ಉಕ್ತೇಷು ಸಂನ್ಯಾಸೇಷು ಪರಮಹಂಸ ಸಂನ್ಯಾಸಮೇವ ಮುಖ್ಯಮಿತ್ಯಾಹುಃ, ಐತರೇಯ ಶ್ರುತಿಚೋದಿತ್ವಾತ್ । ತಥಾ ಚ ಶ್ರುತಿಃ –
ಅಥ ಪರಿವ್ರಾಡೇಕಶಾಟೀ ಪರಹಿತೋ ಮುಖೋದರಪಾತ್ರೋ ಅರಣ್ಯನಿಲಯೋ ಭಿಕ್ಷಾರ್ಥಂ ಗ್ರಾಮಂ ಪ್ರವಿಶೇತ ಆಸಾಯಂ ಪ್ರದಕ್ಷಿಣೇನಾವಿಚಿಕಿತ್ಸಾರ್ವವರ್ಣಿಕಂ ಭೈಕ್ಷಾಚರ್ಯಂ ಅಭಿಶಸ್ತಪತತಿವರ್ಜಂ ಅಯಜ್ಞೋಪವೀತೀ ಶೌಚಾನಿಷ್ಠಃ ಕಾಮಂ ಏಕಂ ವೈಣವಂ ದಂಡಮಾದದೀತ್ ಇತಿ ।।
ಸಂನ್ಯಾಸಗಳಲ್ಲಿ ” ಪರಮಹಂಸ ” ಸಂನ್ಯಾಸವೇ ಮುಖ್ಯ. ” ಐತರೇಯ ಶ್ರುತಿ ” ಯಲ್ಲಿ ” ಪರಮಹಂಸ ಸಂನ್ಯಾಸವೇ ಸ್ವೀಕರಿಸಲು ಅರ್ಹವಾದ ಉತ್ತಮವಾದ ಸಂನ್ಯಾಸ ” ವೆಂದು ಹೇಳಿರುವುದರಿಂದ ಪರಮಹಂಸ ಸಂನ್ಯಾಸವೇ ಮುಖ್ಯವೆಂದು ವಿಚಾರವಂತರು ನಿರ್ಧರಿಸಿದ್ದಾರೆ. ಈ ವಿಷಯವನ್ನು ಪ್ರತಿಪಾದಿಸುವ ಐತರೇಯ ಶ್ರುತಿಯು ” ಅಥ ಪರಿವ್ರಾಟ್ ” ಇತ್ಯಾದಿಯಾಗಿವೆ. ಈ ಶ್ರುತಿಯ ತಾತ್ಪರ್ಯವು ಹೀಗಿದೆ…
ಆನಂತರ ಪರಮಹಂಸ ಪರಿವ್ರಾಜಕ ಧರ್ಮವನ್ನು ಹೇಳುತ್ತೇವೆ ಎಂಬುದಾಗಿ ಐತರೇಯ ಶ್ರುತಿಯು ಪ್ರಾರಂಭವಾಗುತ್ತದೆ.
ಈ ಪರಮಹಂಸ ಪರಿವ್ರಾಜಕನನ್ನು ” ಪರಿವ್ರಾಟ್ ” ಎಂದು ಹೇಳುತ್ತಾರೆ. ” ಪರಿತ್ಯಜ್ಯ ಸರ್ವಂ ವ್ರಜತೀತಿ ಪರಿವ್ರಾಟ್ ” ಎಲ್ಲವನ್ನೂ ಬಿಟ್ಟು ಪರಮಾತ್ಮನ ಜ್ಞಾನಾರ್ಥವಾಗಿ ಸಂಚಾರ ಮಾಡುತ್ತಾ; ಆಸ್ತಿಕರಿಗೆ – ಭಕ್ತರಿಗೆ ಜ್ಞಾನೋಪದೇಶ ಮಾಡುವವನು ಪರಮಹಂಸ ಸಂನ್ಯಾಸಿಯು!
ಈ ಪರಮಹಂಸ ಸಂನ್ಯಾಸಿಯು ಒಂದು ಶಾಟಿಯನ್ನು ಮಾತ್ರ ಪರಿಗ್ರಹಿಸಬೇಕು.
ಕೌಪೀನ ಮತ್ತು ಶಾಟಿಯಲ್ಲದೇ ಮತ್ತಾವ ವಸ್ತ್ರವನ್ನೂ ಉಡಬಾರದು, ಧರಿಸಬಾರದು.
” ಪರಹಿತಃ ” –
ಪರಮಾತ್ಮನ ಪ್ರೀತ್ಯರ್ಥವಾಗಿ ಎಲ್ಲರಿಗೂ ಹಿತವನ್ನೇ ಬಯಸಬೇಹು ಮತ್ತು ಅಭಯವನ್ನು ಕೊಡಬೇಕು.
” ಮುಖೋದರಪಾತ್ರಃ ” –
ಸಂನ್ಯಾಸಿಯು ಮುಖ ಮತ್ತು ಹೊಟ್ಟೆಯೇ ಪಾತ್ರೆಯಾಗಿ ಉಳ್ಳವನಾಗಿರಬೇಕು.
ತಾನು ಅಡಿಗೆ ಮಾಡಬಾರದು.
ಪಾತ್ರೆಯಲ್ಲಿ ಊಟ ಮಾಡಬಾರದು.
ತಾನೂ ಬೇರೇ ಪಾತ್ರೆಗಳನ್ನು ಇಟ್ಟುಕೊಳ್ಳಬಾರದು.
” ಅರಣ್ಯನಿಲಯಃ ” –
ಸಂನ್ಯಾಸಿಯು ಆರಣ್ಯದಲ್ಲಿ ವಾಸಿಸಬೇಕು.
ನಿರ್ಜನ ಪ್ರದೇಶದಲ್ಲಿ ಸಂನ್ಯಾಸಿಯು ಏಕಾಂತ ಸ್ಥಳದಲ್ಲಿ ವಾಸಿಸುತ್ತಾ ಪರಮಾತ್ಮನ ಧ್ಯಾನ ಮಾಡುತ್ತಿರಬೇಕು.
ಜನ ಸಮುದಾಯದಲ್ಲಿ ಸೇರಿದರೆ ಬುದ್ಧಿ ಚಾಂಚಲ್ಯ ಉಂಟಾಗುವ ಸಂಭವವಿದೆ. ಆದ್ದರಿಂದ ಊರಿನ ಹೊರಗೆ ನಿರ್ಜನ ಪ್ರದೇಶದಲ್ಲಿ ವಾಸಿಸಬೇಕು.
” ಭಿಕ್ಶಾರ್ಥಂ ಗ್ರಾಮಂ ಪ್ರವಿಶೇತ್ ಆಸಾಯಂ ಪ್ರದಕ್ಷಿಣೇನ ” –
ಭಿಕ್ಷೆಗೋಸ್ಕರವಾಗಿ ಸಂನ್ಯಾಸಿಯು ಗ್ರಾಮಕ್ಕೆ ಬರಬಹುದು. ಮಧ್ಯಾಹ್ನದ ನಂತರ ಭಿಕ್ಷೆಗಾಗಿ ಗ್ರಾಮವನ್ನು ಪ್ರವೇಶಿಸಿ ಗ್ರಾಮದಲ್ಲಿ ಪ್ರದಕ್ಷಿಣೆಯಾಗಿ ಬಂದು ಭಿಕ್ಷೆಯನ್ನು ಸ್ವೀಕರಿಸಿ ಅನಂತರ ಗ್ರಾಮದಿಂದ ಹೊರಗೆ ತನ್ನ ವಾಸ ಸ್ಥಾನದ ಕಡೆಗೆ ಹೊರಟು ಹೋಗಬೇಕು.
ಸಾಯಂಕಾಲವಾದ ಮೇಲೆ ಸಂನ್ಯಾಸಿಯು ಊರಿನ ಒಳಗೆ ಇರಬಾರದು.
” ಅವಿಚಿಕಿತ ” –
ಯಾರಲ್ಲಿಯೂ ಸಂಶಯವನ್ನು ವ್ಯಕ್ತ ಪಡಿಸಬಾರದು. ಸಂನ್ಯಾಸಿಯು ತಾನು ಭಿಕ್ಷೆಗಾಗಿ ಗ್ರಾಮವನ್ನು ಪ್ರವೇಶಿಸಿದ ಮೇಲೆ ಇವರು ಒಳ್ಳೆಯವರೋ, ಕೆಟ್ಟವರೋ ಇತ್ಯಾದಿ ರೀತಿಯಾ ಸಂಶಯವನ್ನು ತಾಳಬಾರದು.
ಜನರ ಸ್ವಭಾವವನ್ನು ವಿಮರ್ಶಿಸಲು ಹೋಗಬಾರದು.
ಯಾರ ಗುಣ ದೋಷಗಳನ್ನೂ ವಿಮರ್ಶಿಸಬಾರದು.
ಭಿಕ್ಷಾಟನೆಗಾಗಿ ಬಂದಿರುವ ತನ್ನ ಕಾರ್ಯವನ್ನು ಪೂರೈಸಿಕೊಂಡು ಊರಿನಿಂದ ಹೊರಗೆ ಹೊರಟು ಹೋಗಬೇಕು!!
ಸಾರ್ವವರ್ಣಿಕಂ ಭೈಕ್ಷಾಚರ್ಯಂ ಅಭಿಶಸ್ತಪತಿತ ವರ್ಜಂ –
ಸಂನ್ಯಾಸಿಯು ಎಲ್ಲಾ ವರ್ಣದವರಲ್ಲಿಯೂ ಭಿಕ್ಷೆಯನ್ನು ಬೇಡಬಹುದು.
ಆದರೆ ದೋಷಾರೋಪಣೆಗೆ ಗುರಿಯಾದವರಲ್ಲಿಯೂ, ಮಹಾಪಾತಕ – ಉಪಪಾತಕ – ಕ್ಷುದ್ರಪಾತಕಾದಿಗಳಿಂದ ಕೂಡಿದವರಲ್ಲಿಯೂ ಭಿಕ್ಷೆಯನ್ನು ಬೇಡಲು ಹೋಗಬಾರದು.
ಸಂನ್ಯಾಸಿಯು ಎಲ್ಲಾ ವರ್ಣದವರಲ್ಲಿಯೂ ಭಿಕ್ಷೆಯನ್ನು ಬೇಡಬಹುದುಯೆಂದು ಹೇಳಿದ್ದರೂ ಅವನು ತನಗಿಂತ ಕೆಳಗಿನ ವರ್ಣದವರಲ್ಲಿ ಬೇಯಿಸಿದ ಪದಾರ್ಥಗಳನ್ನು ಬಿಕ್ಷೆಯಾಗಿ ಸ್ವೀಕರಿಸಬಾರದು.
ಹಸಿ ಪದಾರ್ಥಗಳನ್ನು ಭಿಕ್ಷೆಯಾಗಿ ಸ್ವೀಕರಿಸಿ ತನ್ನ ಗೃಹಸ್ಥ ಶಿಷ್ಯರಿಗೆ ಕೊಟ್ಟು ಅವರಿಂದ ಪಾಕ ಮಾಡಿಸಿ ತಾನು ಅವರಿಂದ ಭಿಕ್ಷಾ ರೂಪವಾಗಿ ಅದನ್ನು ಸ್ವೀಕರಿಸಬೇಕು.
ಅಪವಾದಗ್ರಸ್ತರೂ, ಪಾತಕಿಗಳೂ ಆದವರಲ್ಲಿ ಭಿಕ್ಷೆ ಬೇಡಬಾರದು.
” ಅಯಜ್ಞೋಪವೀತೀ ” –
ಸಂನ್ಯಾಸಿಯು ಯಜ್ಞೋಪವೀತವನ್ನು ಧರಿಸಬಾರದು.
ಶಿಖಾ ಯಜ್ಞೋಪವೀತ ಧಾರಣವು ಬ್ರಹ್ಮಚಾರಿ – ಗೃಹಸ್ಥ – ವಾನಪ್ರಸ್ಥರ ಧರ್ಮವು.
ಸಂನ್ಯಾಸಿಯು ಶಿಖೆಯನ್ನು ಧರಿಸಬಾರದು.
” ಶೌಚನಿಷ್ಠಃ ” –
ಸಂನ್ಯಾಸಿಯು ವಿಶೇಷವಾಗಿ ಒಳ ಹೊರಗಿನ ಶೌಚವನ್ನು ಖಡ್ಡಾಯವಾಗಿ ಆಚರಿಸಲೇಬೇಕು.
ಶೌಚಂ ತು ದ್ವಿವಿಧಂ ಪ್ರೋಕ್ತಂ ಬಾಹ್ಯಮಂತರಮೇವ ಚ ।
ಮೃಜ್ಜಲಾಭ್ಯಾಂ ಕೃತಂ ಬಾಹ್ಯಂ ಭಾವಶುದ್ಧಿಸ್ತಥಾಂತರಂ ।।
ಎಂಬ ವಚನಾನುಸಾರ ಶೌಚವು ಬಾಹಿ ಮತ್ತು ಅಂತರವೆಂದು ಎರಡು ವಿಧ.
ಮಣ್ಣು ಮತ್ತು ನೀರುಗಳಿಂದ ಮಾಡಿಕೊಳ್ಳುವ ಶುದ್ಧಿಯನ್ನು ” ಬಾಹ್ಯ ಶೌಚ ” ವೆಂದು ಹೇಳುತ್ತಾರೆ.
ಅಂತಃಕರಣದಲ್ಲಿ ಪಾಪಕರವಾದ ಆಲೋಚನೆಯನ್ನು ಬಿಟ್ಟು ಯಾವಾಗಲೂ ಭಗವಂತನ ಸ್ಮರಣೆಯನ್ನು ಮಾಡುತ್ತಿರುವುದು ” ಅಂತರಶೌಚ ” ವು.
ಈ ಎರಡನ್ನೂ ಸಂನ್ಯಾಸಿಯು ವಿಶೇಷವಾಗಿ ಆಚರಿಸಲೇಬೇಕು.
” ಕಾಮಂ ಏಕಮ್ ವೈಣವಂ ದಂಡಮಾದದೀತ ” –
ಎಲ್ಲಾ ಪರಿಗ್ರಹವನ್ನು ಬಿಟ್ಟಿದ್ದರೂ ಸಂನ್ಯಾಸಿಯು ಒಂದು ಬಿದಿರಿನ ದಂಡವನ್ನು ಮಾತ್ರ ಹಿಡಿದಿರಬಹುದು.
” ಕಾಷಾಯ ದಂಡ ಮಾತ್ರೇಣ ಯತಿಃ ಪೂಜ್ಯಃ ನ ಸಂಶಯಃ ” –
ಎಂಬ ವಚನದಂತೆ ಕಾವಿ ಬಟ್ಟೆ ಮತ್ತು ಬಿದಿರಿನ ದಂಡ ಇವೆರಡೂ ಸಂನ್ಯಾಸಿಯ ಮುಖ್ಯ ಲಕ್ಷಣಗಳಾದುದರಿಂದ ಎಲ್ಲಾ ಪರಿಗ್ರಹವನ್ನು ಬಿಟ್ಟಿರುವ ಸಂನ್ಯಾಸಿಯೂ ವೇಣುದಂಡವನ್ನು ಹಿಡಿಯಬೇಕು ಎಂದು ತಾತ್ಪರ್ಯ!!
” ಯತಿಗಳಿಗೆ ನಿಷಿದ್ಧ ಧರ್ಮಾಚರಣೆಗಳು ”
ಯತಿನಾಂ ನಿಷಿದ್ಧ ಧರ್ಮಾಚರಣೇ ದೋಷಮಾಹ ಸ ಏವ –
ಯಸ್ತು ಪ್ರವ್ರಜಿತೋ ಭೂತ್ವಾ ಪುನಃ ಸೇವೇತ ಮೈಥುನಂ ।
ಷಷ್ಟಿರ್ವರ್ಷ ಸಹಸ್ರಾಣಿ ವಿಷ್ಠಾಯಾಂ ಜಾಯತೇ ಕೃಮಿಃ ।।
ಕುರುತೇ ಯದಿ ಸಂನ್ಯಾಸೀ ತಸ್ಯ ಧರ್ಮೋ ವಿಹೀಯತೇ ।
ಶುಕ್ಲ ವಸ್ತ್ರಂ ಸ್ತ್ರೀಕಥಾ ಚ ಲೌಲ್ಯಂ ಯಾನಂ ಚ ನಿತ್ಯಶಃ ।।
ರಾತ್ರಾವನ್ನಂ ದಿವಾಸ್ವಾಪೋ ಯತೀನಾಂ ಪತನಾನಿ ಷಟ್ ।
ಏಕತ್ರ ಲೋಭತೋ ಭಿಕ್ಷುಃ ಪಾತ್ರಪೂರಣಮಿಚ್ಛತಿ ।।
ದಾತಾ ಸ್ವರ್ಗಮವಾಪ್ನೋತಿ ಭೋಕ್ತಾ ಕಿಲ್ಬಿಷಮಶ್ನುತೇ ।
ಅನ್ನದಾನಪರೋ ಭಿಕ್ಷುಶ್ಚತುರೋ ಹಂತಿ ದಾನತಃ ।।
ದಾತಾರಮನ್ನಮಾತ್ಮಾನಾಂ ಯಸ್ಮೈ ಚಾನ್ನಂ ಪ್ರಯಚ್ಛತಿ ।।
ಯತಿಗಳು ತಮಗೆ ವಿಹಿತವಾದ ಧರ್ಮವನ್ನು ಮಾತ್ರ ಆಚರಿಸಬೇಕು. ನಿಷಿದ್ಧವಾದ ಯಾವ ಧರ್ಮವನ್ನೂ ಆಚರಿಸಬಾರದು. ಯತಿಗಳು ನಿಷಿದ್ಧವಾದ ಧರ್ಮವನ್ನು ಆಚರಿಸಿದರೆ ದೋಷವನ್ನು ಶ್ರೀ ವ್ಯಾಸರೇ ಈ ರೀತಿ ಹೇಳುತ್ತಾರೆ…
” ಯಸ್ತು ಪ್ರವ್ರಜಿತೋ ಭೂತ್ವಾ ” ಇತ್ಯಾದಿ ಶ್ಲೋಕವು.
ಯಾವನಾದನೊಬ್ಬ ದ್ವಿಜನು ಒಂದುಬಾರಿ ಸಂನ್ಯಾಸವನ್ನು ಸ್ವೀಕರಿಸಿ ಅನಂತರ ಕಾಮದಿಂದ ಬುದ್ಧಿ ಚಾಂಚಲ್ಯವನ್ನು ಹೊಂದಿ ಸ್ತ್ರೀಯನ್ನು ಭೋಗಿಸಿದರೆ ಅವನಿಗೆ ಭಯಂಕರವಾದ ಅನರ್ಥವು ಕಾದಿರುತ್ತದೆ. ಅವನು 60000 ( ಅರವತ್ತು ಸಾವಿರ ) ವರ್ಷ ಪರ್ಯಂತರವಾಗಿ ಅಮೇಧ್ಯದಲ್ಲಿ ಕ್ರಿಮಿಯಾಗಿ ಹುಟ್ಟುತ್ತಾ ಇರುತ್ತಾನೆ. ಅತ್ಯಪ್ಲ್ಪವಾದ ಆಯುಷ್ಯವುಳ್ಲ ಕ್ರಿಮಿಯು ಅಮೇಧ್ಯದಲ್ಲಿಯೇ ಹುಟ್ಟಿ ಅಮೇಧ್ಯದಲ್ಲಿಯೇ ಸಾಯುತ್ತಾನೆ. ಅಂಥಾ ಹೀನ ಜನ್ಮ ಸಂನ್ಯಾಸಿಯಾದವನು ಹೊಂದುತ್ತಾನೆ.
ಸಂನ್ಯಾಸ ಧರ್ಮದಲ್ಲಿ ” ಮೈಥುನ ವರ್ಜನ ” ವು ಪ್ರಥಮ ಸ್ಥಾನವನ್ನು ಪಡೆದಿದೆ.
ಬಿಳೀ ವಸ್ತ್ರ ಉಡುವುದು ( ಶುಕ್ಲ ವಸ್ತ್ರಂ )
ಸ್ತ್ರೀ ವಿಷಯಕವಾದ ವಾರ್ತಾಲಾಪ ( ಸ್ತ್ರೀ ಕಥಾ ) ಅಂದರೆ ಪೂರ್ವಾಶ್ರಮ ಹೆಂಡತಿ ಬಗ್ಗೆ ಚಿಂತೆ ಮಾಡುವುದು / ಅವಳ ಬಗ್ಗೆ ಹೆಚ್ಚಿನ ಆಸಕ್ತಿ ತೋರುವುದು ಇದು ದೋಷ. ಆದ್ದರಿಂದ ಹೆಣ್ಣಿನ ಆಸೆ ಬಿಡಲೇಬೇಕು ಎಂದು ತಾತ್ಪರ್ಯ.
ಜಿಹ್ವಾ ಚಾಪಲ್ಯ ( ಲೌಲ್ಯಂ )
ಯಾನದಲ್ಲಿ ಯಾವಾಗಲೂ ಓಡಾಡುವುದು ಅಥವಾ ಯಾವಾಗಲೂ ತಿರುಗಾಡುತ್ತಾ ಇರುವುದು ( ನಿತ್ಯಶಃ ಯಾನಂ )
ರಾತ್ರಿ ಭೋಜನ ( ರಾತ್ರೌ ಅನ್ನಂ )
ಹಗಲು ನಿದ್ದೆ ( ದಿವಾಸ್ವಾಪಃ )
ಈ ಆರು ಯತಿಗಳಿಗೆ ಪತನಕ್ಕೆ ಕಾರಣವಾದ ದೋಷಗಳು. ಈ ಆರರಲ್ಲಿ ಯಾವುದಾದರೂ ಒಂದು ದೋಷವಿದ್ದರೂ ಆ ಯತಿಯು ವ್ರತಭ್ರಷ್ಟನಾಗುತ್ತಾನೆ.
” ಯತಿಧರ್ಮ ಪ್ರಕಾಶ ” ವು ಈ ಕೆಳಕಂಡ ಕರ್ತವ್ಯಗಳನ್ನು ಕಡ್ಡಾಯ ಮಾಡಿದೆ. ಅವುಗಳು…
ಆರೋಗ್ಯವಾಗಿ ದೇಹವಿದ್ದು, ದೇಹದಲ್ಲಿ ಯಾವುದೇ ನ್ಯೂನತೆ ಇರಬಾರದು.
ಸತ್ಯವನ್ನೇ ಮಾತಾಡಬೇಕು.
ಸತ್ಯ ಶಬ್ದವಾಚ್ಯನಾದ ಭಗವಂತನನ್ನು ರಹಸ್ಯದಿಂದ ಧ್ಯಾನ ಮಾಡಬೇಕು.
ಸರ್ವ ಸಂಗವನ್ನು ಬಿಟ್ಟು ಯತ್ಯಾಶ್ರಮ ಸ್ವೀಕಾರ ಮಾಡಿದವರು ತಮ್ಮ ಪೂರ್ವಾಶ್ರಮ ಸಂತತಿಯಿಂದ ದೂರವಾಗಿರಬೇಕು. ಕನಸಿನಲ್ಲಿಯೂ – ಮನಸಿನಲ್ಲಿಯೂ ತಮ್ಮ ಪೂರ್ವಾಶ್ರಮ ಸತಿ – ಸುತರ ಬಗ್ಗೆ ಆಲೊಚಿಸಬಾರದು. ಒಂದುವೇಳೆ ಅವರ ಬಗ್ಗೆ ಚಿಂತಿಸಿದಲ್ಲಿ ವ್ರತ ಭ್ರಷ್ಟರಾಗುತ್ತಾರೆ.
ಹಿತವಾಗಿ ಮಿತವಾಗಿ ಮತಾನಾಡಬೇಕು ಮತ್ತು ಎಲ್ಲರಿಗೂ ಆನಂದವನ್ನುಂಟು ಮಾಡುವ ಹಿತವಾದ ಕಾರ್ಯವನ್ನು ಮಾಡಬೇಕು.
ಜ್ಞಾನ ಮಾರ್ಗದಲ್ಲಿದ್ದು ಭಗವಂತನ ಗುಣಗಾನ ಮಾಡುತ್ತಾ ನಾಡಿನ ಜನರ ಹಿತವನ್ನು ಬಯಸುತ್ತಿರಬೇಕು.
ಏಕ ದಂಡಿಯಾಗಿ ಸರ್ವ ಸಂಗವನ್ನು ಪರಿತ್ಯಾಗ ಮಾಡಬೇಕು ಮತ್ತು ಜಗನ್ನಾಥನಾದ ಶ್ರೀ ಹರಿಯ ಚರಣದಲ್ಲೇ ಮನಸ್ಸಿಟ್ಟವನಾಗಿ ಬದುಕಬೇಕು.
ಜ್ನಾನಿಯಾದವನು ಸಂನ್ಯಾಸ ಸ್ವೀಕಾರಕ್ಕಿಂತ ಮೊದಲು ಶಿಖಾ ಸಮೇತವಾಗಿ ” ವಪನ ” ವನ್ನು ಮಾಡಿಸಬೇಕು.
ಯಜ್ಞೋಪವೀತವನ್ನೂ, ಇನ್ನಿತರ ಗೃಹಸ್ಥಾಶ್ರಮಕ್ಕೆ ಸಂಬಂಧ ಪಟ್ಟ ಸಣ್ಣ ಪುಟ್ಟ ವಸ್ತುಗಳನ್ನೂ ” ಸ್ವಾಹಾ ” ಎಂದು ಹೇಳುತ್ತಾ ನೀರಿನಲ್ಲಿ ತೇಲಿ ಬಿಡಬೇಕು.
ಅನಂತರ ಸರ್ವತ್ರ ವ್ಯಾಪ್ತನಾದ; ಸರ್ವ ನಿಯಾಮಕನಾದ, ತನಗೆ ಸ್ವಾಮಿಯಾದ ಶ್ರೀ ಹರಿಯನ್ನು ಶ್ರವಣ – ನಿಧಿ – ಧ್ಯಾಸನಗಳಿಂದ ಅನ್ವೇಷಿಸಬೇಕು. ಧ್ಯಾನಿಸಬೇಕು. ಅಪರೋಕ್ಷೀಕರಿಸಿಕೊಳ್ಳಬೇಕು.
ಸರ್ವ ವಿಧದಿಂದಲೂ ” ಅಕ್ಷರ ನಾಮಕನಾದ ಪರಬ್ರಹ್ಮವೇ ಸೂತ್ರವು ಯಜ್ಞ ಸೂತ್ರವು ” ಎಂಬುದಾಗಿ ತಿಳಿದು ಅದನ್ನು ಹೃದಯದಲ್ಲಿ ಒಳಗೆ ಧರಿಸಬೇಕು.