ಉಡುಪಿಯ ಯಾತ್ರೆ ಮಾಡುವ ಕ್ರಮ
ಶ್ರೀ ಗುರಭ್ಯೋಃ ನಮಃ ಶ್ರೀ ಪರಮಗುರುಭ್ಯೋಃನಮಃ ಶ್ರೀಮದಾನಂದತೀರ್ಥ ಭಗವತಪಾದಾಚಾರ್ಯ ಗುರುಭ್ಯೋ ನಮಃ
ಓಂ ಶ್ರೀ ಕೃಷ್ಣಾಯಃ ನಮಃ
ಮಾಧ್ವರಿಗೆ ಅತೀಶ್ರೇಷ್ಠವಾದ ಕ್ಷೇತ್ರ ಶ್ರೀಮದುಡುಪಿ. ನಮಗೆ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ನ್ನು, ಶ್ರೀಮನ್ ಮಧ್ವಶಾಸ್ತ್ರವನ್ನ ು, ಶ್ರೀಮಧ್ವಾನುಜಾಚಾ ರ್ಯರು, ಶ್ರೀ ಹೃಷೀಕೇಶತೀರ್ಥರು, ಶ್ರೀ ವಿಜಯಧ್ವಜರು, ಶ್ರೀ ವೇದಾಂಗತೀರ್ಥರು, ಶ್ರೀ ವಾದಿರಾಜರು, ಶ್ರೀ ರಘೂತ್ತಮರು ಮುಂತಾದ ನೂರಾರು ತಪಸ್ವಿವರೇಣ್ಯರನ್ ನು ನೀಡಿದ ಪರಮಪವಿತ್ರ ಭೂಮಿ. ಶ್ರೀಮದಾಚಾರ್ಯರು ನಮಗಾಗಿ ನಮ್ಮ ಉದ್ದಾರಕ್ಕಾಗಿ, ನಮ್ಮ ಸಾಧನೆಯ ಮಾರ್ಗದಲ್ಲಿನ ವಿಘ್ನಗಳನ್ನು ಪರಿಹರಿಸುವದಕ್ಕಾಗ ಿ ಚೆಲುವ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಸರ್ವಶ್ರೇಷ್ಠ ಕ್ಷೇತ್ರ, ಶ್ರೀಮದುಡುಪಿ.
ನಾವು ಯಾವುದೇ ಕ್ಷೇತ್ರಕ್ಕೆ ಯಾತ್ರೆ ಹೊರಡುವ ಸಂಕಲ್ಪ ಮಾಡಿದ ತಕ್ಷಣ ನಮ್ಮ ಮನೆದೇವರಿಗೆ ನಮಸ್ಕರಿಸಬೇಕು. ದೇವರ ಮನೆಗೆ ಹೋಗಿ, ಮನೆದೇವರನ್ನು ಮನಸ್ಸಿನಲ್ಲಿಯೇ ಚಿಂತಿಸಿ ಸಾಷ್ಟಾಂಗ ನಮಸ್ಕಾರ ಮಾಡಿ, ಸ್ವಾಮಿನ್, ಶ್ರೀಮದುಡುಪಿಯ ಯಾತ್ರೆ ಮಾಡುತ್ತಿದ್ದೇನೆ, ಅದು ನಿರ್ವಿಘ್ನವಾಗಿ, ನಿರಾತಂಕವಾಗಿ ಮುಖ್ಯವಾಗಿ ನನ್ನ ಬಿಂಬರೂಪನಾದ ಶ್ರೀಹರಿ ಪ್ರೀತನಾಗುವಂತೆ ನಡೆಯಲಿ ಎಂದು ಪ್ರಾರ್ಥಿಸಬೇಕು.
ಯಾತ್ರೆ ಎಂದರೆ ನಮ್ಮ ಪಾಪಗಳ ಪರಿಹಾರಕ್ಕಾಗಿ ಮಾಡುವ ಶ್ರೇಷ್ಠಸಾಧನೆ. ಆ ಸಾಧನೆಗೆ ನಮ್ಮ ದೇಹ ಅಣಿಯಾಗಬೇಕು. ಯಾತ್ರೆ ಎಂದರೆ ಒಂದು ಶ್ರೇಷ್ಠವಾದ ದೇವರಪೂಜೆ. ಆ ಪೂಜೆಗೆ ನಮ್ಮ ಶರೀರ ಮನಸ್ಸುಗಳು ಅಣಿಯಾಗಬೇಕು. ಹೇಗೆ ದೇವರ ಪೂಜೆ ಮಾಡುವ ಮುನ್ನ ಶುದ್ಧ ಮಡಿಯಲ್ಲಿ ಸ್ನಾನವನ್ನು ಮಾಡಿ ದೇಹವನ್ನು ಶುದ್ಧಗೊಳಿಸುತ್ತವ ೆಯೋ ಹಾಗೆ, ಯಾತ್ರೆಯೆಂಬ ಶ್ರೇಷ್ಠ ಭಗವತ್ಪೂಜೆಗಾಗಿ ದೇಹ ಮನಸ್ಸು ಮಾತುಗಳನ್ನು ಶುದ್ಧಗೊಳಿಸಲು ಒಂದು ದಿವಸ ಉಪವಾಸವನ್ನು ಮಾಡಬೇಕು.
ಉಪವಾಸ ಮಾಡುವ ದಿವಸ ಬೆಳಿಗ್ಗೆ ಎದ್ದು ದೇವರ ಪೂಜೆಯನ್ನು ಮುಗಿಸಿ ದೇವರ ಮುಂದೆ ನಮಸ್ಕಾರ ಮಾಡಿ
ಸರ್ವಕ್ಷೇತ್ರೇಶ ದೇವೇಶ ತೀರ್ಥಪಾದ ನಮೋsಸ್ತು ತೇ I
ತೀರ್ಥಯಾತ್ರಾಂ ಕರಿಷ್ಯೇsಹಂ ಘೋರಸಂಸಾರಮುಕ್ತಯೇ I
ತದರ್ಥಂ ದೇಹಶುದ್ಧ್ಯರ್ಥಂ ಉಪೋಷ್ಯೇ ನಾರದಪ್ರಿಯ I
ದೇಹದೋಷಾನ್ ಮನೋದೋಷಾನ್ ವಚೋದೋಷಾಂಶ್ಚ ನಾಶಯ II
“ಸಕಲದೇವತೆಗಳಿಗೂ ಒಡೆಯನಾದ, ಸಮಸ್ತಕ್ಷೇತ್ರಗಳಿ ಗೂ ನಾಥನಾದ, ಸಮಸ್ತತೀರ್ಥಗಳನ್ನ ು ಸೃಜಿಸುವ ಪಾದವುಳ್ಳ, ಸದಾ ತೀರ್ಥಯಾತ್ರಾದಿಗಳ ಲ್ಲಿ ಆಸಕ್ತರಾದ ನಾರದಾದಿ ಮಹರ್ಷಿಗಳಿಗೆ ಪ್ರಿಯನಾದ ಒ ರಮಾಪತೇ, ಘೋರಸಂಸಾರದಿಂದ ಮುಕ್ತನಾಗಬಯಸಿ ತೀರ್ಥಯಾತ್ರೆಯನ್ನ ು ಮಾಡಲು ಉದ್ಯುಕ್ತನಾಗಿದ್ದ ೇನೆ. ತೀರ್ಥಯಾತ್ರೆ ನಿನ್ನ ಪೂಜೆ, ಅದನ್ನು ಮಾಡಲು ಮನೋ-ವಾಕ್-ಕಾಯಗಳ ಶುದ್ಧಿಯಿರಬೇಕು, ಆ ಶುದ್ಧಿಗಳನ್ನು ಸಂಪಾದಿಸಲೋಸುಗ ಈ ದಿವಸ ಉಪವಾಸ ಮಾಡುತ್ತಿದ್ದೇನೆ, ಸ್ವಾಮಿ. ಈ ಉಪವಾಸದಿಂದ ಪ್ರೀತನಾಗಿ ನನ್ನ ದೇಹದ, ಮನಸ್ಸಿನ ಮತ್ತು ಮಾತಿನ ದೋಷಗಳನ್ನು ವಿನಾಶ ಮಾಡಿ ನನ್ನನ್ನು ಶುದ್ಧನನ್ನಾಗಿಸು”
ಎಂದು ಆಚಮನ-ಪ್ರಾಣಾಯಮಗಳ ನ್ನು ಮಾಡಿ ಸಂಕಲ್ಪ ಮಾಡಬೇಕು. ಆ ನಂತರ ಕನಿಷ್ಠಪಕ್ಷ ಒಬ್ಬ ಬ್ರಾಹ್ಮಣ ದಂಪತಿಗಳಿಗೆ ಆ ದಿವಸ ಭೋಜನವನ್ನು ಮಾಡಿಸಬೇಕು. ಆ ನಂತರ ತಾನು ಮೂರು ಬಾರಿ ತೀರ್ಥ ಮತ್ತು ಗಂಧಾಕ್ಷತೆಗಳನ್ನು ಹಚ್ಚಿಕೊಳ್ಳಬೇಕು. ಇಡಿಯ ದಿವಸ ಪೂರ್ಣವಾಗಿ ದೇವರ ಸ್ಮರಣೆ ಮಾಡುತ್ತ, ವಿಶೇಷವಾಗಿ ಶ್ರೀಮದಾಚಾರ್ಯರ ಯಾತ್ರಾಪ್ರಸಂಗದ ಚರಿತ್ರೆಗಳನ್ನು ಶ್ರವಣ ಮಾಡಬೇಕು.
ಮಾರನೆಯ ದಿವಸವೂ ಒಬ್ಬ ದಂಪತಿಗಳನ್ನು ಕರೆಯಿಸಿ, ದೇವರ ಪೂಜೆಯ ನಂತರ ಉಪವಾಸವನ್ನು ದೇವರಿಗೆ ಸಮರ್ಪಿಸಿ, ಬ್ರಾಹ್ಮಣಭೋಜನದ ನಂತರ ಅವರ ಅನುಜ್ಞೆಯನ್ನು ತೆಗೆದುಕೊಂಡು ತಾನು ಊಟ ಮಾಡಬೇಕು.
ಆ ನಂತರ ಸಾಯಂಕಾಲದ ಸಮಯದಲ್ಲಿ ಉಡುಪಿಯ ಮಾಹಾತ್ಮ್ಯ, ಉಡುಪಿಯಲ್ಲಿನ ಶ್ರೀವಾದಿರಾಜಾದಿ ಯತಿಪುಂಗವರು, ಮಧ್ವಸರೋವರ, ಚಂದ್ರಮೌಳೀಶ್ವರ, ಶ್ರೀಮದಾಚಾರ್ಯರು, ಅನಂತೇಶ್ವರ, ಶ್ರೀಕೃಷ್ಣ ಎಲ್ಲರನ್ನೂ ನೆನೆದು ಶ್ರೀಮದಾಚಾರ್ಯರು ಶ್ರೀಕೃಷ್ಣಪ್ರತಿಷ ್ಠಾಪನೆ ಮಾಡಿದ ಪ್ರಸಂಗವನ್ನು ಶ್ರವಣ ಮಾಡಬೇಕು. ಪಠಣ ಮಾಡಬೇಕು. (ಶ್ರೀ ಮಧ್ವವಿಜಯದ ಒಂಭತ್ತನೆಯ ಸರ್ಗ)
ಆ ನಂತರ ಯಾತ್ರೆಗೆ ಹೊರಡುವ ಮುನ್ನ ಮನೆಯಲ್ಲಿ ದೇವರಿಗೆ ನಮಸ್ಕಾರ ಮಾಡಿ ಯಾತ್ರೆಯಲ್ಲಿ ಯಾವ ರೀತಿಯ ತೊಂದರೆಯೂ ಬಾರದಂತೆ ಅನುಗ್ರಹಿಸು ಎಂದು ಪ್ರಾರ್ಥನೆ ಮಾಡಿಕೊಂಡು ವಾಹನದಲ್ಲಿ ಯಾತ್ರೆ ಮಾಡುತ್ತಿರುವದಕ್ಕ ಾಗಿ ಕ್ಷಮೆಯನ್ನು ಯಾಚಿಸಬೇಕು.
ಪದ್ಭ್ಯಾಂ ಗಂತುಮಶಕ್ತೋsಹಂ ಯಾತ್ರಾರ್ಥಂ ಯಾನಮಾಶ್ರಯೇ I
ಕ್ಷಮಸ್ವ ಪುಂಡರೀಕಾಕ್ಷ ದೀನಮುದ್ಧರ ಮಾಧವ II
“ಓ ರಮೆಯರಸ, ನೀ ಕೊಟ್ಟ ಕಾಲುಗಳಿಂದ ನಡೆಯುತ್ತಲೇ ನಿನ್ನ ಕ್ಷೇತ್ರದ ಯಾತ್ರೆಯ ಮಾಡಬೇಕು. ಆದರೆ, ಅಷ್ಟು ದೂರ ನಡೆಯುವ ದೇಹ-ಮನಸ್ಸುಗಳ ಶಕ್ತಿ ನನಗಿಲ್ಲ. ಓ ಕರುಣಾಳು, ನಿನ್ನ ತಾವರೆಗಣ್ಗಳಿಂದ ನನ್ನನ್ನು ನೋಡಿ ಕೃಪೆ ಮಾಡಿ ನನ್ನನ್ನು ಕ್ಷಮಿಸು. ದೀನ ನಾನು, ಉದ್ದರಿಸು ಸ್ವಾಮಿ”
ಎಂದು ಪ್ರಾರ್ಥಿಸಿ ದೇವರಿಗೆ ಹನ್ನೊಂದು ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಬೇಕು.
ಆ ಬಳಿಕ ದೇವರಿಗೆ ಮಂಗಳಾರತಿ ಮಾಡಿ ಮನೆಯಲ್ಲಿ ಯಾರು ಹಿರಿಯರಿದ್ದಾರೆಯೋ ಅವರಿಂದ ಮಂತ್ರಾಕ್ಷತೆಗಳನ್ ನು ಸ್ವೀಕರಿಸಿ ತಲೆಯ ಮೇಲೆ ಧರಿಸಿ ಹಿರಿಯರಿಗೆಲ್ಲ ನಮಸ್ಕರಿಸಿ ಯಾತ್ರೆಗೆ ಹೊರಡಬೇಕು. (ಹಿರಿಯರು ಯಾತ್ರೆಗೆ ಬರುತ್ತಿದ್ದರೂ ಅವರಿಗೆ ನಮಸ್ಕಾರ ಮಾಡಿ, ಮಂತ್ರಾಕ್ಷತೆಯನ್ನ ು ಅವರಿಂದ ಸ್ವೀಕರಿಸಿ ಅವರೊಡನೆ ಹೊರಡಬೇಕು)
ಆ ನಂತರ ವಾಹನದಲ್ಲಿ ಕುಳಿತಾಗ
ಪ್ರಯಾಣೇ ಗರುಡಾರೂಢಂ ಪಾರಿಜಾತಹರಂ ಹರಿಮ್ I
ಸತ್ಯಭಾಮಾಯುತಂ ಕೃಷ್ಣಂ ಧ್ಯಾಯೇದಿಷ್ಟಾರ್ಥ ಸಿದ್ಧಯೇ II
ದೇವಲೋಕದಿಂದ ಪಾರಿಜಾತವನ್ನು ತರುತ್ತಿರುವ, ಗರುಡನ ಮೇಲೆ ಸತ್ಯಭಾಮೆಯೊಡನೆ ಕುಳಿತಿರುವ ಶ್ರೀಕೃಷ್ಣನನ್ನು ಪ್ರಾರ್ಥಿಸಿ ದಾರಿಯಲ್ಲಿ ವಿಘ್ನ ಬಾರದಂತೆ ಪ್ರಾರ್ಥಿಸಬೇಕು.
ಶ್ರೀ ಉಡುಪೀಕ್ಷೇತ್ರ ದೂರದಿಂದ ಕಾಣುತ್ತಿದ್ದಂತೆಯ ೇ ವಾಹನದಿಂದ ಕೆಳಗಿಳಿದು ಸಮಸ್ತಕ್ಷೇತ್ರಕ್ಕ ೇ ನಮಸ್ಕಾರವನ್ನು ಸಲ್ಲಿಸಬೇಕು. ವಾಹನದಿಂದ ಇಳಿಯುವದು ಅಸಾಧ್ಯವಾಗಿದ್ದಲ್ ಲಿ ಮನಸ್ಸಿನಿಂದಲೇ ಉಡುಪಿಕ್ಷೇತ್ರದ ಅಭಿಮಾನಿ ದೇವತೆಗೆ ಅಲ್ಲಿನ ಸ್ವಾಮಿಯಾದ ಚಂದ್ರಮೌಳೀಶ್ವರ, ಶ್ರೀಮದಾಚಾರ್ಯರು, ಅನಂತಾಸನ, ಶ್ರೀಕೃಷ್ಣರಿಗೆ ನಮಸ್ಕಾರಗಳನ್ನು ಸಲ್ಲಿಸಬೇಕು.
ಕ್ಷೇತ್ರವನ್ನು ಪ್ರವೇಶ ಮಾಡಿದ ಬಳಿಕ, ಮಾರ್ಗದ ಅಶುದ್ಧಿಯನ್ನೆಲ್ಲ ಕಳೆದುಕೊಂಡು, ಶುದ್ಧವಾದ ರೀತಿಯಲ್ಲಿ ಕ್ಷೇತ್ರಪ್ರವೇಶ ಮಾಡಬೇಕು. (ನೀವು ಉಳಿದುಕೊಳ್ಳುವ ಸ್ಥಳದಲ್ಲಿ ಒಮ್ಮೆ ಸ್ನಾನ ಮಾಡಿ ಆ ನಂತರ ಮಧ್ವಸರೋವರಕ್ಕೆ ಸ್ನಾನಕ್ಕಾಗಿ ಹೋಗುವದು ಉತ್ತಮ ಪಕ್ಷ. ಶ್ರೀಪಾದಾರಾಜ ಮಠದ ಪ್ರಾತಃಸ್ಮರಣೀಯರಾ ದ ಶ್ರೀ ಸುಗುಣನಿಧಿಶ್ರೀಪಾ ದಂಗಳವರು ಬಹುಕಾಲ ಕಾವೇರಿಯ ತೀರದಲ್ಲಿ ವಾಸವಾಗಿದ್ದವರು. ಅವರು ಮಠದಲ್ಲಿನ ಬಾವಿಯಲ್ಲಿ ಮೊದಲಿಗೆ ಸ್ನಾನ ಮಾಡಿ ಶುದ್ಧ ಮಡಿಯಲ್ಲಿ ಹೋಗಿ ಕಾವೇರಿಯ ಸ್ನಾನ ಮಾಡುತ್ತಿದ್ದರು. ಎಂದಿಗೂ ಮೈಲಿಗೆಯಲ್ಲಿ ಕಾವೇರಿಯ ಸ್ಪರ್ಶ ಮಾಡದ ಮಹಾನುಭಾವರು ಅವರು. ಅಂತಹ ಸದ್ಗುಣಶಾಲಿಗಳ ಸ್ಮರಣೆ ಮಾಡಿ ಅವರಂತೆ ನಮ್ಮಲ್ಲಿಯೂ ಕಿಂಚಿತ್ತಾದರೂ ಸದ್ಗುಣ ಬರಲಿ ಎಂದು ಶ್ರೀಕೃಷ್ಣನನ್ನು ಪ್ರಾರ್ಥಿಸಿ ನೀವಿರುವ ಸ್ಥಳದಲ್ಲಿಯೇ ಬೆಳಿಗ್ಗೆ ಸ್ನಾನವನ್ನು ಮುಗಿಸಿ ಆ ನಂತರ ಮಧ್ವಸರೋವರಕ್ಕೆ ಸ್ನಾನಕ್ಕಾಗಿ ತೆರಳಬೇಕು.)
ಉಡುಪಿಯ ರಥಬೀದಿ ನಮ್ಮೊಡೆಯ ಶ್ರೀಕೃಷ್ಣನ ಮೆರವಣಿಗೆಯ ಬೀದಿ. ಶ್ರೀಮದಾಚಾರ್ಯರಿಂ ದಾರಂಭಿಸಿ ಸಮಸ್ತ ಭಾಗವತೋತ್ತಮರು ನಡೆದಾಡಿದ ಮಹಾಬೀದಿ. ಅದೆಂತಹ ಪರಿಸ್ಥಿತಿಯಲ್ಲಿಯ ೂ ಆ ರಥಬೀದಿಯಲ್ಲಿ ಚಪ್ಪಲಿ ಹಾಕಿಕೊಂಡು ನಡೆಯಬಾರದು. ಇವತ್ತಿಗೂ ಸಹ ಯಾವುದೇ ಶ್ರೀಗಳೂ ಸಹ ರಥಬೀದಿಯಲ್ಲಿ ವಾಹನದಲ್ಲಿ ಬರುವದಿಲ್ಲ. ಹೀಗಾಗಿ ಸರ್ವಥಾ ವಾಹನವನ್ನೇರಿ ಹೋಗಬಾರದು. (ಉಡುಪಿಯಷ್ಟೇ ಅಲ್ಲ, ಎಲ್ಲಿಯೂ ಸಹ ದೇವಸ್ಥಾನಗಳ ಮುಂದೆಯೇ ಹೋಗಿ ವಾಹನಗಳನ್ನು ನಿಲ್ಲಿಸಬಾರದು. ದೇವಸ್ಥಾನದಿಂದ ದೂರದಲ್ಲಿಯೇ ವಾಹನವನ್ನು ನಿಲ್ಲಿಸಿ, ಕಾಲುಗಳನ್ನು ತೊಳೆದುಕೊಂಡು ಶುದ್ಧವಾದ ವೇಷದಲ್ಲಿ ದೇವಸ್ಥಾನದ ಬಳಿಗೆ ಪ್ರವೇಶ ಮಾಡಬೇಕು)
ಎಂದಿಗೂ ಆ ರಥಬೀದಿಯಲ್ಲಿ ಅಪ್ರದಕ್ಷಿಣೆಯಾಗಿ ನಡೆದು ಬರಬಾರದು. ಎಷ್ಟೇ ಶ್ರಮವಾದರೂ ಪ್ರದಕ್ಷಿಣಾಕಾರದಲ ್ಲಿಯೇ ನಡೆಯಬೇಕು. ಮೊದಲಿಗೆ ಶ್ರೀಮಧ್ವಸರೋವರಕ್ ಕೆ ಹೋಗಿ ಮಧ್ವಸರೋವರಕ್ಕೆ ನಮಸ್ಕಾರ ಮಾಡಿ, ನಮ್ಮ ಶ್ರೀಮದಾಚಾರ್ಯರ, ಸಮಸ್ತ ಭಾಗವತೋತ್ತಮರ ಸ್ನಾನದಿಂದ ಪರಮಪವಿತ್ರವಾದ ಆ ತೀರ್ಥವನ್ನು ಭಕ್ತಿಯಿಂದ ಪ್ರೋಕ್ಷಣೆ ಮಾಡಿಕೊಳ್ಳಬೇಕು. ನಮ್ಮೊಡನೆ ಹಿರಿಯ ಬ್ರಾಹ್ಮಣರಿದ್ದರೆ ಅವರಿಗೆ ಪ್ರೋಕ್ಷಣೆ ಮಾಡಲು ಪ್ರಾರ್ಥಿಸಿಕೊಳ್ಳ ಬೇಕು. ನಾವೇ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವದಕ್ಕ ಿಂತಲೂ ಹಿರಿಯರಿಂದ ಗುರುಗಳಿಂದ ಮಾಡಿಸಿಕೊಳ್ಳುವದ ಸೌಭಾಗ್ಯ. ಆ ನಂತರ, ನಮ್ಮ ಶ್ರೀಮದಾಚಾರ್ಯರು ಸ್ನಾನ ಮಾಡುತ್ತಿದ್ದ ಪ್ರದೇಶವಿದು, ಶ್ರೀಮದಾಚಾರ್ಯರ ಸನ್ನಿಧಾನವಿದೆ ಇಲ್ಲಿ ಎಂಬ ಎಚ್ಚರದೊಂದಿಗೆ ಭಕ್ತಿಯಿಂದ ಆ ಪವಿತ್ರ ಮಧ್ವಸರೋವರದಲ್ಲಿ ಸ್ನಾನವನ್ನು ಮಾಡಬೇಕು. ಅಲ್ಲಿಯೇ ಸಂಧ್ಯಾವಂದನೆ ಮತ್ತು ಸಂಕ್ಷಿಪ್ತವಾಗಿ ದೇವರಪೂಜೆಯನ್ನು ಮುಗಿಸಿ ದೇವರ ದರ್ಶನಕ್ಕೆ ತೆರಳಬೇಕು.
ಮೊದಲಿಗೆ ಶ್ರೀ ಚಂದ್ರಮೌಳೀಶ್ವರನ ಸನ್ನಿಧಾನಕ್ಕೆ ಬಂದು ಸಾಷ್ಟಾಂಗವೆರಗಿ, ಸ್ವಾಮಿನ್, ಉಮಾಪತೇ, ನನ್ನೊಡೆಯ ಶ್ರೀಕೃಷ್ಣನನ್ನು ಕಾಣಲು ಬಂದಿದ್ದೇನೆ. ಅವನನ್ನು ಕಾಣುವಾಗ ಮನಸ್ಸಿನಲ್ಲಿ ಭಕ್ತಿ ಮೂಡುವಂತೆ ನನ್ನ ಮನಸ್ಸನ್ನು ನಿಯಮಿಸು ಎಂದು ಪ್ರಾರ್ಥಿಸಬೇಕು. ನಿನ್ನ ದರ್ಶನ ನಿರಂತರ ನೀಡು ಚಂದ್ರೇಶ್ವರ ಎಂದು ಪ್ರಾರ್ಥಿಸಿ ಮನಃಪೂರ್ತಿಯಾಗುವಷ ್ಟು ನಮಸ್ಕಾರಗಳನ್ನು ಮಾಡಿ ಅನಂತೇಶ್ವರ ದೇಗುಲಕ್ಕೆ ಬರಬೇಕು. ಅನಂತಾಸನನಿಗೆ ಸಾಷ್ಟಾಂಗವೆರಗಿ ಕೈಜೋಡಿಸಿ ಸ್ವಾಮಿನ್, ಶ್ರೀಮಧ್ಯಗೇಹಾರ್ಯ ರ ಕುಲದೈವ ನೀನು. ಅವರ ತಪಸ್ಸಿಗೆ ಮೆಚ್ಚಿ ಶ್ರೀಮದಾಚಾರ್ಯರನ್ ನೇ ಮಗನನ್ನಾಗಿ ಕರುಣಿಸಿದಿ. ನನ್ನ ವಂಶದಲ್ಲಿಯೂ ಸದ್ವೈಷ್ಣವರು ಹುಟ್ಟುವಂತೆ, ಶ್ರೀಮದಾಚಾರ್ಯರ ಶಾಸ್ತ್ರವನ್ನು ಅಧ್ಯಯನ ಮಾಡುವ ಸುಜೀವರು ಹುಟ್ಟಿಬರುವಂತೆ ಅನುಗ್ರಹಿಸು ಎಂದು ಪ್ರಾರ್ಥಿಸಬೇಕು.
ಸ್ವಾಮಿನ್, ಕುಂಜಮಾಧವ ಎಂಬ ಬ್ರಾಹ್ಮಣೋತ್ತಮರ ಮೇಲೆ ಕರುಣೆಯಿಟ್ಟು ಬಂದು ಅವರು ನೀಡಿದ ರಜತಪೀಠದಲ್ಲಿ ಕುಳಿತು, ಅವರು ಮಾಡಿದ ಯಜ್ಞವನ್ನು ಸ್ವೀಕರಿಸಿದ ಕರುಣಾಳು ನೀನು. ನನ್ನ ಮನಸ್ಸಿನ ಕೊಳೆಯನ್ನು ಕಳೆದು ಆ ಶುಭ್ರಮನಃಪೀಠದಲ್ಲ ಿ ಆಸೀನನಾಗು. ನನ್ನಿಂದ ಸತ್ಕರ್ಮಗಳನ್ನು ಮಾಡಿಸಿ ಆ ಸತ್ಕರ್ಮಗಳನ್ನು ಸ್ವೀಕಾರ ಮಾಡು ಎಂದು ಆ ಜಗದೊಡೆಯ ಅನಂತಾಸನನನ್ನು ಪ್ರಾರ್ಥಿಸಬೇಕು.
ಆ ನಂತರ ಪ್ರದಕ್ಷಿಣೆ ಬರುವಾಗ, ಶ್ರೀಮದಾಚಾರ್ಯರ ಪರಮಪವಿತ್ರ ಸನ್ನಿಧಾನವಿರುವ, ಶ್ರೀಮದಾಚಾರ್ಯರು ನಿರಂತರ ಶಾಸ್ತ್ರದ ಪಾಠ ಹೇಳುತ್ತಿದ್ದ ಸ್ಥಳಕ್ಕೆ ನಮಸ್ಕಾರಗಳನ್ನು ಮಾಡಬೇಕು.
“ಗುರುದೇವ, ನಾನು ನಿಮ್ಮ ಅಧೀನ. ನಿಮ್ಮ ದಾಸ. ನಿಮ್ಮ ಶಾಸ್ತ್ರದ ಅಧ್ಯಯನ ಮಾಡುವ ಸೌಭಾಗ್ಯವನ್ನು, ಸದಾ ನಿಮ್ಮ ಶಾಸ್ತ್ರದ ರಸಾನುಭವದಲ್ಲಿ ಮಗ್ನನಾಗಿರುವ ಮಹಾಸೌಭಾಗ್ಯವನ್ನು ಕರುಣಿಸಿ” ಎಂದು ಪ್ರಾರ್ಥಿಸಬೇಕು.
ಆ ನಂತರ ಮನಸ್ಸಿಗೆ ತೃಪ್ತಿಯಾಗುವಷ್ಟು ಅನಂತಾಸನನಿಗೆ ಪ್ರದಕ್ಷಿಣೆ ನಮಸ್ಕಾರಗಳನ್ನು ಸಲ್ಲಿಸಿ ಯಾವ ಭಗವಂತನ ರೂಪವನ್ನು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ು ನಮಗಾಗಿ ಪ್ರತಿಷ್ಠಾಪನೆ ಮಾಡಿದರೋ, ಯಾವ ಭಗವಂತ ನಮಗಾಗಿ ದೇವಕೀದೇವಿಗೆ ಲೀಲೆಗಳನ್ನು ತೋರಿದನೋ, ಯಾವ ಭಗವಂತ ನಮಗಾಗಿ ರುಗ್ಮೀಣೀದೇವಿಯಿಂ ದ ಪೂಜಿತನಾದನೋ, ಯಾವ ಭಗವಂತ ನಮಗಾಗಿ ನಮ್ಮ ಸಾಧನಮಾರ್ಗದ ವಿಘ್ನಗಳನ್ನು ಕಳೆಯಲಿಕ್ಕಾಗೆ ಜಗತ್ತಿನಲ್ಲಿಯೇ ಸರ್ವೋತ್ತಮವಾದ ಈ ಉಡುಪಿಯಲ್ಲಿ ನೆಲೆನಿಂತಿದ್ದಾನೆ ಯೋ ಆ ಮುದ್ದು ಶ್ರೀಕೃಷ್ಣನ ದರ್ಶನಕ್ಕಾಗಿ ಹೋಗುತ್ತಿದ್ದೇವೆ ಎನ್ನುವ ಸಂಭ್ರಮದೊಂದಿಗೆ ಭಕ್ತಿಯಿಂದ ನಡೆಯುತ್ತ ಕನಕನ ಕಿಂಡಿಯ ಬಳಿಗೆ ಬಂದು ದರ್ಶನ ಕೊಡು ಸ್ವಾಮಿ ಎಂದು ಸಾಷ್ಟಾಂಗವೆರಗಿ ಕಿಂಡಿಯಿಂದ ದರ್ಶನ ಮಾಡಬೇಕು.
ಆ ಬಳಿಕ ಮಹಾದ್ವಾರದ ಬಳಿಗೆ ಬಂದು ವಿಷ್ಣುಸಹಸ್ರನಾಮದ ಪಾರಾಯಣವನ್ನು ಆರಂಭಿಸಿ ವಿನಮ್ರವಾಗಿ ದೇವರ ಗುಡಿಯ ಒಳಗೆ ಪ್ರವೇಶ ಮಾಡಬೇಕು. ಎರಡೂ ಕೈಗಳನ್ನು ಜೋಡಿಸಿ, ಶ್ರೀಮದಾಚಾರ್ಯರು, ಶ್ರೀಮಧ್ವಾನುಜಾಚಾ ರ್ಯರು, ಶ್ರೀ ಹೃಷೀಕೇಶತೀರ್ಥಾದಿ ಆಚಾರ್ಯರ ಧನ್ಯಸಂನ್ಯಾಸಿಶಿಷ ್ಯರು, ಪರಮಮಂಗಳ ಶ್ರೀ ವಾದಿರಾಜರು ಮುಂತಾದ ಭಾಗವತೋತ್ತಮರು ಸಮಗ್ರ ಜೀವದ ಭಕ್ತಿಯಿಂದ ನಡೆದು ಬರುತ್ತಿದ್ದ ಸ್ಥಳವಿದು ಎಂದು ಹೆಜ್ಜೆ ಹೆಜ್ಜೆಗೆ ಗುರುಪರಂಪರೆಯನ್ನು ಸ್ಮರಿಸುತ್ತ ನಡೆಯಬೇಕು. ಆ ಪರಮಪವಿತ್ರದೇಗುಲದ ಕಣಕಣದಲ್ಲಿ ಲಕ್ಷ್ಮೀದೇವಿಯ ಸನ್ನಿಧಾನವಿದೆ. ಶ್ರೀಮದಾಚಾರ್ಯರು ಅಲ್ಲಿ ಸಾಕ್ಷಾತ್ತಾಗಿ ಅದರೆ ಮನುಷ್ಯದೃಷ್ಟಿಗೆ ಗೋಚರವಾಗದೇ ಸನ್ನಿಹಿತರಾಗಿದ್ದ ಾರೆ. ಸನಕಾದಿಗಳು ಅಲ್ಲಿ ನಿತ್ಯವಾಸವಿದ್ದು ಶ್ರೀಕೃಷ್ಣನ ಮುಂದೆ ತತ್ವವಿಚಾರ ಮಾಡುತ್ತಿರುತ್ತಾರ ೆ. ನಾರದಾದಿ ಮಹರ್ಷಿಗಳು ಅಲ್ಲಿದ್ದು ನಿತ್ಯ ವಿಷ್ಣುನಾಮಸಂಕೀರ್ ತನೆಯಲ್ಲಿ ತೊಡಗಿರುತ್ತಾರೆ. ಹೀಗೆ ಸಮಗ್ರ ಭಾಗವತೋತ್ತಮರ ಸನ್ನಿಧಾನವಿರುವ ಈ ಭೂಮಿಯ ವೈಕುಂಠದಲ್ಲಿ ನಾವಿದ್ದೇವೆ ಎಂಬ ಸಂಭ್ರಮ ನಮ್ಮ ಮನಸ್ಸಿನಲ್ಲಿ ನೆಲೆಮಾಡಿರಬೇಕು.
ಹೀಗೆ ಭಾಗವತೋತ್ತಮರ ಸ್ಮರಣೆ ಮಾಡುತ್ತ ಗರ್ಭಗುಡಿಗೆ ಪ್ರದಕ್ಷಿಣೆ ಬಂದು ನವಗ್ರಹಕಿಂಡಿಯ ಕಡೆಗೆ ತಿರುಗುವಾಗ ಗರುಡದೇವರಿಗೆ, ಪ್ರಾಣದೇವರಿಗೆ ಮನಸ್ಸಿನಿಂದಲೇ ನಮಸ್ಕರಿಸಿ ಶ್ರೀಕೃಷ್ಣನನ್ನು ಕಾಣಬೇಕಾದರೆ ಭಕ್ತಿ ಮನಸ್ಸಿನಲ್ಲಿ ಮೂಡುವಂತೆ ಅನುಗ್ರಹಿಸಿ ಎಂದು ಪ್ರಾರ್ಥಿಸಬೇಕು.
ಆ ಬಳಿಕ ಆ ನವಗ್ರಹಕಿಂಡಿಯ ಮುಂದೆ ಕೈಜೋಡಿಸಿ ನಿಂತು, ಆ ಪರಮಸುಂದರವಿಗ್ರಹದ ಶ್ರೀಕೃಷ್ಣನನ್ನು ನಮ್ಮ ಕಣ್ಣಗಳಲ್ಲಿ ತುಂಬಿಕೊಳ್ಳಬೇಕು. ಯಾವ ರೂಪವನ್ನು ಕಾಣಲಿಕ್ಕೆ ಯಶೋದೆ ದೇವಕಿಯರು ತಪಸ್ಸು ಮಾಡಿ ಅವನ ತಾಯಂದಿರಾದರೋ, ಯಾವ ರೂಪವನ್ನು ಕಂಡು ಜಗದಂಬಿಕೆ ರುಗ್ಮೀಣೀದೇವಿ ಬೆರಗಾಗಿ ನಿಂತಳೋ, ಯಾವನ ಮುಂದೆ ಸಮಗ್ರ ಜೀವಪ್ರಪಂಚದ ನಾಥ ನಮ್ಮ ಶ್ರೀಮದಾಚಾರ್ಯರು “ಪ್ರೀಣಯಾಮೋ ವಾಸುದೇವಮ್” ಎಂದು ಮೈಯುಬ್ಬಿ ಹಾಡಿದರೋ, ಯಾವನನ್ನು ಅರ್ಚಿಸಲು ಶ್ರೀ ವಾದಿರಾಜರು ತಮ್ಮ ಸಮಗ್ರ 120 ವರ್ಷಗಳನ್ನೇ ಮುಡುಪಿಟ್ಟರೋ, ಯಾವನನ್ನು ಅರ್ಚಿಸಿ ಶ್ರೀ ರಘೂತ್ತಮರು (ಪಲಿಮಾರು ಮಠದ ಮಹಾನುಭಾವ ಯತಿಗಳು) ಶ್ರೀ ವೇದಾಂಗತೀರ್ಥರು, ಶ್ರೀ ವಿಜಯಧ್ವಜರು ಮುಂತಾದ ನೂರಾರು ಯತಿಕುಲತಿಲಕರು ತಮ್ಮ ಜೀವದ ಸಾಧನೆಯನ್ನು ಪೂರ್ಣಗೊಳಿಸಿಕೊಂಡ ರೋ. ಯಾವನನ್ನು ನಮಗಾಗಿ, ನಮ್ಮ ಉದ್ದಾರಕ್ಕಾಗಿ, ನಮ್ಮ ಸಾಧನೆಯ ಮಾರ್ಗದ ವಿಘ್ನಗಳನ್ನು ಕಳೆಯಲಿಕ್ಕಾಗಿ ಕಾರುಣ್ಯವೇ ಮೈವೆತ್ತ ನಮ್ಮ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ು ಪ್ರತಿಷ್ಠಾಪಿಸಿದರ ೋ ಅಂತಹ ನಮ್ಮೊಡೆಯನ ಮುಂದೆ ಕೈಜೋಡಿಸಿ ನಿಂತು
“ನಾಥ, ನಾನು ನಿನ್ನ ದಾಸ, ನನ್ನ ಸಾಧನೆಯ ಮಾರ್ಗದ ವಿಘ್ನಗಳನ್ನು ಕಳೆದು ನಿರಂತರ ಶ್ರೀಮದಾಚಾರ್ಯರ ಶಾಸ್ತ್ರದ ಅಧ್ಯಯನದಲ್ಲಿ ಆಸಕ್ತನಾಗಿರುವಂತೆ ಮಾಡು” ಎಂದು ಪ್ರಾರ್ಥಿಸಬೇಕು. ಉಳಿದ ಏನೇ ಪ್ರಾರ್ಥನೆ ಇದ್ದರೂ ಆ ನಂತರ. ಈ ಪ್ರಾರ್ಥನೆಯನ್ನು ಮಾತ್ರ ಆ ಗರ್ಭಗುಡಿಯ ಮುಂದೆ ನಿಂತಾಗಲೇ ಮಾಡಬೇಕು. ಶ್ರೀಮದಾಚಾರ್ಯರು ಅವನನ್ನು ಅರ್ಚಿಸುತ್ತ ಅವನ ಸನ್ನಿಧಾನದಲ್ಲಿದ್ ದಾರೆ ಎಂದು ಚಿಂತಿಸಿ “ಶ್ರಾವಯಾಸ್ಮಾಂಶ್ ಚ ಕಿಂಚಿತ್” ಗುರುದೇವ ನಿಮ್ಮ ಶಾಸ್ತ್ರದ ಅಧ್ಯಯನವನ್ನು ನಮಗೂ ನಮ್ಮ ಯೋಗ್ಯತೆಯಂತೆ ಅನುಗ್ರಹಿಸಿ ಎಂದು ಪ್ರಾರ್ಥಿಸಬೇಕು.
ಆ ಬಳಿಕ, ದೇವರಿಗೆ ಬೆನ್ನು ಹಾಕದೇ ವಿನಯದಿಂದ ಹಿಂದಕ್ಕೆ ಬಂದು ಗರುಡ ಪ್ರಾಣದೇವರಿರುವ ಕಟ್ಟೆಯನ್ನೇರಿ ದೇವರಿಗೆ ಸಾಷ್ಟಾಂಗನಮಸ್ಕಾರ ಗಳನ್ನು ಸಲ್ಲಿಸಬೇಕು.
ನಮ್ಮ ಅಂತರ್ಯಾಮಿಯಾದ, ನಮ್ಮ ಗುರುಗಳ ಅಂತರ್ಯಾಮಿಯಾದ, ಪರಮಗುರುಗಳ ಅಂತರ್ಯಾಮಿಯಾದ, ಸಮಗ್ರ ಗುರುಪರಂಪರೆಯ ಅಂತರ್ಯಾಮಿಯಾದ, ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಅಂತರ್ಯಾಮಿಯಾದ ಲಕ್ಷ್ಮೀಪತಿಯಾದ ಶ್ರೀಹರಿಯೇ ವಿಶ್ವಕರ್ಮನಿರ್ಮಿ ತವಾದ, ರುಗ್ಮೀಣೀದೇವಿಯಿಂ ದ ಅರ್ಚಿತವಾದ, ಶ್ರೀಮದಾಚಾರ್ಯರಿಂ ದ ಪ್ರತಿಷ್ಠಾಪಿತವಾದ , ಅಷ್ಟಮಠಗಳ ಮಹಾತಪಸ್ವಿಗಳಿಂದ ಪೂಜಿತವಾದ ಈ ಪ್ರತಿಮೆಯಲ್ಲಿ ಸನ್ನಿಹಿತನಾಗಿದ್ದ ಾನೆ ಎಂದು ಅಂತರ್ಯಾಮಿರೂಪಗಳ ಅಬೇಧಚಿಂತನೆಯನ್ನು ಮಾಡುತ್ತ ನಾಲ್ಕು ನಮಸ್ಕಾರಗಳನ್ನು ಸಲ್ಲಿಸಬೇಕು.
ಆ ಬಳಿಕ ಪ್ರಾಣದೇವರ ದರ್ಶನ ಮಾಡಿ, ನಮಸ್ಕಾರಗಳನ್ನು ಸಲ್ಲಿಸಿ, ಗರುಡದೇವರ ದರ್ಶನ ಮಾಡಿ ನಮಸ್ಕಾರಗಳನ್ನು ಸಲ್ಲಿಸಿ, ಮತ್ತೆ ದೇವರಿಗೆ ಅಭಿಮುಖವಾಗಿ ಮೈದಣಿಯೆ, ಮನದಣಿಯೆ ನಮಸ್ಕಾರಗಳನ್ನು ಸಲ್ಲಿಸಬೇಕು. ಮನಸ್ಸಿನಲ್ಲಿ ನಿರಂತರ ಸ್ತೋತ್ರದ ಪಾರಾಯಣ, ಕಣ್ಗಳಿಂದ ಆ ಸರ್ವೋತ್ತಮನ ದರ್ಶನ ಮಾಡುತ್ತ ನಮಸ್ಕಾರಗಳನ್ನು ಸಲ್ಲಿಸುತ್ತ ಮನಸ್ಸಿನ ಬಯಕೆಗಳನ್ನು ಪ್ರಾರ್ಥನೆಗಳನ್ನು ಸಲ್ಲಿಸಬೇಕು. ನಮ್ಮ ದುಃಖದುಮ್ಮಾನಗಳನ್ ನು ನಿವೇದಿಸಿಕೊಂಡು, ದೇವರಿತ್ತ ಮಹಾಸೌಭಾಗ್ಯಗಳನ್ನ ು, ಸುಖವನ್ನು ನೆನಪಿಸಿಕೊಂಡು ನೀನಿತ್ತ ಸೌಭಾಗ್ಯ ಎಂದು ಸಮರ್ಪಿಸಿಕೊಂಡು, ಮಾಡಿದ ಪಾಪಗಳನ್ನು ನೆನೆಸಿಕೊಂಡು ಕ್ಷಮಿಸು ಎಂದು ಬೇಡಿಕೊಂಡು, ಮುಂದೆ ನನ್ನಿಂದ ಪಾಪಕರ್ಮಗಳನ್ನು ಮಾಡಿಸಬೇಡ ಎಂದು ಬಿನ್ನವಿಸಿಕೊಂಡು, ಮಾಡಿದ ದಾನಧರ್ಮಾದಿ ಸತ್ಕರ್ಮಗಳನ್ನು ನೀನು ಅನುಗ್ರಹಿಸಿ ಮಾಡಿಸಿದ್ದು ಎಂದು ವಿನಯದಿಂದ ಸಮರ್ಪಿಸಿಕೊಂಡು, ನಿರಂತರ ನಿನ್ನ ಸ್ಮರಣೆಯಿತ್ತು ಸಲಹು ಎಂದು ಸಮಗ್ರ ಜೀವದ ಭಕ್ತಿಯಿಂದ ಪ್ರಾರ್ಥಿಸುತ್ತ, ಪುರಂದರದಾಸರು ತಿಳಿಸಿದಂತೆ ‘ಒಡೆಯಗೆ ಒಡಲನು ತೋರುವೆ’ ಎಂದು ನಮ್ಮ ಸರ್ವಸ್ವವನ್ನೂ ನಿವೇದಿಸಿಕೊಂಡು ಸಾಷ್ಟಾಂಗವೆರಗಬೇಕ ು.
ಆ ಬಳಿಕ ಅಲ್ಲಿಯೇ ಕುಳಿತು ಇನ್ನೊಬ್ಬರಿಗೆ ತೊಂದರೆಯಾಗದಂತೆ ತುಂಬ ಸಣ್ಣ ಧ್ವನಿಯಲ್ಲಿ ಶ್ರೀಮದಾಚಾರ್ಯರ ದ್ವಾದಶಸ್ತೋತ್ರಗಳ ನ್ನು, ವಾದಿರಾಜರು ರಚಿಸಿದ ದಿವ್ಯ ಸ್ತೋತ್ರಗಳನ್ನು, ನಮ್ಮ ಮಹನೀಯದಾಸರು ರಚಿಸಿದ ಶ್ರೇಷ್ಠಕೃತಿಗಳನ್ ನು ಹಾಡಬೇಕು.
ಹೀಗೆ ಮನಸ್ಸಿಗೆ ತೃಪ್ತಿಯಾಗುವಷ್ಟು ಕಾಲ ಆ ಪರಮಪವಿತ್ರ ಸನ್ನಿಧಾನದಲ್ಲಿದ್ ದು, ಮತ್ತೊಮ್ಮೆ ನಮಸ್ಕಾರ ಮಾಡಿ, ಮತ್ತೆಮತ್ತೆ ದರ್ಶನ ನೀಡು ಸ್ವಾಮಿ ಎಂದು ಪ್ರಾರ್ಥಿಸಿ ಭಕ್ತಿಯಿಂದ ಕೆಳಗಿಳಿದು ಬಂದು ಗರ್ಭಗುಡಿಗೆ ಪ್ರದಕ್ಷಿಣೆಯಾಗುವ ಂತೆ ನಡೆದು ಬರಬೇಕು. ಗರ್ಭಗುಡಿಯ ಪ್ರವೇಶದ್ವಾರದಲ್ಲ ಿ ಶ್ರೀಮದಾಚಾರ್ಯರ ಪರಮಸುಂದರವಿಗ್ರಹದ ಗುಡಿಯಿದೆ. ಬಗ್ಗಿ ದರ್ಶನ ಮಾಡಿ, “ಪ್ರದಿಶ ಸುದೃಶಮ್” ಸುಜ್ಞಾನವನ್ನು ಕರುಣಿಸಿ ಎಂದು ಪ್ರಾರ್ಥನೆ ಮಾಡಿ ಗರ್ಭಗುಡಿಗೆ ಪ್ರದಕ್ಷಿಣೆ ಮಾಡುತ್ತಲೇ ಹೊರಬರಬೇಕು.
ಆ ನಂತರ ಭೋಜನಶಾಲೆಯ ಪ್ರಾಣದೇವರು, ಶ್ರೀ ಸುಬ್ರಹ್ಮಣ್ಯದೇವರ ನ್ನು ದರ್ಶಿಸಿ ನಮಸ್ಕರಿಸಿ ಉಡುಪಿಯ ಭವ್ಯಪರಂಪರೆಯ ಮಹಾನ್ ಯತಿವರೇಣ್ಯರ ವೃಂದಾವನಗಳಿಗೆ ಎರಗಬೇಕು. ಅಶ್ವತ್ಥಕ್ಕೆ ಪ್ರದಕ್ಷಿಣೆ ಬರಬೇಕು. ಗೋವುಗಳಿಗೆ ನಮಸ್ಕಾರಗಳನ್ನು ಸಲ್ಲಿಸಬೇಕು.
ಈ ಮಧ್ಯದಲ್ಲಿ ದೇವರ ಪೂಜಾಕೈಂಕರ್ಯದಲ್ಲ ಿ ತಮ್ಮನ್ನು ತಾವು ತೊಡಗಿಸಿಕೊಂಡು ಪರಮಾತ್ಮನ ಅರ್ಚನೆಯಲ್ಲಿ ತಲ್ಲೀನರಾಗುವ ಯತಿಪುಂಗವರು ಕಂಡಾಗ ಅವರ ದೇವಕಾರ್ಯಕ್ಕೆ ತೊಂದರೆಯಾಗದಂತೆ ದೂರದಿಂದಲೇ ನಮಸ್ಕರಿಸಬೇಕು.
ಹೀಗೆ ಮಧ್ಯಾಹ್ನದವರೆಗೆ ಸಾಧ್ಯವಾದಷ್ಟು ಬಾರಿ ದೇವರ ದರ್ಶನ ಪಡೆದು, ಸ್ತೋತ್ರಗಳನ್ನು ಹೇಳಿ ಆ ಪರಮಪವಿತ್ರ ಸನ್ನಿಧಾನದಲ್ಲಿ ಯತಿಗಳಿಂದ ತೀರ್ಥವನ್ನು ಪಡೆದು ಪ್ರಸಾದವನ್ನು ಸ್ವೀಕರಿಸಬೇಕು. ಅನೇಕ ಜನ್ಮಗಳ ಸೌಭಾಗ್ಯವಿದ್ದಲ್ಲ ಿ ಉಡುಪಿಯಲ್ಲಿ ಊಟ ಮಾಡುವ ಸುಯೋಗ ಒದಗಿಬರುತ್ತದೆ. ಕಾರಣ, ಇವತ್ತಿಗೂ ಅಲ್ಲಿ ಯಾವ ಯತಿಗಳೂ ನೈವೇದ್ಯ ಮಾಡುವದಿಲ್ಲ. ನೈವೇದ್ಯದ ಪಾತ್ರೆಗಳಿಗೆ ತುಳಸೀದಳವನ್ನು ಹಾಕಿ ಶ್ರೀಗಳು ಹೊರಬಂದು ಜಪ ಮಾಡುತ್ತ ನಿಲ್ಲುತ್ತಾರೆ, ಸ್ವಯಂ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ೇ ಅಲ್ಲಿ ನೈವೇದ್ಯವನ್ನು ಮಾಡುವದು.
ಹೀಗಾಗಿ ಒಂದೊಂದು ತುತ್ತನ್ನು ಉಣ್ಣಬೇಕಾದರೂ ನಮ್ಮ ಶ್ರೀಮದಾಚಾರ್ಯರು ಪರಮಾತ್ಮನಿಗೆ ಸಮರ್ಪಿಸಿದ ಪರಮಪವಿತ್ರ ಪದಾರ್ಥವಿದು, ಇದನ್ನು ಉಣ್ಣುವದರಿಂದ ನನ್ನ ಮನಸ್ಸಿನ ಕಲ್ಮಷಗಳು ದೂರಾಗಲಿ, ದೇಹ ಶುದ್ಧವಾಗಲಿ ಎಂದು ಪ್ರಾರ್ಥಿಸುತ್ತ ಉಣ್ಣಬೇಕು.
ಆ ನಂತರ ಪರ್ಯಾಯಪೀಠಾಧೀಶರನ ್ನು ಕಂಡು ಸಾಷ್ಟಾಂಗವೆರಗಿ ಅವರಿಂದ ಮಂತ್ರಾಕ್ಷತೆಗಳನ್ ನು ಸ್ವೀಕರಿಸಬೇಕು. ಬಳಿಕ ಉಡುಪಿಯಲ್ಲಿನ ಅಷ್ಟಮಠಗಳನ್ನು ಸಂದರ್ಶಿಸಿ, ಅಲ್ಲಿನ ಪೀಠಾಧಿಪತಿಗಳಿಗೆ ನಮಸ್ಕರಿಸಿ, ಆಚಾರ್ಯ ಕರಾರ್ಚಿತ ಪ್ರತಿಮೆಗಳಿಗೆ ನಮಸ್ಕರಿಸಿ, ಉಡುಪಿಯ ಸುತ್ತಮುತ್ತಲಿನ ಕ್ಷೇತ್ರಗಳನ್ನು ದರ್ಶನ ಮಾಡಬೇಕು. ಯಾವ ಕ್ಷೇತ್ರದ ದರ್ಶನವಾಗಲಿ ಬಿಡಲಿ, ಉಡುಪಿಗೆ ಹೋದ ಬಳಿಕ ಪಾಜಕಕ್ಕೆ ಹೋಗದೇ ಬರಬಾರದು. “ಸತ್ಯಲೋಕೇಶ್ವರಃ ಪ್ರಾಣೋ ಯತ್ರಾವಾತರದುತ್ಸು ಕಃ” ಹದಿನಾಲ್ಕು ಲೋಕಗಳ ಒಡೆಯ ಮುಖ್ಯಪ್ರಾಣ ನಮ್ಮ ಉದ್ದಾರಕ್ಕಾಗಿ ಅವತರಿಸಿ ಬಂದಾಗ ಜನ್ಮಭೂಮಿಯನ್ನಾಗಿ ಆರಿಸಿಕೊಂಡದ್ದು ಆ ಪರಮಪವಿತ್ರ ಪಾಜಕವನ್ನು. ಹೀಗಾಗಿ ಕುಂಜಾರುಗಿರಿಯಲ್ಲ ಿ ದುರ್ಗಾದೇವಿಯ ದರ್ಶನ ಮಾಡಿ, ಪಾಜಕದಲ್ಲಿ ಶ್ರೀಮದಾಚಾರ್ಯರ ದರ್ಶನವನ್ನು ತಪ್ಪದೇ ಮಾಡಿಬರಬೇಕು.
ಸಮಯವಿದ್ದಲ್ಲಿ, ಮತ್ತು ಪರ್ವಕಾಲವಿದ್ದಲ್ಲ ಿ ಅವಶ್ಯವಾಗಿ ಸಮುದ್ರಸ್ನಾನವನ್ನ ು ಮಾಡಿ ವಡಭಾಂಡೇಶ್ವರದಲ್ಲ ಿ ಶ್ರೀ ಬಲರಾಮದೇವರ ದರ್ಶನ ಮಾಡಬೇಕು. ಉಳಿದ ಕ್ಷೇತ್ರಗಳನ್ನೂ ಸಂದರ್ಶಿಸಬೇಕು.
ಹೀಗೆ ಸಾಧ್ಯವಾದಷ್ಟು ಬಾರಿ ದರ್ಶನವನ್ನು ಮಾಡಿ ಹೊರಡಬೇಕಾದರೆ ದೇವರಿಗೆ ನಮಸ್ಕಾರ ಮಾಡಿ ಮತ್ತೆಮತ್ತೆ ದರ್ಶನ ಕರುಣಿಸು ಎಂದು ಪ್ರಾರ್ಥಿಸಿ, ಸಾಧನೆಯ ಮಾರ್ಗದ ವಿಘ್ನಗಳನ್ನು ಪರಿಹರಿಸು ಎಂದು ಬಿನ್ನವಿಸಿ ಗುರುಗಳ ಆಜ್ಞೆಯನ್ನು ಪಡೆದು ಹೊರಡಬೇಕು.
ಮನೆಗೆ ಬಂದ ಬಳಿಕ ಮನೆಯ ಹೊರಗಡೆಯೇ ಕಾಲ್ಗಳನ್ನು ತೊಳೆದುಕೊಂಡು ಮನೆಯ ಒಳಗೆ ಬಂದ ತಕ್ಷಣ ದೇವರ ಮನೆಯ ಮುಂದೆ ನಾವು ತೆಗೆದುಕೊಂಡು ಹೋಗಿದ್ದ ದೇವರ ಪೆಟ್ಟಿಗೆಯನ್ನಿಟ್ ಟು ಮನೆದೇವರ ಸ್ಮರಣೆ ಮಾಡಿ, ಸ್ವಾಮಿನ್ ನಿನ್ನ ಅನುಗ್ರಹದಿಂದ ಶ್ರೀಮದುಡುಪಿಯ ಯಾತ್ರೆ ಸಂಪನ್ನವಾಯಿತು ಎಂದು ಸಾಷ್ಟಾಂಗ ನಮಸ್ಕಾರ ಮಾಡಬೇಕು.
ಮಾರನೆಯ ದಿವಸ ಬ್ರಾಹ್ಮಣದಂಪತಿಗಳ ಿಗೆ ಭೋಜನವನ್ನು ಸಮರ್ಪಿಸಿ ಗುರುಗಳನ್ನು, ಪರಮಗುರುಗಳನ್ನು ಶ್ರೀಮದಾಚಾರ್ಯರನ್ ನು ಸ್ಮರಸಿ ಸಮಗ್ರ ಯಾತ್ರೆಯನ್ನು ವಿಷ್ಣುಪೂಜಾರೂಪವಾ ಗಿ ಚಿಂತಿಸಿ ಅದರಿಂದ ಬಂದ ಸಮಗ್ರ ಪುಣ್ಯವನ್ನೂ ಅವರ ಪಾದಕ್ಕೊಪ್ಪಿಸಿಕೊ ಳ್ಳಬೇಕು. ಇದರಿಂದ ಪ್ರೀತರಾಗುವ ಗುರುಗಳು ಜ್ಞಾನ ಭಕ್ತಿ ವೈರಾಗ್ಯಗಳನ್ನು ಕರುಣಿಸುತ್ತಾರೆ.
ಉಡುಪಿ ನಮಗೆ ಹತ್ತಿರದ ಸರ್ವೋತ್ತಮಕ್ಷೇತ್ ರ. ಒಂದು ರಾತ್ರಿಯ ಹಾದಿಯಲ್ಲಿ ತಲುಪಬಹುದಾದ ಕ್ಷೇತ್ರ. ಹೀಗಾಗಿ ಎಷ್ಟೋ ಬಾರಿ ಅಸಡ್ಡೆ ಮನೆಮಾಡಿರುತ್ತದೆ. ಸರ್ವಥಾ ತಪ್ಪು. ಉಡುಪಿ ನಮಗಾಗಿ ನಿರ್ಮಾಣವಾದ ಕ್ಷೇತ್ರ. ಶ್ರೀಮದಾಚಾರ್ಯರು ಸರ್ವಮೂಲಗಳು ನಮಗೆ ದೊರೆತ ಕ್ಷೇತ್ರ. ಈ ಕ್ಷೇತ್ರದ ಯಾತ್ರೆ ನಮ್ಮನ್ನು ಅಧ್ಯಯನಶೀಲರನ್ನಾಗ ಿ ಮಾಡುತ್ತದೆ, ನಮಗೆ ಜ್ಞಾನಭಕ್ತಿಗಳನ್ನ ು ಕರುಣಿಸುತ್ತದೆ. ಹೀಗಾಗಿ ವಿಧ್ಯುಕ್ತವಾದ ಕ್ರಮದಲ್ಲಿಯೇ ಈ ಯಾತ್ರೆಯನ್ನು ಮಾಡಿ ಗುರ್ವಂತರ್ಯಾಮಿಗೆ ಒಪ್ಪಿಸಿಕೊಳ್ಳಬೇಕ ು.
ಶ್ರೀ ಮಧ್ವೇಶಾರ್ಪಣಮಸ್ತು
ಶ್ರೀ ಕೃಷ್ಣಾರ್ಪಣಮಸ್ತು