ಶ್ರೀ ಜಗನ್ನಾಥದಾಸರಾಯರ

ಒಮ್ಮೆ ಅಗ್ರಹಾರ ಬ್ರಾಹ್ಮಣರೊಬ್ಬರ ಮನೆಯಲ್ಲಿ ಪ್ರತಿಮಾರ್ಚನೆ ಏರ್ಪಾಡಾಗಿತ್ತು. ಅತ್ಯಂತ ಸಂಭ್ರಮದಿಂದ ಬಂಧು ಭಾಂಧವರೆಲ್ಲರೂ ಸೇರಿದ್ದರು. ಮನೆಯ ಯಜಮಾನನು ಪಂಡಿತೋತ್ತಮರಾದ ಶ್ರೀ ಶ್ರೀನಿವಾಸಾಚಾರ್ಯರನ್ನು ಕರೆಸಿ ಅವರ ಮುಖೇನ ಕುಲ ದೈವ ಪೂಜಾ ವಿಧಾನಗಳನ್ನು ನೆರವೇರಿಸುವಂತೆ ವಿಜ್ಞಾಪಿಸಿಕೊಂಡನು. ಅಂತೆಯೇ ಭಗವದಾರ್ಚನೆಯನ್ನುಆಚಾರ್ಯರು ಪ್ರಾರಂಭಿಸಿದರು.ನೂರಾರು ಜನರು ಸೇರಿದ್ದ ಈ ಸಮಾರಂಭಕ್ಕೆ, ತೀರ್ಥಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.ದುರಾಗ್ರಹಪೀಡಿತನಾದ ಅಡುಗೆಮಾಡಿತ್ತಿದ್ದವನು ಯಾರದೋ ಕುಯುಕ್ತಿಗೆ ಭ್ರಮೆಗೊಂಡು ದೇವರ ನೈವೇದ್ಯಕ್ಕೆ ತಯಾರಾಗಿದ್ದ ಪಾಯಸಭಕ್ಷದಲ್ಲಿ ಉಪ್ಪು ಮಿಶ್ರಣ ಮಾಡಿಬಿಟ್ಟನು.ಸಿದ್ಧವಾದ ಅಡುಗೆಯನ್ನು ದೇವರ ನೈವೇದ್ಯಕ್ಕೆ ತಂದು ಇಡಲಾಯಿತು. ತುಳಸೀದಳ ಹಾಗು ತೀರ್ಥವನ್ನು ಪ್ರೋಕ್ಷಿಸಿ ಅಚಾರ್ಯರು ಜಮಕ್ಕೆ ಕುಳಿತರು. ಧ್ಯಾನಾಸಕ್ತರಾದ ಅಚಾರ್ಯರು ನೈವೇದ್ಯ ಸಮರ್ಪಣೆಯನ್ನು ಹಿಂದುರಿಗಿಸಲೇ ಇಲ್ಲ. ಮನೆಯ ಯಜಮಾನನು ಅಚಾರ್ಯರಲ್ಲಿ ಬಂದು ಭೋಜನಕ್ಕೆ ತಡವಾಗುತ್ತಿದೆ ಎಂದ ಮೇಲೆ ಅಚಾರ್ಯರು ಬಂದವರಿಗೆಲ್ಲಾ ಭೋಜನವನ್ನು ಬಡಿಸುವಂತೆ ತಿಳಿಸಿದರು. ಬಂದಿದ್ದ ಜನರೆಲ್ಲಾ ಪರಮಾನ್ನವನ್ನುಂಡುತೃಪ್ತರಾಗಿ ಯಜಮಾನನನ್ನು ಹರಸಿ ಹೊರಟರು.ಆಶ್ಚರ್ಯಚಕಿತನಾದ ಅಡುಗೆಯವನು ಈ ಪವಾಡವನ್ನು ಕಂಡು ದಿಗ್ಭ್ರಮೆಗೊಂಡ. ತಾನು ಮಾಡಿದ ತಪ್ಪನ್ನು ಅರಿತು ಯಜಮಾನನಲ್ಲಿ ನಡೆದದೆಲ್ಲವನ್ನು ತಿಳಿಸಿದ. ಯಜಮಾನನು ತನ್ನಿಂದಾದಅಪಮಾನಕ್ಕೆ ಕ್ಷಮೆ ಕೇಳಲು ಆಚಾರ್ಯರಲ್ಲಿಗೆ ಬಂದಾಗ ಧ್ಯಾನದಿಂದ ಎದ್ದ ಅಚಾರ್ಯರು ಹೀಗೆ ಹೇಳಿದರು,”ನೈವೇದ್ಯಕ್ಕಿಟ್ಟಪಾಯಸದಲ್ಲಿದ್ದ ಉಪು ಬೆರೆಸಿದ್ದನ್ನು ನಾವು ಭಗವಂತನ ಅನುಗ್ರಹದಿಂದ ಅರಿತು, ಉಪ್ಪಿನಲ್ಲಿರುವ ಜನಾರ್ಧನರೂಪಿ ಭಗವಂತನನ್ನು ಪ್ರಾರ್ಥಿಸಿ, ಸಕ್ಕ್ರೆಯಲ್ಲಿರುವಕೇಶವರೂಪಿ ಭಗವಂತನ ಅನುಗ್ರಹಕ್ಕಾಗಿ ಪ್ರಾರ್ಥಿಸುತಲಿದ್ದೆ. ” ಆಚಾರ್ಯರು ಮಾಡುತ್ತಿದ್ದ ಜಪದ ಫಲವಾಗಿ ಪಾಯಸದಲ್ಲಿದ್ದ ಉಪ್ಪು ಸಕ್ಕರೆಯಾಗಿ ಬದಲಾಗಿತ್ತು.’ಆಶ್ಚರ್ಯತಮಃ’ ಭಗವಂತನಲ್ಲಿ ಇಂತಹ ಅಸಾಧಾರಣ ಚಿಂತನಾ ಕ್ರಮವನ್ನು ಕೈಗೂಡಿಸಿಕೊಂಡವರುಶ್ರೀ ಶ್ರೀನಿವಾಸಾಚಾರ್ಯರು. ಈ ಪರಿಯ ಉಪಾಸನೆಯನ್ನು ಅರಿತವರಿಂದ ಮಾತ್ರವೇ ಸಾಧ್ಯವಾದೀತು ಶ್ರೀ ಹರಿಕಥಾಮೃತಸಾರ ಎಂಬ ಶ್ರೀ ವಾದಿರಾಜರ ಕೋಶಕೊಪ್ಪುವ ಮೇರು ಕೃತಿ.ದಾಸರಾಯರ ಕಾರುಣ್ಯದಿಂದ, ಮಂತ್ರಾಲಯ ಪ್ರಭುಗಳ ಅನುಗ್ರಹದಿಂದ, ಶ್ರೀಮದ್ ಹನುಮ ಭೀಮ ಮಧ್ವವಾದಿರಾಜಾಂತರ್ಗತ ಶ್ರೀಲಕ್ಷ್ಮೀನಾರಸಿಂಹನ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀ ಜಗನ್ನಾಥದಾಸರಾಯರ ಆರಾಧನಾ ದಿನದಂದು ಅವರ ಅನುಗ್ರಹವನ್ನು ಬೇಡುತ್ತಾ ಭಗವದನುಗ್ರಹಕ್ಕೆ ಪಾತ್ರರಾಗೋಣ.

ಜಗನ್ನಾಥ ಅಬ್ಬೂರು ತೋಟಂತ್ತಿಲ್ಲಾಯ

Leave a comment