತ್ರಸಾರೋಕ್ತ ವಿಧಿಯಿಂದ ಪೂಜಿತವಾದ ” ಪಟ್ಟಾಭಿಷೇಕ ಕಲಶ ತೀರ್ಥ ” ವನ್ನು ಶಿಷ್ಯನಿಗೆ ” ಶಂ ನಃ ” ಇತ್ಯಾದಿ ಸೂಕ್ತ ಮತ್ತು ಪುರುಷ ಸೂಕ್ತ ಮಂತ್ರಗಳಿಂದ ಪ್ರೋಕ್ಷಿಸಿ ಅಭಿಷೇಕ ಮಾಡಬೇಕು.

” ವಿಷ್ಣು ಸರ್ವೋತ್ತಮತ್ವ ಪ್ರತಿಪಾದನೆ ಪ್ರತಿಪಾದನೆ ಜೀವನದ ಉಸಿರಾಗಿರಬೇಕೆಂದೂ; ನಿರಂತರ ಶಾಸ್ತ್ರ ಪಾಠ ಪ್ರವಚನ ಪ್ರಣವ ಜಪಾದ್ಯಾಸಕ್ತನಾಗಿ ಸಂನ್ಯಾಸ ದೀಕ್ಷೆಯ ಉದ್ಧೇಶವನ್ನು ಸಾರ್ಥಕಗೊಳಿಸಬೇಕೆಂದೂ ” ಉಪದೇಶಿಸಬೇಕು!

ಸಂನ್ಯಾಸ ಪಡೆದ ವ್ಯಕ್ತಿಯಲ್ಲಿ ” ಸಾಕ್ಷಾತ್ ಶ್ರೀಮನ್ನಾರಾಯಣನ ಸನ್ನಿಧಾನ ” ಬರುತ್ತದೆ. ಆಗ ಅವರು ” ಸಾರ್ವಜನಿಕ ಸ್ವತ್ತು ” ಆಗುತ್ತಾರೆ. ಇವರಿಗೆ ಯಾವುದೇ ಪ್ರಾಪಂಚಿಕ ಸಂಬಂಧಗಳು ಇರುವುದಿಲ್ಲ. ಇವರು ಸರ್ವತಂತ್ರ ಸ್ವತಂತ್ರರಾಗುತ್ತಾರೆdownload (1)

ಕೃಪೆ  – Nagraj

ಶ್ರೀ ವಿಜಯೀ೦ದ್ರತೀರ್ಥಕೃತ ದುರಿತಾಪಹಾರ ಸ್ತೋತ್ರ – ಒಂದು ಚಿಂತನೆ

ಶ್ರೀ ವಿಜಯೀ೦ದ್ರತೀರ್ಥಕೃತ ದುರಿತಾಪಹಾರ ಸ್ತೋತ್ರ – ಒಂದು ಚಿಂತನೆ

Viji1

ಅದ್ಭುತ ಪ್ರತಿಭೆಯೇ ಮೂರ್ತಿವೆತ್ತಂತಿರುವ ಅಮಾನುಷಚರ್ಯೆಯ ಶ್ರೀ ವಿಜಯೀ೦ದ್ರತೀರ್ಥರು ರಚಿಸಿರುವ ” ದುರಿತಾಪಹಾರ ಸ್ತೋತ್ರ ” ವು ಕಲಿಕಾಲದ ಮಾನವನು ಪ್ರತಿನಿತ್ಯವೂ ತನ್ನ ತಲೆ ಮೊದಲು ಕಾಲಿನ ವರೆಗಿನ ಅವಯವಗಳಿಂದ ಮಾಡುತ್ತಿರುವ ಪಾಪರಾಶಿಯ ಕೋಶದಂತಿದೆ.

ಕಣ್ಣು – ಕಿವಿ – ನಾಲಿಗೆ – ಮೂಗು – ಚರ್ಮ ಎಂಬ ಐದು ಜ್ಞಾನ ಜನಕ ಇಂದ್ರಿಯಗಳಿಂದಲೂ; ವಾಕ್ – ಪಾಣಿ – ಪಾದ – ಪಾಯು – ಗುಹ್ಯೇ೦ದ್ರಿಗಳೆಂಬ ಐದು ಕರ್ಮೇಂದ್ರಿಗಳ ಮೂಲಕವಾಗಿಯೂ ನಿರಂತರದಲ್ಲೂ ಆಗುತ್ತಲಿರುವ ಪಾಪ ಕರ್ಮಗಳ ಮರ್ಮ ಸೂಚಕವಾದ ಸೂಜಿಗಲ್ಲಿನಂತಿದೆ.

ಎಂಥಹ ಕಡು ಪಾಪಿಯೂ ಕಲ್ಲಿನಂತಹಾ ಮನಸ್ಸನ್ನೂ ಸಹ ಪಾಪ ಮಾರ್ಗದಿಂದ ಸನ್ಮಾರ್ಗಕ್ಕೆ ಸೆಳೆಯುವ ಸುಳಿಯಂತಿದೆ.

ಘೋರವಾದ ಪಾಪ ಕೂಪದಲ್ಲಿ ಮುಳುಗಿದವನಾಗಿ; ಪಾಪಾ೦ಧಕಾರಮಯ ಜೀವಿಯಾಗಿ; ಪಾಪ ಪರಂಪರೆಯಿಂದ ಬಿಡುಗಡೆ ಪಡೆಯುವ ಹೆದ್ದಾರಿಯನ್ನು ಕಾಣದಂತೆ ದುಃಖಮಯವಾದ ಜೀವನ ಯಾತ್ರೆಯಲ್ಲಿ ನಿತ್ಯವೂ ನೊಂದು – ನೊಂದು; ಬೆಂದು ಬೆಂಡಾಗಿ ಬಳಲಿದ ಓರ್ವ ಕಡು ಪಾಪಿಯ ಹೇಯವಾದ ಜೀವನ ಚರ್ಯೆಯನ್ನು ಮನಮುಟ್ಟುವಂತೆ ವರ್ಣಿಸಿರುವ; ಪಶ್ಚಾತ್ತಾಪ ಬುದ್ಧಿಯಿಂದ ಪರಿತಪಿಸಿ; ಕಟ್ಟಕಡೆಗೆ ವೈರಾಗ್ಯ ಬುದ್ಧಿಯಿಂದ ಸರ್ವೋತ್ತಮನಾದ ಪರಮಾತ್ಮನಲ್ಲಿ ಮೊರೆಹೋಗುವವನ ಪಶ್ಚಾತ್ತಾಪ ಪ್ರಾಯಶ್ಚಿತ್ತ ರೂಪವಾದ ಕಾವ್ಯದಂತಿದೆ ಈ ” ಪಾಪವಿಮೋಚನ ಸ್ತೋತ್ರ “!

ವಿವಿಧ ಸಾಂಸಾರಿಕ ದುಃಖದರ್ಶನದಿಂದ ಪರಿತಪ್ತನಾದವನ ದಾರುಣ ಸಂಗತಿಯನ್ನು ಎತ್ತಿ ತೋರಿಸಿ; ಮೋಕ್ಷ ಯೋಗ್ಯನಾದ ಚೇತನನ ವಿಷಯದಲ್ಲಿ ದಯಾಮಯನಾದ ಪರಮಾತ್ಮನ ಅನುಗ್ರಹ ವಿಶೇಷದಿಂದ ಅನಾದಿಯಾದ ಭಾವರೂಪವಾದ ಅಜ್ಞಾನವೆಂಬ ( ಅವಿದ್ಯೆಯೆಂಬ ); ಶಯ್ಯೆಯಿಂದ ( ಹಾಸಿಗೆಯಿಂದ ); ಉತ್ತಿಷ್ಠತ ( ಎದ್ದೇಳಿ ); ಜಾಗ್ರತ ( ಎಚ್ಚೆರಗೊಳ್ಳಿ ); ಪ್ರಾಪ್ಯ ವರಾನ್ ನಿಬೋಧತ ( ಶ್ರೇಷ್ಠರಾದ ನಿಯತ ಗುರುಗಳನ್ನು ಸೇರಿ ಪರಮಾತ್ಮನನ್ನು ತಿಳಿಯಿರಿ ) ಎಂಬ ದಿವ್ಯ ವೇದವಾಣಿಯ ಸೂಚನೆಯಂತೆ ಪೂರ್ವ ಪುಣ್ಯ ಪ್ರಭಾವದಿಂದ ಎಚ್ಚರಗೊಂಡು ಆ ದಯಾಮಯನಾದ; ಸರ್ವಸ್ವಾಮಿಯಾದ; ಸರ್ವೋತ್ತಮನಾದ ದೇವದೇವನಲ್ಲಿ ಅಡಿಗಡಿಗೂ; ನುಡಿನುಡಿಗೂ; ಕ್ಷಣಕ್ಷಣಕ್ಕೂ ಅಂಗಲಾಚಿ ಕ್ಷಮೆ ಬೇಡಿ, ಅನನ್ಯ ಗತಿಕನಾಗಿ ಪ್ರಾರ್ಥಸಿ ” ತ್ವಮೇವ ಶರಣಂ ಮಮ ” ( ನೀನೇ ಗತಿ ); ಶ್ರೀಮನ್ನಾರಾಯಣನ ಎರಡೂ ಪಾದಗಳನ್ನು ಶರಣು ಹೊಂದಿದ್ದೇನೆ, ಮೋಕ್ಷಾಪೇಕ್ಷಿಯಾದ ನಾನು ಮೋಕ್ಷಪ್ರದನಾದ ಮುಕುಂದನನ್ನು ಶರಣನನ್ನಾಗಿ ಹೊಂದುತ್ತೇನೆ ಎಂಬುದಾಗಿ ತಿಳಿಸುವ ಮಾತ್ರಾರ್ಥದ ಸಾರರೂಪವಾಗಿದೆ!!

” ಭಗವದ್ಗೀತಾ ” ದಲ್ಲಿ…

ಸರ್ವಧರ್ಮಾನ್ ಮಾಮೇಕಂ ಶರಣಂ ವ್ರಜ ।
ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚ: ।।

ವೇದ ವಿರುದ್ಧಗಳಾದ ಇತರ ಧರ್ಮಗಳನ್ನು ದೂರ ಮಾಡಿ ( ಬಿಟ್ಟು ) ಅಥವಾ ಸರ್ವ ಅವೈಷ್ಣವ ಧರ್ಮಗಳನ್ನು ಪರಿತ್ಯಜಿಸಿ ಫಲಾಪೇಕ್ಷೆ ಇಲ್ಲದಂತೆ; ನಾನೇ ( ಶ್ರೀ ಕೃಷ್ಣ ಪರಮಾತ್ಮನಾದ ನಾನೇ ) ಸರ್ವೋತಮನೆಂದು ತಿಳಿದು; ಅವನಲ್ಲಿಯೇ ( ಶ್ರೀ ಕೃಷ್ಣನಲ್ಲಿಯೇ ) ಸರ್ವದಾ ಸರ್ವಾಧಿಕವಾದ ಪ್ರೇಮ ಪೂರ್ವಕವಾಗಿ ಸರ್ವವನ್ನೂ ಅರ್ಪಿಸುತ್ತಾ; ಮೂರು ಬಗೆಯಾದ ಸಕಲ ವ್ಯಾಪಾರಗಳನ್ನೂ ಅವನ ( ಶ್ರೀ ಕೃಷ್ಣನ ) ಪೂಜಾ ರೂಪವಾದುದೆಂದು ಅನುಸಂಧಾನ ಮಾಡುತ್ತಾ…

ನಾನು ಅವನ ದಾಸ ( ಭಕ್ತ ); ಅವನಾದರೂ ನನ್ನ ಸ್ವಾಮಿ ( ರಕ್ಷಕ ) ಎಂದು ನೆನೆಯುತ್ತಾ ನಿತ್ಯ ನಿರಂತರದಲ್ಲೂ ಸರ್ವೋತ್ತಮನಾದ ಆ ಪರಮಾತ್ಮನ ( ಶ್ರೀ ಕೃಷ್ಣನ ) ಅನುಚಿಂತನೆಯೆಂಬ ಶರಣಾಗತಿಯನ್ನು ಪಡೆದ ಭಕ್ತನನ್ನು ನಾನು ಸರ್ವ ಪಾಪಗಳಿಂದಲೂ ಬಿಡುಗಡೆ ಮಾಡುತ್ತೇನೆಂಬ ಪರಮಾತ್ಮನ ದಿವ್ಯ ಸಂದೇಶದಂತೆಯೂ; ಆತ್ಯಂತಿಕವಾಗಿ ಆ ಸರ್ವೋತ್ತಮನಾದ ಶ್ರೀ ಕೃಷ್ಣ ಪರಮಾತ್ಮನಲ್ಲಿ ಶರಣಾಗತಿಯನ್ನು ಸಂಸಾರ ಕ್ಲೇಶ ಪರಂಪರೆಯಾದ ಪ್ರಕ್ಷುಬ್ಧವಾದ ಮನಸ್ಸಿಗೆ ಭಕ್ತಿ ಭಾವವನ್ನು ಖಚಿತ ಪಡಿಸುವ; ಪ್ರಾಥಿಸುವ ಪ್ರಾರ್ಥನೆ ಮಾಲಿಕೆಯಂತಿದೆ.

ಇಡೀ ಮಾನವನ ಜೀವನ ಕ್ಷೆತ್ರದಲ್ಲಿ ವಿಚ್ತ್ರವಾದ ವ್ಯತ್ಯಾಸವನ್ನುಂಟು ಮಾಡಿ ಆ ಬಿಂಬ ರೂಪಿಯಾದ ದಯಾಮಯನ ದಿವ್ಯ ಸಾಕ್ಷಾತ್ಕಾರಕ್ಕೆ ತಕ್ಕಂತಹ ಅಡಿಪಾಯದಂತಿರುವ ವೈರಾಗ್ಯದಿಂದ ದೃಢವಾದ ಭಕ್ತಿಯನ್ನು ತಂದುಕೊಡುವ ಶರಣಾಗತಿ ಮಂತ್ರದ ರಹಸ್ಯವಾದ ಸ್ವಾರಸ್ಯದಿಂದ ಗರ್ಭಿತವಾಗಿದೆ.

ಇದೇ ವಿಷಯವು ” ಶ್ರೀ ಮಹಾವಿಷ್ಣು ಪುರಾಣ ” ದಲ್ಲಿ…

ಸರ್ವೋತ್ತಮತ್ವ ವಿಜ್ಞಾನ ಪೂರ್ವಂ ತತ್ರ ಮನಃ ಸದಾ ।
ಸರ್ವಾಧಿಕ ಪ್ರೇಮಯುಕ್ತ೦ ಸರ್ವಸ್ಯಾತ್ಮ ಸಮರ್ಪಣಮ್ ।।
ಅಖಂಡಾ ತ್ರಿವಿಧಾ ಪೂಜಾ ತದ್ರತೈವ ಸ್ವಭಾವತಃ ।
ರಕ್ಷತೀತ್ಯೇವ ವಿಶ್ವಾಸಃ ತದೀಯೋsಹಮಿತಿ ಸ್ಮೃತಃ ।।
ಶರಣಾಗತಿರೇಷಾ ಸ್ಯಾತ್ ವಿಷ್ಣು: ಮೋಕ್ಷಫಲಪ್ರದಾ ।।

” ರಾಮಾಯಣ ” ದಲ್ಲಿ….

ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ ।
ಅಭಯಂ ಸರ್ವಭೂತೇಭ್ಯೋ ದದಾಮೇತಾತ್ ವ್ರತಂ ಮಮ ।।

ದೃಢ ಚಿತ್ತದಿಂದ ಏಕಾಂತ ಭಕ್ತಿಯಿಂದ ಯಾವನು ನನ್ನನ್ನೇ ಮೊರೆಹೋಗುತ್ತಾನೆಯೋ ಅವನಿಗೆ ಯಾವ ಕಾಲದಲ್ಲಿಯೂ ಯಾರಿಂದಲೂ ಭಯವಿಲ್ಲವೆಂದು ಶ್ರೀ ರಾಮಚಂದ್ರದೇವರು ಭಕ್ತನಿಗೆ ಅಭಯವನ್ನಿತ್ತಿರುತ್ತಾನೆ!!

” ಶ್ರೀ ಪಂಚರಾತ್ರ ” ದಲ್ಲೂ ಶರಣಾಗತಿಯ ಪ್ರಕಾರಗಳು….

ಅನುಕೂಲಸ್ಯ ಸಂಕಲ್ಪ: ಪ್ರತಿಕೂಲಸ್ಯ ವರ್ಜನಮ್ ।
ರಕ್ಷಿಪ್ಯತೀತಿ ವಿಶ್ವಾಸಃ ಗೋಪ್ತೃತ್ವವರಣಂ ತಥಾ ।।
ಆತ್ಮ ನಿಕ್ಷೇಪಕಾರ್ಪಣ್ಯೇ ಷಡ್ವಿಧಾ ಶರಣಾಗತಿ: ।
ಅನಯಾ ಚ ಪ್ರಪತ್ಯಾ ಮಾಂ ಆಕಿಂಚನೈಕಪೂರ್ವಕಮ್ ।।
ಮಾಂ ಮಾಧವ ಇತಿ ಜ್ಞಾತ್ವಾ ಮಾಂ ಗಚ್ಛೇಚ್ಛರಣಂ ನರಃ ।
ಏವಂ ಮಾಂ ಶರಣಂ ಗಚ್ಛನ್ ಕೃತಕೃತ್ಯೋ ಭವಿಷ್ಯತಿ ।।

ಹಿಂದೆ ಹೇಳಿದ ಶ್ರೀ ಮಹಾವಿಷ್ಣು ಪುರಾಣ ವಚನದ ಅಭಿಪ್ರಾಯವೇ ಈ ಪಂಚರಾತ್ರದ ವಚನವಾಗಿದೆ. ಈ ಪಾಪವಿಮೋಚನ ಸ್ತೋತ್ರದ ಮುಖ್ಯ ತಾತ್ಪರ್ಯವೂ ಸಹ ಇದೇ ಆಗಿರುತ್ತದೆ.

viji 2

ಈ ಸ್ತೋತ್ರವು ಹಿಂದೆಯೇ ಹೇಳಿರುವಂತೆ ಘೋರವಾದ ಈ ಕಲಿಕಾಲದಲ್ಲಿ ಪಾಪಿಗಳ ಸಂಸರ್ಗದಿಂದ ನಿತ್ಯವೂ ಪಾಪ ಕಾರ್ಯಾಚರಣೆಯಿಂದ ಅತಿಯಾಗಿ ನೊಂದಿರುವ ಮಾನವನ ಜೀವನ ಕ್ಷೇತ್ರದಲ್ಲಿ ನಡೆಯಲಿರುವ ನೈಜ ಸಂಗತಿಯನ್ನು ಚಿತ್ರಿಸಿರುವುದಾಗಿದೆ.

ಅತಿಕ್ರಾಂತಸುಖಾ: ಕಾಲಾ: ಪ್ರತ್ಯುಪಸ್ಥಿತದಾರುಣಃ ।
ಶ್ವ: ಶ್ವ: ಪಾಪೀಯದಿವಾಸಃ ಪೃಥುವೀ ಗತಯೌವನಾ ।।

ಎಂಬ ಭಾರತಾಚಾರ್ಯರ ವಚನದಂತೆ ಈ ಕಲಿಯುಗದಲ್ಲಿ ಇಂದಿಗಿಂತಲೂ ಮುಂದೆ ಮುಂದಿನ ದಿನಗಳು ಪಾಪೀಯ ದಿನಗಳಾಗಿವೆ.

ಈ ಸ್ತೋತ್ರದಲ್ಲಿ ಹೇಳಿರುವ ” ಮೇ, ಮಮ, ಅಹಂ ” ಇತ್ಯಾದಿ ಪದಗಳು ಇದನ್ನು ಮಾನವನಿಗೆ ಸಂಬಂಧಿಸತಕ್ಕುದ್ದಾಗಿದೆ.

” ಪಾಪೊsಹಂ ಪಾಪಕರ್ಮಾಹಂ ಪಾಪಾತ್ಮ ಪಾಪಸಂಭವಃ ”

ಇತ್ಯಾದಿ ವಾಕ್ಯಗಳಿಂತಿವೆಯೆಂಬುದನ್ನು ಗಮನಿಸಬೇಕು.

” ಜಿತಂತೇ ಸ್ತೋತ್ರ ” ದಲ್ಲಿ…

ಋಜುವರೇಣ್ಯರೂ; ಜೀವೋತ್ತಮರಾದ ಶ್ರೀ ಚತುರ್ಮುಖ ಬ್ರಹ್ಮದೇವರು ಸರ್ವೋತ್ತಮನಾದ ಶ್ರೀ ಹರಿಯನ್ನು ಕುರಿತು…

ಕೃಶ೦ ಕೃತಘ್ನ೦ ದುಷ್ಕರ್ಮಕಾರಿಣಂ ಪಾಪಭಾಜನಮ್ ।
ಅಪರಾಧಸಹಸ್ರಾಣಾಮಾಕರಂ ವಿಷಯಾರ್ಣವಾಮಗ್ನ೦ ।।

ಇತ್ಯಾದಿಯಾಗಿ ತಮ್ಮನ್ನು ಬಣ್ಣಿಸಿಕೊಂಡಂತೆ ಇಲ್ಲಿಯೂ ತಿಳಿಯಬೇಕು.

ಶ್ರೀ ಇಂದ್ರದೇವರ ಅಂಶ ಸಂಭೂತರೂ, ಸರ್ವಜ್ಞ ಕಲ್ಪರಾದ ಶ್ರೀ ಜಯತೀರ್ಥರು ಭಕ್ತಿ ವಿವಶರಾಗಿ ಶ್ರೀಮದ್ವಿಷ್ಣುತತ್ತ್ವ ನಿರ್ಣಯ ಟೀಕಾ ಅಂತ್ಯದಲ್ಲಿ…

ಆನಂದತೀರ್ಥ ಭಗವದ್ವಚಸಾಂ ವಿಶಿಷ್ಟ
ವ್ಯಾಖ್ಯಾನ ಕರ್ಮಣಿ ಸುರಾ ಅಧಿಕಾರಿಣೋsತ್ರ ।
ಯನ್ಮಾದೃಶೋsಪಿ ಯತತೇ ತದತೀವ ಹಾಸ್ಯ೦
ಕಿಂ ನಾಮ ಭಕ್ತಿವಿವಶಸ್ಯ ವಿಭೂಷಣಂ ತತ್ ।।

ಎಂದು ತಮ್ಮನ್ನು ಕುರಿತು ಆಡಿಕೊಂಡಿರುವಂತೆ ತಿಳಿಯಬೇಕು ಮತ್ತು ಸ್ವಾಹಂಕಾಖಂಡನ ದೃಷ್ಟಿಯಿಂದಲೂ ಈ ತೆರನಾಗಿ ಹೇಳಿಕೊಂಡಿರುವುದಕ್ಕೆ ಅನೇಕ ಉದಾಹರಣೆಗಳಿವೆ.

ಶ್ರೀಮದಾನುವ್ಯಾಖ್ಯಾನಕ್ಕೆ ವ್ಯಾಖ್ಯಾನವಾದ ” ಶ್ರೀಮನ್ನ್ಯಾಯಸುಧಾ ” ಗ್ರಂಥದಲ್ಲಿ ಶ್ರೀ ಜಯತೀರ್ಥರು ಶ್ರೀಮದಾಚಾರ್ಯರ ಗ್ರಂಥಕ್ಕೆ ತಕ್ಕ ವ್ಯಾಖ್ಯಾನವನ್ನು ರಚಿಸಲು ಇತರ ಶಾಸ್ತ್ರ ಪಾಂಡಿತ್ಯ ಪ್ರೌಢಿಮೆಯು ತಮ್ಮಲ್ಲಿ ಶ್ರೀ ಹರಿವಾಯುಗುರುಗಳ ಅನುಗ್ರಹದಿಂದಿರುವುದಾದರೂ ಆರಂಭದಲ್ಲಿ…

” ನ ಶಬ್ದಾಬ್ದೌ ಗಾಢಾ: ”

ಇತ್ಯಾದಿಯಾಗಿ ಹೇಳಿರುವಂತೆಯೂ; ಕೊನೆಯೆಲ್ಲಿಯೂ…

ಪರಂ ಶ್ರದ್ಧಾ ಜಾಡ್ಯಾದಕೃಷಿ ಕೃತಿಮಾಚಾರ್ಯ ವಚಸಿ
ಸ್ಖಲನ್ನಪ್ಯೇತಸ್ಮಾಜ್ಜಗತಿ ನಹಿ ನಿಂದೋsಸ್ಮಿ ವಿದುಷಾಮ್ ।।

ಎಂಬುದಾಗಿಯೂ, ಶ್ರೀ ಪರಿಮಳಾಚಾರ್ಯರೂ ಕೂಡಾ ” ಪರಿಮಳ ” ದ ಅಂತ್ಯದಲ್ಲಿ…

ಜ್ಞಾನಾಬ್ಧಿರಪ್ಯವಾದೀದ್ಯತ್ ಸ್ಖಲತ್ಯಂ ಸ್ವಾತ್ಮನಃ ಸದಾ ।
ಮಾದೃಶಾನಾ೦ ಸ್ಖಲತ್ವಂ ಕಿಂ ವಾಚ್ಯಂ ಕ್ಷಾಮ್ಯಂತು ತದ್ಬುಧಾ: ।।

ಎಂದು ನುಡಿದಿರುತ್ತಾರೆ!!

ಇದೇ ರೀತಿ ಆಯಾ ಪಾಪಗಳನ್ನು ಮಾಡಿರುವ ಭಕ್ತನು ಆಡಿರುವ ಮಾತಿನೆಂತೆಂಬ ದೃಷ್ಟಿಯಿಂದ ಮತ್ತು ಅಭಿಪ್ರಾಯದಿಂದ ಶ್ರೀ ವಿಜಯೀ೦ದ್ರತೀರ್ಥರು ಅದನ್ನು ಎತ್ತಿ ತೋರಿಸುತ್ತಾರೆ!!

ಶ್ರೀ ಜಗನ್ನಾಥದಾಸರು…

ಸಿರಿ ರಮಣ ತವ ಚರಣ ಸೇವೆ ।
ದೊರಕುವುದು ಹ್ಯಾಂಗಿನ್ನು ।
ಪರಮ ಪಾಪಿಷ್ಠ ನಾನು ।।

ಎಂದು ನಮ್ಮನ್ನು ಉಧ್ದೇಶಿಸಿ ಹೇಳಿದ್ದಾರೆ!!

ಎಂಥಹಾ ಸದಾಚಾರಿಯೇ ಆಗಲೀ ಆತನಿಂದ ಈ ಭೂಲೋಕದಲ್ಲಿನ ಮಾನವ ಜನ್ಮದಲ್ಲಿ ಅತಿ ತೃಪ್ತಿಕರವಾಗಿ ಲೇಶಮಾತ್ರವೂ ಲೋಪವಿಲ್ಲದಂತೆ ವಿಧಿ ವಿಹಿತಗಳಾದ ನಿತ್ಯ ನೈಮಿತ್ತಿಕ ಕರ್ಮಗಳನ್ನು ಆಚರಿಸಲು ಸಾಧ್ಯವೇ ಇಲ್ಲ. ಈ ವಿಷಯವನ್ನು ” ಶ್ರುತಿ ” ಯಲ್ಲಿ…

ವಿಧಿವಿಹಿತಂ ಸರ್ವಮನುತಿಷ್ಠ೦ತಿ ದೇವಾ: ।
ಅರ್ಥಮೇವ ಮುನಯಃ ।
ದಶಾಂಶತೋ ಮನುಷ್ಯಾ: ।। ಇತಿ ಶ್ರುತೇ: ।।

ದಿನದಿನಕ್ಕೂ ರಾಶಿರಾಶಿಯಾಗಿ ಗುಂಪು ಕೂಡುತ್ತಿರತಕ್ಕ ಪ್ರಾರಭ್ದೇತರಗಳಾದ ಸಂಚಿತ ಕರ್ಮಗಳ ನಾಶಕ್ಕೆ ಬಿಂಬ ರೂಪಿಯಾದ ಪರಮಾತ್ಮನ ದಿವ್ಯ ಸಾಕ್ಷಾತ್ಕಾರ ಹೊರತು ಬೇರೆ ಉಪಾಯವೇ ಇಲ್ಲ.

ಗೀತಾಚಾರ್ಯನಾದ ಶ್ರೀ ಕೃಷ್ಣನ ವಚನ…

ಜ್ಞಾನಾಗ್ನಿ: ಸರ್ವಕರ್ಮಾಣಿ ಭಸ್ಮಸಾತ್ಕುರುತೇsರ್ಜುನಃ ।

ಜೀವನಿಗಿರತಕ್ಕ ಸಕಲ ಬಂಧಗಳಿಗೂ ಆ ಪರಮಾತ್ಮನೇ ಸ್ವಾಮಿಯಾಗಿದ್ದಾನೆ. ಬಂಧಕನೂ – ಬಂಧವಿಮೋಚಕನೂ – ಕೈವಲ್ಯದಾತನೂ ಆದ ಪರಬ್ರಹ್ಮನೆಂದೆನಿಸಿರುವ ಆ ಸರ್ವೋತ್ತಮನನ್ನೇ ಶರಣು ಹೋಗಬೇಕು. ಅನ್ಯಥಾ ಗತಿಯೇ ಇಲ್ಲ!!

” ದುರಿತಾಪಹಾರ ಸ್ತೋತ್ರ ”

ಆದಿ :

ಸುಕೃತಂ ತಿಲಮಾತ್ರತುಲ್ಯಮೀಶ ಕ್ರಿಯತೇ ನೈವ ಮಯೈಕವತ್ಸರೇಪಿ ।
ಅಪಿ ತು ಕ್ರಿಯತೇ ಸದಾಘಪೂಗ: ಪ್ರತಿಯಾಮಂ ಸಕಲೇಂದ್ರಿಯೈರ್ಮೂಕುಂದ: ।।

ಅಂತ್ಯ :

ವಿಜಯೀ೦ದ್ರಯತೀಶ್ವರೋ ವ್ಯತಾನೀತ್ ಸ್ತುತಿಮೇನಾ೦ ದುರಿತಾಪಹಾಂ ಮುರಾರೇ: ।
ಪರಮಾದರತಃ ಸದಾ ಪಠದ್ಯೋ ನಿಖಿಲೈ: ಪಾಪಚಯೈರ್ಭವೇ ಸ ಮುಕ್ತ: ।।

ಇಂಥಹಾ ದುರಿತಾಪಹರ ಸೂತ್ರವನ್ನು ಯಾರು ನಿತ್ಯವೂ ಪಠಿಸುತ್ತಾರೆಯೋ ಅಂಗಲಾಚಿ ಪರಮಾತ್ಮನನ್ನು ಬಿಡುತ್ತಾರೆಯೋ ಅವರು ಕೃಪಾ ಸಮುದ್ರನಾದ ಶ್ರೀ ಹರಿಯ ಪರಮಾನುಗ್ರಹಕ್ಕೆ ಪಾತ್ರರಾಗುವುದರಲ್ಲಿ ಲೇಶಮಾತ್ರವೂ ಸಂದೇಹವಿಲ್ಲ!

ಅಂಥಹಾ ಶ್ರೀ ಹರಿಯ ವಿಶೇಷ ಅನುಗ್ರಹದಿಂದ ಕ್ರಮವಾಗಿ ಬಿಂಬ ಸಾಕ್ಷಾತ್ಕಾರವನ್ನು ಪಡೆದು ಅಪರೋಕ್ಷಜ್ಞಾನಿ ಎನಿಸಿಕೊಂಡವರಾಗಿ ಸಕಲ ಸಂಚಿತ ಪಾಪ ರಾಶಿಯಿಂದ ಬಿಡುಗಡೆಯನ್ನು ಪಡೆಯುತ್ತಾರೆ.

ಸಕಲ ಸ್ತೋತ್ರಗಳಿಗೆಲ್ಲ ಆದರ್ಶಪ್ರಾಯವಾಗಿರುವ ಪಶ್ಚಾತ್ತಾಪ ರೂಪವಾದ ಪ್ರಾಯಶ್ಚಿತ್ತದಂತಿರುವ ಈ ಬಗೆಯಾದ ಸ್ತೋತ್ರರತ್ನವನ್ನು ರಚಿಸಿ ಸಕಲ ಮುಮುಕ್ಷುಗಳಿಗೂ ಎಚ್ಚರಿಕೆಯನ್ನಿತ್ತು ಪರಮೋಪಕಾರವನ್ನು ಮಹಾನುಭಾವರಾದ ಶ್ರೀ ವಿಜಯೀ೦ದ್ರತೀರ್ಥರಿಗೆ ಭಕ್ತಿ ಶ್ರದ್ಧೆಗಳಿಂದ ನಮಿಸಿ ಪ್ರಾರ್ಥಿಸೋಣ!!

ವಿಜಯೀ೦ದ್ರರಾಯರ ವೃಂದಾವನದಲಿ ।
ವಿಜಯಸಖ ಸರ್ವ ಜಗಜ್ಜನ್ಮಾದಿಕರ್ತ ।
ಅಜಭಾವಾದಿಗಳಿಂದ ಸೇವ್ಯ ಶ್ರೀ ನರಹರಿ ಇಹನು ।
ವಿಜಯೀ೦ದ್ರಗುರು ಅಂತರ್ಯಾಮಿ ವಾಂಛಿತಪ್ರದನು ।।

” ವಿ ” ಯೆಂದರೆ ವಿಠಲ ಜ್ಞಾನ ಮುದವೀವ ।
” ಜ ” ಯೆಂದರೆ ಜಯವು ಪುಟ್ಟು ಸಾವಿಲ್ಲ ।
” ಯೀ ” ಯೆಂದರೆ ಜ್ಞಾನಕರ್ಮ ಪೂಜಾ ಫಲವು ।
” ಇಂದ್ರ ” ಯೆಂದರೆ ಐಶ್ವರ್ಯ ಸುಖವೇವ ।।

” ಶ್ರೀ ವಿಜಯೀ೦ದ್ರತೀರ್ಥರ ವಿದ್ಯಾ ಶಿಷ್ಯರಾದ ಶ್ರೀ ಕಂಬಾಲೂರು ರಾಮಚಂದ್ರತೀರ್ಥರು…”

ಪದವಾಕ್ಯ ಪ್ರಮಾಣಜ್ಞಾನ್ ಸೌಶೀಲ್ಯಾದ್ಯುಪ ಸೇವಿತಾನ್ ।
ವಿಜಯೀ೦ದ್ರಯತೀಂದ್ರಾಖ್ಯಾನ್ ಸೇವೇ ವಿದ್ಯಾ ಗುರೂನ್ಮಮ ।।

post courtesy – ಪಲ್ಲವಿ ನಾಗರಾಜು ಹಾವೇರಿ

meditation

meditation

16.jpg

Narsimha purana mentions meditation as dhyana (nidhidhyasana) : continuous flow of thought towards an object. Note the term flow of thought.

The popular conception is : meditation is onepointedness on a particular object(more often a scene ).The method usually prescribed is :

  • Calm your mind
  • Focus on your favorite object
  • Try to hold on to it.
  • Make use of props like symbol OM
  • Or some serene music
  • Or some preach think as to all negative energy flow out of your system like smoke
  • Many more such concepts which are not in sync with Purana.

let us analyze these before arriving at correct meaning of meditation.

Can our minds be calmed through effort ?

According to upanishads :

Mind is everwandering ,it is chanchal by nature. It keeps switching between thoughts sometimes without link.

Consider a monkey , a restless creature. What if this monkey has drunk loads of wine.it becomes unstable , its actions are unpredictable.And if this monkey is bit by scorpion , it is going to jump from pillar to post without any control ,creating havoc in the neighborhood.

Mind is like this monkey which has drunk the wine of ego(ahankara /mada) upon that it is bit by the scorpion of jealousy(asuya).it jumps from pillar to post to acquire the objects of its desire.(moha). This monkey called mind is additionally caught in greed(lobha).

Is it really possible to bring such a monkey under control ?virtually impossible without the help of other agencies.If we say we can bring ourselves out of this mind delusion ,then this monkey should be able to calm himself without external help. This is unimaginable.

So the first point itself seems dizzy (calm your mind /de-stress ).

Focus, on what ? can u hold a static scene in my mind ? It is against the nature of mind.
Hold on to it , what purpose is it going to solve ,well holding on to object of desire gives control over object of desire. But is that the goal of meditation.
Make use of OM , does this calm the mind , definitely not. Music is a definite disturbance , moreover if I am restless over a issue in the office or my business , no props are going to calm my mind except solution to my issue.
Drive out negative energy : in a happy frame of mind , especially when I am riding a horse named success, temporarily I feel I can control my mind and feel as though driving away unwanted thoughts. This is not meditation.
So what is meditation.
Ashtanga Yoga starts with

  • Yama : discipline like getting up early ,cleanliness
  • niyama : satya (speaking truth), asteya,(not stealing),tushti(being satisfied)
  • asana :posture padmasana , veerasana,sukhasana.
  • pratyahara : turning your mind away ,
  • pranayama: breathing techniques. Rechaka ,puraka, kumbhaka,
  • dharana :
  • dhyana
  • samadhi .

The first five are preparatory towards the meditation. It helps in bringing the person to a state of mind to practise anything that he wants to? Whether he can sustain with his markata mind.!
To sustain he should undertake Pranayama.
Two types of pranayama. :keval and sagarbha,
Kevala is without any mantra and sagarbha is with mantra like dasha pranava gayatri with bramhashirasa etc.
Remembering Hari and vayu in kumbhaka is what the secret behind sustaining the concentration.This ignites narsimha jwala in the hrudaya that burns away all the sins.
The hrudaya that we are talking about is one found in sushumna and not the heart organ.
When the mind is pure , sense organs satisfied , chitta is still ,the mind can contemplate on the known issues. Known through sense organs . Nothing new can be contemplated of which we do not have knowledge. Hence to contemplate , we need knowledge about GOD. This is obtained by shravana , ie. Listening to the Guru.
Guru teaches as various qualities of GOD. Student has to contemplate, manana
Manana gives rise to doubts. Doubts have to be cleared by Guru.
Once doubts are cleared ,the topic on which we have contemplated becomes steadfast,it cannot disappear from mind. When we repeatedly contemplate on this steadfast knowledge , we experience difficulty in holding on to this contemplation, this phase is known asDharana.
When this contemplation is continuous without break it is called Dhyana.

When in dhyana if we are not able to hear external sounds then it is Samadhi.

However in the astanga , each one is superior to the previous eg niyama is superior to yama , pranayama is superior to asana pratyahara. Dhyana is superior to pranayama etc.
Dhyana can be done only on few qualities of God that we know of; but swadhyaya gives more knowledge of the God. Hence once should ever engage in the study of sashtras (swadhyaya) . It yields more punya than dhyana. Above all Adhyaapan , teaching the shastras , leads even more punya than swadhyaya, because it spreads the message of the GOD. Lord loves those more who speak about him.
Thus Sage Mudgal says, “with two hands raised above shoulders , I declare that there is nothing in this world greater than Narayana(earlier now or in the future), knowing which nothing in this three worlds is impossible to achieve.”

” Alodya shastrani cha punah punaha ,nasti narayana samo devo ,

na bhuto na bhavishyati Yetena satyavakyena sarvarthan sadhyamyaham”

 

srikrishnarpanamastu