ಕ್ಷಮಾ ಸುರೇಂದ್ರರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು

​ 

ಕ್ಷಮಾ ಸುರೇಂದ್ರರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು “ಸ್ತೋತ್ರ ಸಾಹಿತ್ಯಕ್ಕೆ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ಕೊಡಿಗೆಯು ಮಹತ್ತರವಾದುದು. 

ಶ್ರೀ ಆಚಾರ್ಯ ಮಧ್ವರು – ಶ್ರೀ ಜಯತೀರ್ಥರು – ಶ್ರೀ ವಿಜಯೀ೦ದ್ರರು -ಶ್ರೀ ಸುಧೀಂದ್ರರು – ಶ್ರೀ ರಾಘವೇಂದ್ರರು – ಶ್ರೀ ಸುಮತೀಂದ್ರರು – ಶ್ರೀ ಮುನೀಂದ್ರರು – ಶ್ರೀ ವಾದೀಂದ್ರರು – ಶ್ರೀ ವಸುಧೇಂದ್ರರು – ಶ್ರೀ ವರದೇಂದ್ರರು – ಶ್ರೀ ಧೀರೆಂದ್ರರು – ಶ್ರೀ ಭುವನೇಂದ್ರರು – ಶ್ರೀ ವ್ಯಾಸತತ್ತ್ವಜ್ಞರು – ಶ್ರೀ ಸುಜನೇಂದ್ರರು – ಶ್ರೀ ಸುಜ್ಞಾನೇಂದ್ರರು – ಶ್ರೀ ಸುಪ್ರಜ್ಞೇಂದ್ರು – ಶ್ರೀ ಸುಕೃತೀಂದ್ರರು – ಶ್ರೀ ಸುಜಯೀ೦ದ್ರರು – ಶ್ರೀ ಅಪ್ಪಣ್ಣಾಚಾರ್ಯರು- ಶ್ರೀ ವಿಜಯರಾಯರು – ಶ್ರೀ ಜಗನ್ನಾಥದಾಸರು ಮೊದಲಾದ ಮಹಾನುಭಾವರು ರಚಿಸಿದ ಅತ್ಯಮೋಘ ಕೃತಿಗಳು ಸ್ತೋತ್ರ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಾಗಿವೆ.ಇಂಥಹಾ ಸ್ತೋತ್ರ ಪರಂಪರೆಯಲ್ಲಿ ಶ್ರೀ ಗುರುರಾಜ ಗುರುಸಾರ್ವಭೌಮರ ಬಗ್ಗೆ ರಚಿಸಿದ ಸ್ತೋತ್ರಗಳು ಸಾಕಷ್ಟಿವೆ. 

ಶ್ರೀ ಹರಿವಾಯು ಗುರುಗಳನ್ನು ಹೊರತು ಪಡಿಸಿ ಶ್ರೀ ಮಂತ್ರಾಲಯ ಪ್ರಭುಗಳ ಬಗ್ಗೆ ನೂರಾರು ಸ್ತೋತ್ರ ರಚನೆಗಳೂ ಮತ್ತು ಸುಮಾರು 12000 ಕ್ಕೂ ಅಧಿಕ ಹರಿದಾಸರ ಪದಗಳ ರಚನೆಯಂತೂ ಅಚ್ಛರಿ ಮೂಡಿಸುವ ಸಂಗತಿ.ಈ ಎಲ್ಲಾ ಶ್ರೀ ರಾಯರ ಮೇಲಿನ ಸ್ತೋತ್ರಗಳಿಗೆ ಮುಕುಟಪ್ರಾಯವಾಗಿರುವುದು ” ಶ್ರೀ ರಾಘವೇಂದ್ರ ಸ್ತೋತ್ರ “!ಶ್ರೀ ರಾಘವೇಂದ್ರ : ಸಕಾಲಪ್ರದಾತಸ್ವಪಾದಕಂಜದ್ವಯ ಭಕ್ತಿಮದ್ಭ್ಯ: ।ಅಘಾದ್ರಿಸಂಭೇದನ ದೃಷ್ಟಿವಜ್ರ:ಕ್ಷಮಾಸುರೇಂದ್ರೋsವತು ಮಾಂ ಸದಾsಯಮ್ ।।ತಮ್ಮ ಪಾದ ಕಮಲಗಳಲ್ಲಿ ಭಕ್ತಿಯುಳ್ಳವರಿಗೆಸಕಲ ಅಭೀಷ್ಟಗಳನ್ನು ಕೊಡುವ; ಪಾಪಗಳೆಂಬ ಪರ್ವತವನ್ನು ಸಂಪೂರ್ಣ ನಾಶಗೊಳಿಸುವಲ್ಲಿ ಸಮರ್ಥವಾದ ದೃಷ್ಟಿಯೆಂಬ ವಜ್ರಾಯುಧವುಳ್ಳ ದೇವತೆಗಳಲ್ಲಿ ಮತ್ತು ಬ್ರಾಹ್ಮಣರಲ್ಲಿ ಶ್ರೇಷ್ಠರಾದ ಶ್ರೀ ರಾಘವೇಂದ್ರತೀರ್ಥರು ನಮ್ಮ ಸದಾ ರಕ್ಷಿಸಲಿ!!ಸಕಲ ಪ್ರದಾತ = ಎಲ್ಲವನ್ನು ಕೊಡುವವರು ಎಂದರ್ಥ.ಕಲಾ = ಲಕ್ಷ್ಮೀ” ಕಲಯಾ ಸಹಿತಃ ಸಕಲ: ” ಎಂದರೆ = ಶ್ರೀ ಮಹಾವಿಷ್ಣು” ಮಹಾಭಾರತ ” ದಲ್ಲಿ…” ನಿಷ್ಕಲಂ ಸಕಲಂ ಬ್ರಹ್ಮ ನಿರ್ಗುಣಂ ಗುಣ ಗೋಚರಮ್ ” – ಎಂದು ಶ್ರೀ ಮಹಾವಿಷ್ಣುವನ್ನು ” ಸಕಲ ” ಎಂದು ಹೇಳುತ್ತದೆ.ಸಕಲಂ = ಪರಬ್ರಹ್ಮದದಾತಿ = ಶಿಷ್ಯೇಭ್ಯಃಉಪದಿಶತಿ = ಭಕ್ತರಿಗೋಸ್ಕರ ಭಗವಂತನನ್ನು ಕುರಿತು ತಮ್ಮ ಗ್ರಂಥಗಳ ಉಪದೇಶಗಳ ಮೂಲಕ” ತದ್ದಾನಂ ಚಾಧ್ಯಪನೇನ ವ್ಯಾಖ್ಯಯ ವಿಲಿಖ್ಯ ಅರ್ಪಣೇನ ಚ ” ಎಂದು ಶ್ರೀ ರಾಯರೇ ಸ್ವತಃ ಖಂಡಾರ್ಥದಲ್ಲಿ ಹೇಳಿರುವಂತೆ..ವಿಷ್ಣು ಸರ್ವೋತ್ತಮತ್ವ ಜ್ಞಾನವನ್ನು ನೀಡಿ ಮೋಕ್ಷವನ್ನು ಪಡೆಯುವ ಅರ್ಹತೆಯನ್ನು ಕೊಡುವವರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು.” ಸ್ವಪಾದಕಂಜದ್ವಯ ಭಕ್ತಿಮದ್ಭ್ಯ: ” ಎಂಬಲ್ಲಿ ” ಸ್ವ ” ಶಬ್ದವು ” ಸ್ವತಂತ್ರ “ಎಂಬ ಅರ್ಥವನ್ನು ಹೇಳುತ್ತದೆ.ಶ್ರೀಮದಾಚಾರ್ಯರು ” ತತ್ತ್ವಸಂಖ್ಯಾನ ” ದಲ್ಲಿ ತತ್ತ್ವಗಳನ್ನು ವಿಭಾಗಿಸುವಾಗ….ಸ್ವತಂತ್ರಮಸ್ವತಂತ್ರ೦ ಚ ದ್ವಿವಿಧಂ ತತ್ತ್ವಮಿಷ್ಯತೇ ।ಸ್ವತಂತ್ರೋ ಭಗವಾನ್ವಿಷ್ಣು: ।।ಎಂದು ” ವಿಷ್ಣುವೇ ಸ್ವತಂತ್ರ ತತ್ತ್ವ ” ವೆಂದು ಹೇಳಿದ್ದಾರೆ. ಹಾಗಾದರೆ ಸ್ವತಂತ್ರನಾದ ಶ್ರೀ ಮಹಾವಿಷ್ಣುವಿನ ಪಾದ ಕಮಲಗಳಲ್ಲಿ ಭಕ್ತಿಯುಳ್ಳವರೆಂದು ಅರ್ಥವಾಗುತ್ತದೆ.ಅಂದರೆ, ಶ್ರೀ ಪರಮಾತ್ಮನಲ್ಲಿ ಭಕ್ತಿ ಇರುವವರಿಗೆ ಮಾತ್ರ ಸಕಾಲಪ್ರದಾತರು. ಭಗವದ್ವೇಷಿಗಳನ್ನುಶ್ರೀ ರಾಯರು ಎಂದಿಗೂ ಅನುಗ್ರಹಿಸಲಾರರು.ಅಂಥಹಾ ಶ್ರೀ ಹರಿಯಲ್ಲಿ ಭಕ್ತಿಯುಳ್ಳವರು ಶ್ರೀ ರಾಯರ ಭಕ್ತರೂ ಆಗಿದ್ದಾರೆ!!” ಕ್ಷಮಾಸುರೇಂದ್ರ: ” ಅಂದರೆ…೧. ತಮ್ಮ ಶಮದಮಾದಿ ಗುಣಗಳಿಂದಲೂ; ತತ್ತ್ವ ಜ್ಞಾನದಿಂದಲೂ ಈ ಭೂಮಿಯ ಮೇಲೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಪ್ರಕಾಶಿಸುವರು.೨. ಈ ಭೂಮಿಯಲ್ಲಿ ಭಕ್ತರ ಇಷ್ಠಾರ್ಥಗಳನ್ನು ಈಡೇರಿಸುವವರಲ್ಲಿ ಅಗ್ರಗಣ್ಯರು.೩. ಈ ಭೂಮಿಯಲ್ಲಿ ಅಸುರರಾಗಿ ( ಶ್ರೀ ಪ್ರಹ್ಲಾದರಾಜ ) ಅವತರಿಸಿದರೂ ಶ್ರೀ ಹರಿಯ ಪರಮ ಭಕ್ತರು.೪. ಶ್ರೀ ಮುಖ್ಯಪ್ರಾಣದೇವರಲ್ಲಿ ಅವರ ಶಾಸ್ತ್ರ ವ್ಯಾಖ್ಯಾನಗಳಿಂದ ಭಕ್ತಿ ಮಾಡುವ ಭಕ್ತರಲ್ಲಿ ಶ್ರೇಷ್ಠರು ಶ್ರೀ ರಾಯರು!!ಶ್ರೀ ಮಡಕಶಿರ ಭೀಮದಾಸರು…ರಾಘ : ಅಹರಿ ತಾಳ : ಏಕಬೇಡುವೆ ನಿನ್ನ ಕೊಡು ವರವನ್ನ ।। ಪಲ್ಲವಿ ।।ಬೇಡುವ ಭಕ್ತರ ।ಬೀಡೋಳು ನಿನ್ನ । ಕೊಂ ।ಡಾಡುವೆ ರಥದೊಳ ।ಗಾಡುವೆ ವಿಭುವೆ ನಾ ।। ಚರಣ ।।ಇಂದ್ರನ ವಿಭವ । ಸು ।ಧೀಂದ್ರ ತನುಜ । ರಾಘ ।ವೇಂದ್ರ ಗುರುವೇ । ಕಮ ।ಲೇಂದ್ರನ ಕೃಪೆಯ ನಾ ।। ಚರಣ ।।ವರ ಭೀಮೇಶವಿಠಲ ।ನರಿಯದವರೊಳು । ನಾ ।ಪರನೆನುತಲಿ ನಿನ್ನ ।ಚರಣವ ಸ್ತುತಿಸಿ ನಾ ।। ಚರಣ ।।

Leave a comment